ಘಟ್ ಶಿಲಾ ದೇವಾಲಯವು ರಾಮನಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಇದು ತುಳಜಾಪುರ ನಗರದಲ್ಲಿರುವ ಪ್ರಾಚೀನ ದೇವಾಲಯವಾಗಿದೆ. ಈ ದೇವಾಲಯವು ಕುತೂಹಲಕರವಾದ ಪೌರಾಣಿಕ ಮಹತ್ವದ ಹಿನ್ನಲೆಯನ್ನು ಹೊಂದಿದೆ.
ನಂಬಿಕೆಗಳ ಪ್ರಕಾರ ಸೀತಾದೇವಿಯು ಅಪಹರಣಕ್ಕೆ ಒಳಗಾಗಿ ಲಂಕೆಯಲ್ಲಿದ್ದಾಗ ಶ್ರೀ ರಾಮನು ತನ್ನ ಸೋದರ ಲಕ್ಷ್ಮಣನ ಜೊತೆ ಆಕೆಯನ್ನು ಈ ಬೆಟ್ಟಗಳಲ್ಲಿ ( ಘಟ್ಟಗಳ) ಹುಡುಕುವಾಗ ಈ ಬಂಡೆಗಳ ಬಳಿ ಹಾದು ಹೋದನಂತೆ. ಈ ಬೆಟ್ಟಗಳ ಬಳಿ ಹುಡುಕಾಡುವಾಗ ತುಳಜಾ ಭವಾನಿಯು ರಾಮನಿಗೆ ಲಂಕೆಯತ್ತ ಹೋಗಲು ಸೂಚನೆ ನೀಡಿದಳೆಂದು ಹೇಳುತ್ತಾರೆ.
ಹಾಗಾಗಿ ಈ ದೇವಾಲಯಕ್ಕೆ ಘಟ್ ಶಿಲಾ ಮಂದಿರ್ ಎಂಬ ಹೆಸರು ಬಂದಿತು. ