ಈ ಮಂದಿರವು, ಇಲ್ಲಿರುವ ವಿವಿಧ ಬಗೆಯ ಶಿವಲಿಂಗಗಳಿಗೆ ಪ್ರಸಿದ್ಧ ಪಡೆದಿದೆ.
ವಲ್ಸಾದ್ ಜಿಲ್ಲೆಯ ಜನಗಣತಿ ಪಟ್ಟಣವೇ ಪರ್ನೇರ. ಈ ಪಟ್ಟಣದ ಹತ್ತಿರವೇ ಪರ್ನೇರ ಬೆಟ್ಟಗಳು ಉಪಸ್ಥಿತವಿವೆ. ಇದು ಜನಪ್ರಿಯ ಹಿಲ್ ಸ್ಟೇಷನ್ ಆಗಿದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಈ ಬೆಟ್ಟದ ಮೇಲೆ ವಿಶೇಷವಾದ ಜಾತ್ರೆಯನ್ನು ಏರ್ಪಡಿಸಲಾಗುತ್ತದೆ.
ಪರ್ನೇರ ಬೆಟ್ಟದ ಮೇಲೆ ಈ ಕೋಟೆಯನ್ನು ಕಟ್ಟಿಸಿದ್ದು ಮರಾಠಾ ರಾಜ್ಯದ ಸಂಸ್ಥಾಪಕನಾದ ಛತ್ರಪತಿ ಶಿವಾಜಿ ಮಹಾರಾಜ್. ಈತ ತಾನು ಕಟ್ಟಿಸಿದ ಕೋಟೆಗಳಿಗೆ ಪ್ರಸಿದ್ಧಿ ಪಡೆದಿದ್ದು, ತನ್ನ ಕೊನೆಗಾಲದಲ್ಲಿ 300 ಕೋಟೆಗಳಿಗೆ ಒಡೆಯನಾಗಿದ್ದ.
ಗುಜರಾತಿನ ನವಸರಿ ಎಂಬ ನಗರದ ಸಮೀಪದಲ್ಲಿ ದಂಡಿ ಎಂಬ ಸಣ್ಣ ಹಳ್ಳಿ ಉಪಸ್ಥಿತವಿದೆ. ಇದು ಮಹಾತ್ಮಾ ಗಾಂಧಿಯವರು ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಮಾರ್ಚ್ ಕೈಗೊಂಡ ಪ್ರಸಿದ್ಧ ಐತಿಹಾಸಿಕ ನಗರ.1930ನೇ ಇಸವಿಯಲ್ಲಿ ಮಹಾತ್ಮಾ ಗಾಂಧಿಯವರು ದಂಡುಗಳ ಸಂಗಡ ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ಪ್ರತಿಭಟಿಸಲು ಅಹಮದಾಬಾದಿನಿಂದ...
ವಲ್ಸಾದ್ ಜಿಲ್ಲೆಯಲ್ಲಿ, ಸಂಜನ್ ಎಂಬುದು ಒಂದು ಸಣ್ಣ ಪಟ್ಟಣ ಮತ್ತು ಪಾರ್ಸಿಗಳು ನೆಲೆಸಿರುವಂಥಹ ಸ್ಥಳ. ಜೊರಾಸ್ಟ್ರಿಯನ್ ಆಶ್ರಯಾರ್ಥಿಗಳು, ಇರಾನ್ ನಿಂದ ಪಲಾಯನ ಮಾಡಿದಾಗ ಭಾರತದ ಗುಜರಾತ್ ಗೆ ಬಂದು ಸಂಜನ್ ಎಂಬ ಪಟ್ಟಣವನ್ನು ಸ್ಥಾಪಿಸಿ ಅಲ್ಲಿಯೇ ನೆಲೆಸಿದರು. ಪ್ರಸ್ತುತ ವಾಸಿಸುತ್ತಿರುವ ಪಾರ್ಸಿಗಳು, ಈ ಜೊರಾಸ್ಟ್ರಿಯನ್...