ಶಾಹಿಬಾಗ್ನಲ್ಲಿರುವ ಈ ರಾಷ್ಟ್ರೀಯ ವಸ್ತು ಸಂಗ್ರಹಾಲಯವು 1618 ರಿಂದ 1622ರ ಅವಧಿಯಲ್ಲಿ ಶಹ ಜಹಾನ್ನಿಂದ ನಿರ್ಮಿತವಾದ ಮೋತಿ ಶಾಹಿ ಮಹಲ್ ಎಂಬ ಕಟ್ಟಡದಲ್ಲಿ ನೆಲೆಗೊಂಡಿದೆ. ಈ ಅರಮನೆಯು ಗುಜರಾತಿನ ರಾಜ್ಯಪಾಲರ ನಿವಾಸವಾಗಿ ಕಾರ್ಯ ನಿರ್ವಹಿಸುತ್ತಿದೆ. 1980ರಲ್ಲಿ ಇದರ ನೆಲಮಹಡಿಯನ್ನು ಸರ್ದಾರ್ ವಲ್ಲಭ ಭಾಯ್ ಪಟೇಲರ ಗೌರವಾರ್ಥವಾಗಿ ಪರಿವರ್ತಿಸಲಾಯಿತು. ಇಲ್ಲಿ ಪಟೇಲರಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು, ವೈಯುಕ್ತಿಕ ವಸ್ತುಗಳನ್ನು, ದಿನಪತ್ರಿಕೆಗಳ ಅಂಕಣಗಳನ್ನು, ಕಾರ್ಟೂನ್ಗಳನ್ನು ( ವ್ಯಂಗ್ಯ ಚಿತ್ರಗಳನ್ನು), ವ್ಯಕ್ತಿ ಚಿತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ.
ಈ ವಸ್ತು ಸಂಗ್ರಹಾಲಯ ಮುಖ್ಯ ದ್ವಾರದಲ್ಲಿ ಸರ್ದಾರ್ ಪಟೇಲರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇಲ್ಲಿನ ಒಂದು ಕೋಣೆಯನ್ನು ರವೀಂದ್ರನಾಥ್ ಟಾಗೂರರಿಗೆ ಸಮರ್ಪಿಸಲಾಗಿದೆ. ಅವರು ಹದಿನೇಳು ವರ್ಷದವರಾಗಿದ್ದಾಗ ಇಲ್ಲಿ ತಂಗಿದ್ದರಂತೆ. ಆಗ ಅವರು "ಖುದಿತೊ ಪಾಶನ್"( ಹಸಿದ ಕಲ್ಲುಗಳು) ಎಂಬ ಕತೆಯನ್ನು ಬರೆದಿದ್ದರಂತೆ. ಈ ಕೋಣೆಯಲ್ಲಿ ಟಾಗೂರರ ಪ್ರತಿಮೆ, ವ್ಯಕ್ತಿ ಚಿತ್ರ ಮತ್ತು ಬರವಣಿಗೆಗಳನ್ನು ಸಂಗ್ರಹಿಸಿ ಇಡಲಾಗಿದೆ.