ಸನಾತನ ಹಿಂದೂವಾದವನ್ನು ನಂಬುವ ಸ್ವಾಮಿ ನಾರಾಯಣ ಪಂಥದವರು ನಿರ್ಮಿಸಿರುವ ಈ ಅಕ್ಷರಧಾಮ್ ದೇವಾಲಯವು ಗುಲಾಬಿ ಬಣ್ಣದ ಮರಳುಗಲ್ಲುಗಳಿಂದ ನಿರ್ಮಾಣಗೊಂಡಿದ್ದು, ಈ ಪಂಥವನ್ನು ಸ್ಥಾಪಿಸಿದ ಸ್ವಾಮಿ ನಾರಾಯಣರ ವಿಗ್ರಹವನ್ನು ಹೊಂದಿದೆ. ಈ ದೇವಾಲಯದಲ್ಲಿ ನಾವು ಚಿನ್ನ ಲೇಪಿತ ಸ್ವಾಮಿ ನಾರಾಯಣರ ಮೂರ್ತಿಯ ಜೊತೆಗೆ ಅದರ ಎಡ ಬಲಗಳಲ್ಲಿ ಸ್ವಾಮಿ ಗುನತಿತಾನಂದ ಮತ್ತು ಸ್ವಾಮಿ ಗೋಪಾಲನಂದರ ವಿಗ್ರಹಗಳನ್ನು ನಾವು ಕಾಣಬಹುದ್.
ಈ ದೇವಾಲಯವು ಮೂರು ಅಂತಸ್ತುಗಳನ್ನು ಹೊಂದಿದೆ. ಹರಿ ಮಂಟಪವು ಮೊದಲ ಅಂತಸ್ತಿನಲ್ಲಿದ್ದರೆ, ವಿಭೂತಿ ಮಂಟಪವು ಮೇಲಿನ ಅಂತಸ್ತಿನಲ್ಲಿದೆ. ಇನ್ನೂ ಕೆಳ ಅಥವಾ ನೆಲ ಮಹಡಿಯಲ್ಲಿ ಪ್ರಸಾದಿ ಮಂಟಪವನ್ನು ನಾವು ಕಾಣಬಹುದು. ಈ ದೇವಾಲಯವು 7 ಸ್ತಂಭಗಳನ್ನು, ಏಕಶಿಲೆಯಲ್ಲಿ ನಿರ್ಮಿಸಲಾದ 210 ತೊಲೆಗಳನ್ನು, 25 ಗುಮ್ಮಟಗಳನ್ನು ಮತ್ತು 8 ಝರೋಕಾಗಳನ್ನು ಹೊಂದಿದೆ. ಇಡೀ ಕಟ್ಟಡಕ್ಕೆ ಎಲ್ಲಿಯೂ ಸ್ವಲ್ಪ ಸಹ ಉಕ್ಕನ್ನು ಬಳಸಲಿಲ್ಲದಿರುವುದು ಇದರ ವಿಶೇಷ. ಕಲ್ಲುಗಳ ಮೇಲೆ ಹಲವಾರು ಕುಸುರಿ ಕೆಲಸಗಳನ್ನು ಮಾಡಲಾಗಿದೆ. ಅದರಲ್ಲೂ ತಂತಿಯಲ್ಲಿ ಮಾಡಿದ ಸೂಕ್ಷ್ಮ ಕುಸುರಿಗಳು ಗಮನ ಸೆಳೆಯುತ್ತವೆ.
ಸನಾತನ ಹಿಂದೂತ್ವಕ್ಕೆ ಸಂಬಂಧಿಸಿದ ಹಲವಾರು ಧ್ವನಿ ಮತ್ತು ಶಬ್ದದ ಪ್ರದರ್ಶನಗಳನ್ನು ನಾವಿಲ್ಲಿ ಕಾಣಬಹುದು. ಈ ಪ್ರದರ್ಶನದಲ್ಲಿ ನಾವು ವೇದಗಳು, ಪುರಾಣಗಳು ಮತ್ತು ಇನ್ನಿತರ ಹಿಂದೂ ಗ್ರಂಥಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. 356 ಸ್ತಂಭಗಳನ್ನು ಹೊಂದಿರುವ ಚಾವಡಿಯು ದೇವಾಲಯದ ಸುತ್ತ ಇದ್ದು, ಭಕ್ತಾಧಿಗಳು ಇದರಲ್ಲಿ ಪ್ರದಕ್ಷಿಣೆಯನ್ನು ಹಾಕಬಹುದು. ಇಲ್ಲಿ ಅಪ್ಪ್ಲೈಯಿಡ್ ರಿಸರ್ಚ್ ಇನ್ ಸೋಶಿಯಲ್ ಹಾರ್ಮೋನಿ ಸೆಂಟರ್ ಎಂಬ ಕೇಂದ್ರವಿದ್ದು, ಆಸಕ್ತರಿಗೆ ಸಂಶೋಧನಾ ಸಲಹೆ ಮತ್ತು ಮಾಹಿತಿಗಳನ್ನು ಒದಗಿಸುತ್ತಿದೆ.