ಗಾಂಧೀ ಆಶ್ರಮವು ಸಾಬರಮತಿ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಅದಕ್ಕಾಗಿ ಇದನ್ನು ಸಾಬರಮತಿ ಆಶ್ರಮ ಎಂದು ಸಹ ಕರೆಯುತ್ತಾರೆ. ಇದನ್ನು ಗಾಂಧೀಜಿಯವರು 1917ರಲ್ಲಿ ಸ್ಥಾಪಿಸಿದರು. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ಗುರುತಿಸಿಕೊಂಡಿರುವ ದಂಡಿ ಸತ್ಯಾಗ್ರಹವು ಆರಂಭಗೊಂಡಿದ್ದು ಇದೇ ಆಶ್ರಮದಲ್ಲಿ ಹಾಗಾಗಿ ಇದು...
ಸನಾತನ ಹಿಂದೂವಾದವನ್ನು ನಂಬುವ ಸ್ವಾಮಿ ನಾರಾಯಣ ಪಂಥದವರು ನಿರ್ಮಿಸಿರುವ ಈ ಅಕ್ಷರಧಾಮ್ ದೇವಾಲಯವು ಗುಲಾಬಿ ಬಣ್ಣದ ಮರಳುಗಲ್ಲುಗಳಿಂದ ನಿರ್ಮಾಣಗೊಂಡಿದ್ದು, ಈ ಪಂಥವನ್ನು ಸ್ಥಾಪಿಸಿದ ಸ್ವಾಮಿ ನಾರಾಯಣರ ವಿಗ್ರಹವನ್ನು ಹೊಂದಿದೆ. ಈ ದೇವಾಲಯದಲ್ಲಿ ನಾವು ಚಿನ್ನ ಲೇಪಿತ ಸ್ವಾಮಿ ನಾರಾಯಣರ ಮೂರ್ತಿಯ ಜೊತೆಗೆ ಅದರ ಎಡ ಬಲಗಳಲ್ಲಿ...
ಆನಂದಾನಂದ ಸ್ವಾಮಿಯವರ ಮುಂದಾಳತ್ವದಲ್ಲಿ ಬ್ರಿಟೀಷರ ಕಾಲದಲ್ಲಿ ಅಂದರೆ 1822ರಲ್ಲಿ ನಿರ್ಮಾಣಗೊಂಡ ಸ್ವಾಮಿ ನಾರಾಯಣ ದೇವಾಲಯವು ಒಂದು ಅದ್ಭುತವಾದ ದೇವಾಲಯವಾಗಿದೆ. ಸ್ವಾಮಿ ನಾರಾಯಣ ಪಂಥದವರಿಗೆ ಸೇರಿದ ಇದನ್ನು ಬರ್ಮಾ ತೇಗದ ಮರಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರಲ್ಲಿನ ಸುಂದರವಾದ ಕೆತ್ತನೆಗಳು ಹಾಗು ಅದರಲ್ಲಿ ಮೂಡಿಸಿರುವ...
ಕಂಕರಿಯ ಕೆರೆಯನ್ನು ಸುಲ್ತಾನ್- ಖುತುಬ್-ಉದ್-ದಿನ್ರವರ ಕಾಲದಲ್ಲಿ ನಿರ್ಮಿಸಲಾಯಿತು. ಇದರ ಕೆಳಭಾಗದಲ್ಲಿ ನಗಿನ ವಾಡಿ ಎಂಬ ದ್ವೀಪದಲ್ಲಿ ಬೇಸಿಗೆ ಅರಮನೆಯನ್ನು ನಿರ್ಮಿಸಲಾಗಿದೆ. ಈ ಅರಮನೆಯ ಸುತ್ತ ಒಂದು ಸುಂದರವಾದ ಉದ್ಯಾನವನವನ್ನು ನಾವು ಕಾಣಬಹುದು.
ಈ ಕೆರೆಯು ಇಂದು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಇಲ್ಲಿ...
ಜಾಮ ಮಸೀದಿಯು ಮೂಲತಃ ಮಹಾರಾಜರ ಖಾಸಗಿ ಉಪಯೋಗಕ್ಕೆ ನಿರ್ಮಾಣ ಮಾಡಲ್ಪಟ್ಟ ಮಸೀದಿಯಾಗಿದೆ. ಇದನ್ನು ಒಂದನೆ ಸುಲ್ತಾನ್ ಅಹಮದ್ ಶಾರವರ ಆಡಳಿತಾವಧಿಯಲ್ಲಿ, ಅಂದರೆ 1423ರಲ್ಲಿ ನಿರ್ಮಾಣ ಮಾಡಲಾಯಿತು. ಇದನ್ನು ಸ್ವತಃ ಅವರೆ ಉದ್ಘಾಟನೆ ಮಾಡಿದರು. ಕೆಂಪು ಮರಳುಗಲ್ಲಿನಿಂದ ನಿರ್ಮಾಣ ಮಾಡಲಾಗಿರುವ ಕಟ್ಟಡದ ಸಭಾಂಗಣವು ಅಮೃತಶಿಲೆಯಿಂದ...
