ಪುರಾಣದ ಕಥೆಗಳ ಪ್ರಕಾರ, ಅನುಪ್ ಶಹರ್ ಪ್ರದೇಶವನ್ನು ಬರ್ಗುಜಾರ್ ರಾಜಾ ಅನುಪ್ ರೈ 1605 ರಿಂದ 1628 ಮಧ್ಯೆ ಆವಿಷ್ಕರಿಸಿದ. ಈ ನಗರದ ಆವಿಷ್ಕಾರಕವನ್ನು ತಾಳೆ ಹಾಕಿದರೆ ಮೊಘಲರ ದೊರೆ ಜಹಾಂಗೀರ್ ಕಾಲಕ್ಕೆ ಹೋಲುತ್ತದೆ. ಇತಿಹಾಸದ ಪ್ರಕಾರ, ಅನುಪ್ ರೈ, ಒಂದೊಮ್ಮೆ ಹುಲಿಯಿಂದ ಸಾಮ್ರಾಟ ಜಹಾಂಗೀರನ ಪ್ರಾಣ ಉಳಿಸಿದ. ಇದರಿಂದ ಖುಷಿಗೊಂಡ ಸಾಮ್ರಾಟನು ಈ ಪ್ರದೇಶವನ್ನು ಕಟ್ಟಿ, ಕೋಟೆ ನಿರ್ಮಿಸಿ ಅನುಪ್ ರೈಗೆ ನೀಡಿದ. ತದನಂತರ ಅನುಪ್ ಶಹರ್, ಅನುಪ್ ರೈನ ಎಂಟನೇಯ ತಲೆಮಾರಿನ ತಾರಾಸಿಂಗ್ ರಾಜನ ಕಾಲದಲ್ಲಿ ಏಳಿಗೆಯನ್ನು ಕಂಡಿತು ಮತ್ತು ಆಯುರ್ವೇದಿಕ್ ಉಪಚಾರಕ್ಕೆ ಪ್ರಸಿದ್ಧಿಪಡೆಯಿತು.
ತದನಂತರ, ಸ್ವಾತಂತ್ರದ ಮೊದಲ ಯುದ್ದದಲ್ಲಿ, ಅನುಪ್ ಶಹರ್ ಮತ್ತೆ ಜಗತ್ಪ್ರಸಿದ್ದಿಯಾಯಿತು. ಈ ಪಟ್ಟಣವನ್ನು ಛೋಟಿ ಕಾಶಿ ಎಂದೂ ಕರೆಯುತ್ತಾರೆ. ಯಾಕೆಂದರೆ ಇದು ಗಂಗಾನದಿಯ ತಟದಲ್ಲಿದೆ ಮತ್ತು ಹಲವು ದೇವಾಲಯಗಳು, ಗೆಸ್ಟ್ ಹೌಸ್ ಗಳನ್ನು ಕಾಶಿಯನ್ನೇ ಹೋಲುವ ರೀತಿಯಲ್ಲಿ ನಿರ್ಮಿಸಲಾಗಿದೆ.