ಫತೇಹ್ ಸಾಗರವು 1678ರಲ್ಲಿ ಮಹಾರಾಣ ಫತೇಹ್ ಸಿಂಗ್ರಿಂದ ನಿರ್ಮಿಸಲ್ಪಟ್ಟ ಸುಂದರವಾದ ಕೆರೆ. ಉದಯಪುರದ ನಾಲ್ಕು ಕೆರೆಗಳಲ್ಲಿ ಇದೂ ಒಂದು. ಈ ಕೆರೆ ನಗರದ ಹೆಮ್ಮೆ ಎಂದೇ ಪರಿಗಣಿತವಾಗಿದೆ. ಸುಂದರವಾದ ನೀಲಿ ವರ್ಣದ ನೀರು, ಸುತ್ತಲಿನ ಹಸಿರು ಪರಿಸರದಿಂದಾಗಿ ಈ ಪ್ರದೇಶಕ್ಕೆ ಎರಡನೇ ಕಾಶ್ಮೀರ ಎಂದು ಇಲ್ಲಿನವರು ಕರೆಯುತ್ತಾರೆ. ಈ ಕೆರೆಯ ಮಧ್ಯೆ ಮೂರು ಸಣ್ಣ ಸಣ್ಣ ದ್ವೀಪಗಳಿವೆ.
ಈ ಕೆರೆಗೆ ಅಡಿಗಲ್ಲು ಹಾಕಿದ್ದು ವಿಕ್ಟೋರಿಯಾ ರಾಣಿಯ ಪುತ್ರ ಡ್ಯೂಕ್ ಆಫ್ ಕಾನ್ನಾಟ್. ಇದು ಪಿಚೋಲಾ ಕೆರೆ ಮತ್ತು ರಂಗ ಸಾಗರ ಕೆರೆ ನಾಲೆಯ ಮೂಲಕ ಸಂಪರ್ಕವನ್ನು ಹೊಂದಿದೆ. ರಾಮ ಪ್ರತಾಪ ಅರಮನೆಯು ಫತೇಹ್ ಸಾಗರ ಕೆರೆಯ ದಡದಲ್ಲಿದೆ. ಪ್ರವಾಸಿಗರು ಬಸ್ ಸೇವೆಗಳನ್ನು, ಟ್ಯಾಕ್ಸಿಗಳನ್ನು, ಆಟೋಗಳನ್ನು ಮತ್ತು ಟಾಂಗಾಗಳನ್ನು ಬಾಡಿಗೆಗೆ ಪಡೆದು ಇಲ್ಲಿಗೆ ತಲುಪಬಹುದು.