ಶಾಹಿಬಾಗ್ನಲ್ಲಿರುವ ಈ ರಾಷ್ಟ್ರೀಯ ವಸ್ತು ಸಂಗ್ರಹಾಲಯವು 1618 ರಿಂದ 1622ರ ಅವಧಿಯಲ್ಲಿ ಶಹ ಜಹಾನ್ನಿಂದ ನಿರ್ಮಿತವಾದ ಮೋತಿ ಶಾಹಿ ಮಹಲ್ ಎಂಬ ಕಟ್ಟಡದಲ್ಲಿ ನೆಲೆಗೊಂಡಿದೆ. ಈ ಅರಮನೆಯು ಗುಜರಾತಿನ ರಾಜ್ಯಪಾಲರ ನಿವಾಸವಾಗಿ ಕಾರ್ಯ ನಿರ್ವಹಿಸುತ್ತಿದೆ. 1980ರಲ್ಲಿ ಇದರ ನೆಲಮಹಡಿಯನ್ನು ಸರ್ದಾರ್ ವಲ್ಲಭ ಭಾಯ್...
ಝೂಲ್ತಾ ಮಿನಾರವು ಅಲುಗಾಡುವ ಎರಡು ಮಿನಾರುಗಳಾಗಿವೆ. ಇದರಲ್ಲಿ ಒಂದು ಸಾರಂಗ್ಪುರ್ ದರ್ವಾಜಾದ ಎದುರುಗಡೆಯಿರುವ ಸಿಡಿ ಬಷಿರ್ ಮಸೀದಿಯಲ್ಲಿ ನೆಲೆಗೊಂಡಿದ್ದರೆ, ಮತ್ತೊಂದು ಅಹಮದಾಬಾದ್ ರೈಲು ನಿಲ್ದಾಣದ ಎದುರುಗಡೆಯಿರುವ ರಾಜ್ ಬಿಬಿ ಮಸೀದಿಯಲ್ಲಿ ನೆಲೆಗೊಂಡಿದೆ. ಈ ಮಿನಾರುಗಳ ವೈಶಿಷ್ಟ್ಯವೇನೆಂದರೆ ಈ ಮಿನಾರುಗಳಲ್ಲಿ...
ಈ ದೇವಾಲಯವನ್ನು ಜೈನರ ಹದಿನೈದನೆಯ ತೀರ್ಥಂಕರನಾದ ಧರ್ಮನಾಥರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಿರ್ಮಿಸಲು ಅಹಮದಾಬಾದ್ನ ಉದ್ಯಮಿ ಶೇಠ್ ಹುತೀಸಿಂಗ್ ಕೆಸ್ರಿಯವರು ಕ್ರಿ.ಶ. 1848ರಲ್ಲಿ 10 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದರು. ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಈ ದೇವಾಲಯವು ಸಾಲಟ್ ಸಮುದಾಯದವರ...
ಅಹಮಾದಾಬಾದ್ ನಗರವನ್ನು ಕ್ರಿ.ಶ. 1411ರಲ್ಲಿ ಅಹಮದ್ಶಾರವರು ಸ್ಥಾಪನೆ ಮಾಡಿದರು. ನಂತರ ಇದರ ರಕ್ಷಣೆಗಾಗಿ ಇವರ ಮೊಮ್ಮಗ ಮಹಮ್ಮದ್ ಬೆಗ್ಡ ಒಂದು ಗೋಡೆಯನ್ನು ನಿರ್ಮಿಸಿದನು. ಈ ಗೋಡೆಯು 10 ಕಿ.ಮೀ ವ್ಯಾಸವನ್ನು ಹೊಂದಿದೆ. ಇದಕ್ಕೆ 12 ದ್ವಾರಗಳನ್ನು, 189 ಬುರುಜುಗಳನ್ನು ಮತ್ತು ಕೋಟೆಯ ಮೇಲೆ 6,000 ಕೈಸಾಲೆಗಳನ್ನು...
ಈ ಮಸೀದಿಯನ್ನು 1573ರಲ್ಲಿ ನಿರ್ಮಿಸಲಾಯಿತು. ಇದು ಮೊಘಲರ ಕಾಲದಲ್ಲಿ ಅಹಮದಾಬಾದ್ನಲ್ಲಿ ನಿರ್ಮಾಣಗೊಂಡ ಕೊನೆಯ ಮಸೀದಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ.
ಈ ಮಸೀದಿಯ ಕಿಟಕಿಯಲ್ಲಿರುವ ಕಲ್ಲಿನ ಜಾಲಂಧ್ರವು ವಿಶ್ವಖ್ಯಾತಿಯನ್ನು ಪಡೆದಿದೆ. ಏಕೆಂದರೆ ಇದು ಅಹಮದಾಬಾದ್ ನಗರದ ಚಿಹ್ನೆಯನ್ನು ತನ್ನಲ್ಲಿ ಒಳಗೊಂಡಿದೆ....
