ವೇಣುಬಾನ್/ಬನ್ ಬುದ್ಧ ವಿಹಾರ, ಬುದ್ಧ ದೇವಾಲಯವಾಗಿದ್ದು ಅಗರ್ತಲಾ ನಗರ ಕೇಂದ್ರದಿಂದ 2 ಕಿಲೋಮೀಟರ್ ದೂರದಲ್ಲಿದೆ. ಇದು ಈ ಪ್ರದೇಶದಲ್ಲಿರುವ ಪ್ರಸಿದ್ಧ ಬುದ್ಧ ದೇವಾಲಯ ಮತ್ತು ಸಂಪೂರ್ಣವಾಗಿ ಲೋಹದಿಂದ ಮಾಡಲ್ಪಟ್ಟ ಒಂದು ಬುದ್ಧನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಸಿದ್ಧ ಆರಾಧ್ಯ ವಿಗ್ರಹವನ್ನು ಮಯನ್ಮಾರ್ ನಲ್ಲಿ ಮಾಡಿ ನಂತರ ಪ್ರಸ್ತುತ ಸ್ಥಳಕ್ಕೆ ಸಾಗಿಸಲಾಯಿತು ಎಂದು ನಂಬಲಾಗಿದೆ.
ವೇಣುಬಾನ್ ಬುದ್ಧ ವಿಹಾರ, ಬುದ್ಧನ ಜನನ, ಜ್ಞಾನೋದಯ ಮತ್ತು ಭಗವಾನ್ ಬುದ್ಧನ ಸಾವನ್ನು ಒಳಗೊಂಡಿರುವ ಬುದ್ಧ ಪೂರ್ಣಿಮಾ ದಿನವನ್ನು ದೇವಾಲಯದಲ್ಲಿ ಹೆಚ್ಚು ಹುಮ್ಮಸ್ಸಿನೊಂದಿಗೆ ಆಚರಿಸಲಾಗುತ್ತದೆ. ದೇವಾಲಯವನ್ನು ವರ್ಣರಂಜಿತ ಫಲಕಗಳಿಂದ ಅಲಂಕರಿಸಲಾಗುತ್ತದೆ. ಮತ್ತು ಈ ಆಚರಣೆ ಉತ್ಸವದಂತಿರುತ್ತದೆ. ನಗರ ಮತ್ತು ಇತರ ಸ್ಥಳಗಳಿಂದ ಅನೇಕ ಜನರು ವೇಣುಬಾನ್ ಬುದ್ಧ ವಿಹಾರಕ್ಕೆ ಈ ಸಂದರ್ಭದಲ್ಲಿ ಭೇಟಿ ನೀಡುತ್ತಾರೆ.
ವೇಣುಬಾನ್ ವಿಹಾರ, ಭಾರತದ ಪ್ರಮುಖ ಬುದ್ಧ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಈ ದೇವಾಲಯ ಬೌದ್ಧರು ಮತ್ತು ಭಗವಾನ್ ಬುದ್ಧನ ಅನುಯಾಯಿಗಳ ಸುಪರ್ದಿಯಲ್ಲಿದೆ. ಬಲವಾದ ಧಾರ್ಮಿಕ ಮಹತ್ವ ಹೊಂದಿರುವುದರ ಹೊರತಾಗಿ ದೇವಾಲಯ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.