ಗ್ಯಾರಸ್ಪುರದಲ್ಲಿ ಪುರಾತನವಾದ ದೇವಾಲಯದ ಸಮೀಪ ಒಂದು ಅದ್ಭುತ ಶಿಲಾಕೆತ್ತನೆ ಇದೆ. ಇದೇ ಹಿಂದೋಳ ತೋರಣ. ಹಿಂದೋಳ ಎಂದರೆ ನೇತಾಡುವಂತೆ ಮಾಡುವುದು ಮತ್ತು ತೋರಣ ಎಂದರೆ ಮುಂಬಾಗಿಲಿಗೆ ಕಟ್ಟಿರುವಂತದ್ದು ಎಂದರ್ಥ. ಇದನ್ನು ಹೀಗೆ ಕರೆಯಲು ಕಾರಣವೇನೆಂದರೆ ಇದು ಹಿಂದೆ ಇಂದು ಪಾಳುಬಿದ್ದಿರುವ ದೇಗುಲಕ್ಕೆ ಪ್ರವೇಶದ್ವಾರವಾಗಿತ್ತು.
ಇದಕ್ಕೆ ಎರಡು ಕಂಬಗಳು ಮತ್ತು ಅದರ ಮೇಲೆ ಒಂದು ಅಡ್ಡತೊಲೆ ಇದೆ. ಕೆತ್ತನೆಯನ್ನು ಒಳಗೊಂಡ ತೊಲೆಯೊಂದು ಎರಡು ಕಂಬಗಳನ್ನು ಸೇರಿಸುತ್ತದೆ. ಎರಡು ತೊಲೆಗಳ ಮೇಲೂ ಕೆತ್ತನೆಗಳನ್ನು ಕಾಣಬಹುದು. ಕಂಬಗಳ ಪಾರ್ಶದಲ್ಲಿ ದಶಾವತಾರದ ಕೆತ್ತನೆಗಳನ್ನು ಕಾಣಬಹುದು. ಕಂಬಗಳ ಮೇಲೆ ಬೌದ್ಧರ ಸೂರ್ಯ ಕಿಂಡಿಯನ್ನು ಕೂಡ ಕೆತ್ತಲಾಗಿದೆ. ಇದೊಂದು ಬೌದ್ಧ ಮತ್ತು ಹಿಂದೂ ಲಕ್ಷಣಗಳ ವಿಶಿಷ್ಟ ಸಮ್ಮಿಲನ.