ತುಳಜಾ ಭವಾನಿ ಮಂದಿರವು ತುಳಜಾಪುರ ಎಂಬ ಸಣ್ಣ ಗ್ರಾಮದಲ್ಲಿ ನೆಲೆಸಿದೆ. ಈ ಮಂದಿರವು ಭಾರತದ 51 ಶಕ್ತಿ ಪೀಠಗಳಲ್ಲಿ ಒಂದೆಂದು ಖ್ಯಾತಿ ಪಡೆದಿದೆ. ಈ ದೇವಾಲಯವು 12 ನೆ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಆ ಕಾಲದ ವಾಸ್ತುಶಿಲ್ಪಕ್ಕೆ ಒಂದು ನಿದರ್ಶನವಾಗಿ ನಿಂತಿದೆ.
ಈ ಮಂದಿರವನ್ನು ಶಕ್ತಿದೇವತೆಯಾದ ತುಳಜಾ ಭವಾನಿ...
ಘಟ್ ಶಿಲಾ ದೇವಾಲಯವು ರಾಮನಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಇದು ತುಳಜಾಪುರ ನಗರದಲ್ಲಿರುವ ಪ್ರಾಚೀನ ದೇವಾಲಯವಾಗಿದೆ. ಈ ದೇವಾಲಯವು ಕುತೂಹಲಕರವಾದ ಪೌರಾಣಿಕ ಮಹತ್ವದ ಹಿನ್ನಲೆಯನ್ನು ಹೊಂದಿದೆ.
ನಂಬಿಕೆಗಳ ಪ್ರಕಾರ ಸೀತಾದೇವಿಯು ಅಪಹರಣಕ್ಕೆ ಒಳಗಾಗಿ ಲಂಕೆಯಲ್ಲಿದ್ದಾಗ ಶ್ರೀ ರಾಮನು ತನ್ನ ಸೋದರ ಲಕ್ಷ್ಮಣನ ಜೊತೆ...
ವಿಷ್ಣು ತೀರ್ಥವು ತುಳಜಾ ಭವಾನಿ ದೇವಾಲಯದ ಈಶಾನ್ಯ ಭಾಗದಲ್ಲಿದೆ. ಈ ತೀರ್ಥಕ್ಕೆ ಮೂರು ದ್ವಾರಗಳಿವೆ.
ಇದು ಕಲ್ಲೋಲ ತೀರ್ಥವನ್ನು ಹೋಲುವಂತಿದೆ ಮತ್ತು ಇಲ್ಲಿಯು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಕೂಡುತ್ತವೆಯೆಂದು ನಂಬಲಾಗುತ್ತದೆ. ಕಲ್ಲಿನ ಮೆಟ್ಟಿಲುಗಳು ಈ ತೀರ್ಥದಿಂದ ಮುಖ್ಯ ದೇವಾಲಯಕ್ಕೆ ಸಂಪರ್ಕವನ್ನು...
ಕಲ್ಲೋಲ ತೀರ್ಥ ಕಲ್ಯಾಣಿಯು ಒಂದು ದೊಡ್ಡ ಕಲ್ಯಾಣಿಯಾಗಿದ್ದು ತುಳಜಾಪುರ ದೇವಾಲಯದ ಮೊದಲ ಹಂತದ ಪ್ರಕಾರದಲ್ಲಿ ನೆಲೆಸಿದೆ. ಈ ಕಲ್ಯಾಣಿಯು 40 x 20 ಅಡಿ ಅಳತೆಯನ್ನು ಹೊಂದಿದೆ. ಇದರ ಸುತ್ತಲು ಗೋಡೆಯನ್ನು ನಿರ್ಮಿಸಲಾಗಿದೆ.
ದಂತಕಥೆಗಳ ಪ್ರಕಾರ ಬ್ರಹ್ಮ ದೇವನ ಆಹ್ವಾನದ ಮೇರೆಗೆ ಈ ಕಲ್ಯಾಣಿಯಲ್ಲಿ ಪವಿತ್ರ ನದಿಗಳಾದ ಗಂಗಾ ,...
ಪಾಪನಾಶಿ ತೀರ್ಥವು ತುಳಜಾಪುರದ ಸ್ಮರಣೀಯ ಕಲ್ಯಾಣಿಗಳಲ್ಲಿ ಒಂದಾಗಿದೆ. ಪಾಪನಾಶಿ ಹೆಸರೆ ಸೂಚಿಸುವಂತೆ ಪಾಪಗಳ ನಿವಾರಿಸುವ ತೀರ್ಥವಾಗಿದೆ. ಈ ಸ್ಥಳವು ಭಕ್ತರ ಪಾಪ ಕರ್ಮಗಳನ್ನು ನಿವಾರಿಸುವ ಸಲುವಾಗಿ ಖ್ಯಾತಿ ಪಡೆದಿದೆ.