ಮನೆಕ್ ಚೌಕ್ಗೆ ಸಂತ ಬಾಬಾ ಮನೆಕ್ ನಾಥ್ರವರ ಹೆಸರನ್ನು ಇಡಲಾಗಿದೆ. . 15ನೇ ಶತಮಾನದಲ್ಲಿ ಅಂದರೆ ಅಹಮದ್ ಶಾರವರು ಕೋಟೆಯನ್ನು ನಿರ್ಮಿಸುತ್ತಿರುವಾಗ ಈ ಸಂತರು ಅದಕ್ಕೆ ತಮ್ಮ ಅಲೌಕಿಕ ಶಕ್ತಿಯಿಂದ ಅಡ್ಡಿಯನ್ನುಂಟು ಮಾಡುತ್ತಿದ್ದರಂತೆ. ಹೇಗೆಂದರೆ ಬೆಳಗಿನ ಹೊತ್ತು ಕೋಟೆಯನ್ನು ಕಟ್ಟುವಾಗ ಇವರು ಒಂದು ಚಾಪೆಯನ್ನು...
ಚಳಿಗಾಲದಲ್ಲಿ ಮಧ್ಯ ಯೂರೋಪ್ ದೇಶಗಳಿಂದ ಆಹಾರ ಮತ್ತು ಬೆಚ್ಚನೆಯ ವಾತಾವರಣವನ್ನು ಹರಸಿ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತವೆ. ಇವುಗಳಲ್ಲಿ ಕಂದು ಮತ್ತು ಬಿಳಿಯ ವೇಡಿಂಗ್ ಪಕ್ಷಿಗಳು, ಕಪ್ಪು ಬಾಲದ ಗಾಡ್ವಿಟ್, ಸ್ಟಿಂಟ್ಗಳು, ಪ್ಲೊವರ್ಸ್ ಮತ್ತು ಸ್ಯಾಂಡ್ ಪೈಪರ್ ಪಕ್ಷಿಗಳನ್ನು ನಾವು ಕಾಣಬಹುದು. ಈ ಪಕ್ಷಿಗಳು...
ಮುಹುಡಿ ತೀರ್ಥವು ಜೈನರ ಅತ್ಯಂತ ಪವಿತ್ರವಾದ ತೀರ್ಥವಾಗಿದೆ. ಈ ಸ್ಥಳವನ್ನು ಮಧುಮತಿ ಎಂದು ಕರೆಯುತ್ತಿದ್ದರು. ಉತ್ಖನನದಲ್ಲಿ ದೊರೆತ ಸುಮಾರು 2000 ವರ್ಷಗಳ ಹಿಂದಿನ ಪಳೆಯುಳಿಕೆಗಳು ಇದರ ಅಸ್ತಿತ್ವವನ್ನು ಸಾರಿ ಹೇಳುತ್ತಿವೆ.
ಆಚಾರ್ಯದೇವ್ ಬುದ್ಧಿ ಸಗರ್ಸುರಿಶ್ವರ್ ಜೀಯವರು ತಮ್ಮ ತಪಸ್ಸು ಮುಗಿದ ನಂತರ ಈ ಮಂದಿರ...
ಮನೆಕ್ ಚೌಕದ ಪೂರ್ವ ಭಾಗಕ್ಕೆ ನೆಲೆಗೊಂಡಿದೆ ಈ ರಾಣಿಯರ ಮತ್ತು ರಾಜ ಮನೆತನದವರ ಸಮಾಧಿ ಸ್ಥಳ. "ರಾಣಿ ನೊ" ಎಂದರೆ ರಾಣಿ ಮತ್ತು " ಹಜಿರೊ" ಎಂದರೆ ಗೋರಿ ಎಂದರ್ಥ. ಈ ಗೋರಿಗೆ ಸಾಗುವ ಮಾರ್ಗವು ಹೆಂಗಸರ ಆಭರಣ ಮತ್ತು ಅವರ ಬಳಕೆಗಳ ವಸ್ತುಗಳ ಅಂಗಡಿಗಳಿಂದ ತುಂಬಿ ಹೋಗಿದೆ.
ಇದು ಮನೆಕ್ಚೌಕದ ಪಶ್ಚಿಮ ತುದಿಯಲ್ಲಿ ನೆಲೆಗೊಂಡಿದೆ. ಇದು ರಾಜ ಮನೆತನದವರ ಪುರುಷರ ಸಮಾಧಿಗಳನ್ನು ಹೊಂದಿರುವ ಸ್ಥಳವಾಗಿದೆ. ಇದರ ಹಾದಿಗುಂಟ ಕೆಲವು ಮಂತ್ರಿಗಳ ಸಮಾಧಿಗಳನ್ನು ಸಹ ನಾವು ಕಾಣಬಹುದು. ಈ ರುದ್ರಭೂಮಿಗೆ ಹೋಗುವಾಗ ಪುರುಷರು ತಮ್ಮ ತಲೆಗೆ ಬಟ್ಟೆಯನ್ನು ಸುತ್ತಿಕೊಳ್ಳಬೇಕು ಹಾಗು ಮಹಿಳೆಯರಿಗೆ ಇದರ ಒಳಕ್ಕೆ...