ಅಮರಾವತಿ ಸ್ತೂಪ ಅಥವಾ ಮಹಾಚೈತ್ಯ ಅಮರಾವತಿಯ ಮುಖ್ಯ ಆಕರ್ಷಣೆ. ಇದನ್ನು ಪ್ರಾರಂಭದಲ್ಲಿ ಕಟ್ಟಿಸಿದ್ದು ಬೌದ್ಧ ಮತದ ಅನುಯಾಯಿಯಾಗಿದ್ದ ಅಶೋಕ ದೊರೆ. ಈತ ನಂತರದ ದಿನಗಳಲ್ಲಿ ಬೌದ್ದ ಮತಕ್ಕೆ ಪರಿವರ್ತನೆ ಹೊಂದಿದ. ಸ್ತೂಪದ ನಿರ್ಮಾಣ ಮುಕ್ತಾಗೊಂಡದ್ದು 200 CE ವರ್ಷದಲ್ಲಿ. ಸ್ತೂಪದ ಒಳಭಾಗದಲ್ಲಿ ಬುದ್ದನ ಜೀವನ ಮತ್ತು ಶಿಕ್ಷಣದ ಚಿತ್ರಗಳನ್ನು ಕೆತ್ತಲಾಗಿದೆ. ಅಮರಾವತಿ ಶಾತವಾಹನರ ರಾಜಧಾನಿಯಾದ ಮೇಲೆ ಸ್ತೂಪವನ್ನು ಲೈಮ್ ಸ್ಟೋನ್ಗಳಿಂದ ಅಲಂಕರಿಸಲಾಯಿತು ಮತ್ತು ಸ್ವತಂತ್ರವಾಗಿ ನಿಂತ ಬುದ್ದನ ಮೂರ್ತಿಗಳನ್ನು ಕೆತ್ತಲಾಯಿತು. ಬೌದ್ಧ ಧರ್ಮದ ಅವನತಿಯ ನಂತರ ಈ ಸ್ತೂಪ ನಿರ್ಲಕ್ಷಕ್ಕೊಳಗಾಯಿತು ಮತ್ತು 1796 CE ವರ್ಷದಲ್ಲಿ ಕರ್ನಲ್ ಕೊಲಿನ್ ಮೆಕೆಂಜಿಯಿಂದ ಹೂತಿದ್ದ ಸ್ಥಿತಿಯಲ್ಲಿ ಪತ್ತೆಯಾಯಿತು. ಒಮ್ಮೆ ಭೂಶೋಧನ ಕಾರ್ಯ ಶುರುವಾದ ಮೇಲೆ ಸ್ತೂಪದ ಅವಿಭಾಜ್ಯ ಭಾಗಗಳಾಗಿದ್ದ ಹತ್ತಾರು ಕಲಾಕೃತಿಗಳು ಭೂಮಿಯಿಂದ ಹೊರೆತೆಗಯಲ್ಪಟ್ಟವು. ಇವತ್ತು, ಇಡೀ ದಕ್ಷಿಣ ಭಾರತದಲ್ಲಿಯೇ ಅಶೋಕನ ಸ್ಥಂಭಕ್ಕೆ ಉದಾಹರಣೆಯಾಗಿ ದೊರಕುವುದು ಇದೊಂದೇ ಸ್ತೂಪ.