ಈ ಕಲ್ಯಾಣಿಯು ತುಳಜಾ ಭವಾನಿ ದೇವಾಲಯದ ಹೊರಭಾಗದಲ್ಲಿ ಸುಮಾರು 500 ಮೀಟರ್ ದೂರದಲ್ಲಿ ಸರ್ಕ್ಯೂಟ್...
ಸಂತ ಗರೀಬ್ ನಾಥ್ ಮಠವು ದಶಾವತಾರ ಮಠವೆಂದೂ ಸಹ ಕರೆಯಲ್ಪಡುತ್ತದೆ. ಇದು ತುಳಜಾ ಭವಾನಿಯ ಮುಖ್ಯ ದೇವಾಲಯಕ್ಕೆ ಸಮೀಪದಲ್ಲಿದೆ.
ಈ ಮಠವು ಕೆಲ ಶತಮಾನಗಳ ಹಿಂದೆ ಭಗವಾನ್ ಮಹಾವಿಷ್ಣುವಿನ ಪರಮ ಭಕ್ತನಾದ ಸಂತ ಗರಿಬ್ ನಾಥ್ ರಿಂದ ಸ್ಥಾಪಿಸಲ್ಪಟ್ಟಿತು. ಭಗವಾನ್ ಮಹಾವಿಷ್ಣುವಿನ ಹತ್ತು ಅವತಾರಗಳನ್ನು ಚಿತ್ರಿಸಿರುವ ...
ತುಳಜಾಪುರ ಭವಾನಿ ದೇವಾಲಯದ ಹೊರಭಾಗದಲ್ಲಿ ಧಕ್ತೆ ತುಳಜಾಪುರ್ ಎಂಬ ಉಪನಗರವು ಇದೆ. ಇದನ್ನು ’ಯೌವನದ’ ತುಳಜಾಪುರ್ ದೇವಾಲಯ ಎಂದು ಪರಿಗಣಿಸಲಾಗಿದೆ. ಧಕ್ತೆ ತುಳಜಾಪುರ್ ಎಂಬ ಹೆಸರಲ್ಲಿ ಧಕ್ತೆ ಎಂದರೆ ಮರಾಠಿಯಲ್ಲಿ ’ಯೌವನ’ ಎಂದು ಅರ್ಥ.
ಇಲ್ಲಿರುವ ಸಣ್ಣ ವಿಗ್ರಹವನ್ನು ಕಂಡುಹಿಡಿದವನು...
ಚಿಂತಾಮಣಿ ದೇವಾಲಯವು ದ್ಯೂರ್ ಎಂಬ ಸಣ್ಣ ಗ್ರಾಮದಲ್ಲಿ ನೆಲೆಸಿದೆ. ಇದು ಪುಣೆಯ ಸಮೀಪದಲ್ಲಿದೆ. ಈ ಪವಿತ್ರ ದೇವಾಲಯವು ಧರಣಿಧರ್ ಮಾರಾಜ ದೇವನಿಂದ ನಿರ್ಮಾಣಗೊಂಡಿದ್ದು ಅಷ್ಟ ವಿನಾಯಕ ದೇವಾಲಯಗಳಲ್ಲಿ ಒಂದಾಗಿ ಹೆಸರು ಪಡೆದಿದೆ.
ಸ್ವಾಮಿ ವಿನಾಯಕನು ಸಕಲ ವಿಘ್ನ ನಿವಾರಕ. ತನಗಿರುವ ವಿಘ್ನಗಳನ್ನು ನಿವಾರಿಸಲು ಕೋರಿ ಸ್ವತಃ...
ಗೋಮುಖ ತೀರ್ಥವು ತುಳಜಾ ಭವಾನಿಯ ಮುಖ್ಯ ದೇವಾಲಯವನ್ನು ಹೊರತುಪಡಿಸಿದರೆ ತುಳಜಾಪುರದ ಪ್ರಮುಖ ಆಕರ್ಷಣೆಯಾಗಿದೆ. ಈ ಪವಿತ್ರ ಸ್ಥಳದಲ್ಲಿ ಜಲಪಾತವು ಗೋವಿನ ಬಾಯಿಯಂತಹ ರಚನೆಯಿಂದ ಹರಿಯುತ್ತದೆ. ಈ ರಚನೆಯನ್ನು ಆರು ಅಡಿಯಷ್ಟು ಎತ್ತರಕ್ಕೆ ರಚಿಸಲಾಗಿದೆ.
ಗೋಮುಖ ತೀರ್ಥವು ತನ್ನ ನೀರಿನ ಮೂಲವನ್ನು ಪವಿತ್ರ ಗಂಗಾ ನದಿಯಿಂದ...