ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಂಡೆಯ ಮೇಲೆ ಅಮರಾವತಿಯೆಂಬ ಪುಟ್ಟ ಪಟ್ಟಣವಿದೆ. ಇಲ್ಲಿರುವ ಅಮರೇಶ್ವರ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಈ ಸ್ಥಳ ಗಮನ ಸೆಳೆಯುತ್ತದೆ. ಅಮರಾವತಿಯಲ್ಲಿರುವ ಬೌದ್ಧ ಸ್ತೂಪವೂ ಕೂಡ ಪ್ರಸಿದ್ದ. ಮೌರ್ಯ ಸಾಮ್ರಾಜ್ಯ ಸ್ಥಾಪನೆಗೂ ಮುಂಚೆ ಈ ಬೌದ್ಧ ಸ್ತೂಪವನ್ನು ಕಟ್ಟಲಾಗಿದೆ ಎಂಬ ನಂಬಿಕೆಯಿದೆ. ನಂತರ ಈ ಸ್ಥಳ ಧನ್ಯಕಟಕ ಅಥವಾ ಧರಣಿಕೋಟ ಎಂಬ ಹೆಸರು ಪಡೆದುಕೊಂಡಿತು. ಅಮರಾವತಿ ಆಂಧ್ರಪ್ರದೇಶವನ್ನು ಮೊದಲು ಆಳಿದ ಶಾತವಾಹನರ ರಾಜಧಾನಿಯಾಗಿತ್ತು.
ಶಾತವಾಹನರು 2 ಮತ್ತು 3 ನೇ ಶತಮಾನದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತಾರ ಮಾಡಿದರು. ಅಮರಾವತಿಯಲ್ಲಿ ಭಗವಾನ್ ಬುದ್ಧ ತಪಗೈದ ಮತ್ತು ಕಾಲಚಕ್ರ ಉತ್ಸವವನ್ನು ಕೈಗೊಂಡ. ಅಮರಾವತಿ 500 BCE ಗಿಂತಲೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ವಜ್ರಾಯಣ ಪುಸ್ತಕದಲ್ಲಿ ದಾಖಲೆಗಳಿವೆ. ಇಂದು, ಅಮರಾವತಿ ಸ್ತೂಪ ಮತ್ತು ಪುರಾತತ್ವ ಸಂಗ್ರಹಾಲಯಗಳಿಂದಾಗಿ ಪ್ರಸಿದ್ದ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪಕ್ಕದಲ್ಲಿಯೇ ಕೃಷ್ಣ ನದಿ ಹರಿಯುವುದರಿಂದ ಅಮರಾವತಿ ಸದ್ಯ ಸ್ಥಳಿಯರಿಗೆ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ವಿಹಾರತಾಣ.
ಪ್ರವಾಸಿ ಗಮ್ಯಸ್ಥಾನವಾಗಿರುವ ಅಮರಾವತಿ ಪಟ್ಟಣವನ್ನು ರೈಲು, ಬಸ್ಸು ಮತ್ತು ದೋಣಿಗಳ ಮೂಲಕ ಆರಾಮವಾಗಿ ತಲುಪಬಹುದು. ವಿಜಯವಾಡಾ ಜಿಲ್ಲೆಯಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ. ಆಂಧ್ರಪ್ರದೇಶದ ಬೇರೆ ಬೇರೆ ಜಿಲ್ಲೆಗಳಿಂದ ಸರ್ಕಾರಿ ಬಸ್ ಸೌಲಭ್ಯ ಬೇಕಾದಷ್ಟಿವೆ. ವಾತಾವರಣ ಪದೇ ಪದೇ ಬದಲಾಗುತ್ತಿದ್ದು ಬೇಸಿಗೆಯಲ್ಲಿ ಅತಿ ಉಷ್ಣತೆ ಮತ್ತು ಒಣಹವೆ, ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ. ಅಮರಾವತಿ ಪಟ್ಟಣ ತನ್ನೊಳಗೆ ಇತಿಹಾಸದ ಪದರವನ್ನು ಅವಿತಿಟ್ಟುಕೊಂಡಿರುವ ಕಾರಣಕ್ಕೆ ಕೇವಲ ಇತಿಹಾಸ ಪ್ರಿಯರಿಗೆ ಮಾತ್ರವಲ್ಲ ಅಧ್ಯಯನಶೀಲರಿಗೂ ಕೂಡ ನೆಚ್ಚಿನ ತಾಣವಾಗಿದೆ.