ಗಂಗಾನದಿ ತಟದಲ್ಲಿರುವ, ಬುಲಂದ್ ಶಹರ್ ವ್ಯಾಪ್ತಿಗೆ ಬರುವ ಈ ಸಣ್ಣ ಪಟ್ಟಣ ಆವಂತಿಕಾ ದೇವಿಯ ಮತ್ತು ಶಿವ ದೇವರ ಗುಡಿಗೆ ಹೆಸರುವಾಸಿ. ವರ್ಷದ ಎಲ್ಲಾ ದಿನಗಳಲ್ಲೂ ಈ ದೇವಾಲಯ ಭಕ್ತರನ್ನು ಆಕರ್ಷಿಸುತ್ತದೆ. ಅದರಲ್ಲೂ ಶಿವರಾತ್ರಿ ಮತ್ತು ನವರಾತ್ರಿಯ ಸಮಯದಲ್ಲಿ ಇನ್ನೂ ಹೆಚ್ಚಿನ ಭಕ್ತಾದಿಗಳನ್ನು ಆಕರ್ಷಿಸುತ್ತದೆ.
ಗಂಗಾನದಿ ತಟದಲ್ಲಿರುವ ಆಹಾರ್ ಪಟ್ಟಣ ಮಹಾಭಾರತದ ಕಾಲದ ಇತಿಹಾಸವನ್ನು ಹೊಂದಿದೆ. ಪುರಾಣ ಕಥೆಗಳ ಪ್ರಕಾರ ಇದೇ ಜಾಗದಲ್ಲಿ ದುರ್ಯೋಧನ ತನ್ನ ಮಲ ಸಹೋದರನಾಗಿರುವ ಭೀಮನಿಗೆ ವಿಷ ಉಣಿಸಿದ ಎನ್ನುವುದು. ಭೀಮನಿಗೆ ವಿಷ ಉಣಿಸಿ ಗಂಗಾನದಿಗೆ ಭೀಮನನ್ನು ಎಸೆದ, ಭೀಮನ ದೇಹ ಹರಿದುಕೊಂಡು ಇಲ್ಲಿಗೆ ಬಂತು ಎನ್ನುವುದು ಪುರಾಣದ ಪ್ರಕಾರದ ಕಥೆ. ಪಾತಾಳಕ್ಕೆ ಸೇರಿದ್ದ ಭೀಮನ ದೇಹವನ್ನು ನಾಗ ದೇವತೆ ತೆಗೆದು ವಿಷಮುಕ್ತನನ್ನಾಗಿ ಮಾಡಿ ಭೀಮನನ್ನು ಹಸ್ತಿನಾಪುರಕ್ಕೆ ತಲುಪಿಸಿದಳು ಎನ್ನುವುದು ಪುರಾಣ. ನಾಗವಂಶಿ ಕಾಲದ ಕೆಲವೊಂದು ನಾಣ್ಯಗಳು ಈಗಲೂ ಇಲ್ಲಿ ಲಭ್ಯವಿದೆ.