ಸಜ್ಜನಗಢವನ್ನು ಮಳೆಗಾಲದ ಅರಮನೆ ಎಂದೂ ಕರೆಯುತ್ತಾರೆ. ಉದಯಪುರದಲ್ಲೇ ಇದೊಂದು ಅದ್ಭುತವಾದ ಕಟ್ಟಡ. ಸಮುದ್ರ ಮಟ್ಟದಿಂದ ಸುಮಾರು 944 ಮೀಟರಿನಷ್ಟು ಎತ್ತರದಲ್ಲಿದ್ದು, ಅರಾವಳಿ ಶ್ರೇಣಿಯ ಬನ್ಸ್ದಾರಾ ಪೀಕ್ನಲ್ಲಿದೆ. ಮೇವಾರ ರಾಜ್ಯದ ರಾಜ ಮಹಾರಾಣ ಸಜ್ಜನ ಸಿಂಗ್ 1884ರಲ್ಲಿ ಇಲ್ಲಿಂದ ಮಳೆಗಾಲದಲ್ಲಿ ಮೋಡಗಳನ್ನು ನೋಡುತ್ತಿದ್ದರಂತೆ.
ಈ ಸುಂದರ ಅರಮನೆಯನ್ನು ಬಿಳಿ ಮಾರ್ಬಲ್ಗಳಿಂದ ಕಟ್ಟಲಾಗಿದೆ. ಪ್ರವಾಸಿಗರು ಪಿಚೋಲಾ ಕೆರೆಯ ಸುಂದರ ದೃಶ್ಯಗಳನ್ನು ಈ ಪ್ರದೇಶದಿಂದ ವೀಕ್ಷಿಸಬಹುದು. ಅರಮನೆಗೆ ಬೆಂಬಲವಾಗಿ ನಿಂತಿರುವ ಕಂಬಗಳನ್ನು ಸುಂದರವಾಗಿ ಅಲಂಕರಿಸಲಾಗಿದೆ. ಈ ಕಂಬಗಳ ಮೇಲೆ ಹೂವುಗಳು ಮತ್ತು ಎಲೆಗಳನ್ನು ಚಿತ್ರಿಸಲಾಗಿದೆ.
ಒಂಭತ್ತು ಮಳಿಗೆಯ ಕಟ್ಟಡದಲ್ಲಿ ತಾರಾಲಯವೊಂದಿದ್ದು ಇಲ್ಲಿ ಮಳೆಗಾಲದಲ್ಲಿ ಮೋಡಗಳ ಚಲನೆಯನ್ನು ರಾಜ ನೋಡುವುದಕ್ಕೆ ಉಪಯೋಗಿಸುತ್ತಿದ್ದ. ಆದರೆ ರಾಜ ಅಕಾಲ ಮರಣದಿಂದಾಗಿ ಈ ಅರಮನೆಯ ಕಟ್ಟೋಣ ಸಂಪೂರ್ಣವಾಗಿಲ್ಲ. ನಂತರದಲ್ಲಿ, ಈತನ ಉತ್ತರಾಧಿಕಾರಿಯಾದ ಮಹಾರಾಣ ಫತೇಹ್ ಸಿಂಗ್ ಅರಮನೆಯನ್ನು ಸಂಪೂರ್ಣವಾಗಿಸಿದೆ.