ಅಗರ್ತಲಾವನ್ನು ಮಾಣಿಕ್ಯ ರಾಜರು ರಾಜಧಾನಿಯಾಗಿ ಆಯ್ಕೆ ಮಾಡಿದ ನಂತರ, ಅವರು ಸಮರ್ಪಕವಾಗಿ ನಗರವನ್ನು ನಿರ್ಮಿಸಿದರು. ಅಂತಹ ಒಂದು ಪ್ರಯತ್ನದಲ್ಲಿ ಯಶಸ್ವಿಯಾದ ದಿಗ್ಹಿ ಸರೋವರದ ದಡದಲ್ಲಿ ನಿರ್ಮಿಸಿದ ಜಗನ್ನಾಥ ದೇವಸ್ಥಾನವನ್ನು ಕಾಣಬಹುದು. ಇಲ್ಲಿನ ಜಗನ್ನಾಥ ವಿಗ್ರಹ ಅಥವಾ ನೀಲಮಾಧವ ವಿಗ್ರಹವನ್ನು ಪ್ರಸಿದ್ಧವಾದ ಪುರಿ ಜಗನ್ನಾಥ ದೇವಸ್ಥಾನದಿಂದ ದಾನವಾಗಿ ನೀಡಲಾಗಿದೆ ಎಂದು ನಂಬಲಾಗಿದೆ.
ಇಂದು ರಾಷ್ಟ್ರೀಯ ಪರಂಪರೆಯಾಗಿರುವ ದೇವಸ್ಥಾನ, ವಿನ್ಯಾಸದಲ್ಲಿ ಇಸ್ಲಾಮಿಕ್ ಪ್ರಭಾವ ಹೊಂದಿದ್ದು, ಸುಂದರವಾಗಿ ಕಟ್ಟಲಾಗಿದೆ. ಕಮಾನಿನ ಛಾವಣಿಯ ಜೊತೆಗೆ ದೇವಾಲಯದ ಮೇಲ್ಭಾಗದಲ್ಲಿ ಒಂದು ಗುಮ್ಮಟವನ್ನು ಹೊಂದಿದೆ. 'ಶಿಖರ' ಎಂದು ಕರೆಯಲ್ಪಡುವ ಕಿತ್ತಳೆ ಬಣ್ಣದ ನಾಲ್ಕು ಮಹಡಿಯ ಗೋಪುರ ಒಂದು ಅಷ್ಟಭುಜಾಕೃತಿಯ ಪೀಠದ ಮೇಲ್ಭಾಗದಲ್ಲಿದೆ ಮತ್ತು ಈ ದೇವಾಲಯದ ಗಮನಾರ್ಹ ಲಕ್ಷಣಗಳಲ್ಲಿ ಒಂದಾಗಿದೆ.
ದೇವಾಲಯಲ್ಲಿ ಹೇಮಾಡ್ಪಂಥಿ ಮತ್ತು ಅರೇಬಿಕ್ ಶೈಲಿಯ ಒಂದು ಸಂಗಮವನ್ನು ನೋಡಬಹುದು. ಆದಾಗ್ಯೂ, ಒಳಾಂಗಣದಲ್ಲಿ, ಭಗವಾನ್ ಕೃಷ್ಣನ ಕಥೆಗಳನ್ನು ಚಿತ್ರಿಸುವ ಹಿಂದೂ ಕೊಡುಗೆಯನ್ನು, ಖಂಬಗಳು ಮತ್ತು ಗೋಡೆಗಳಲ್ಲಿ ಕಾಣಬಹುದು.


Click it and Unblock the Notifications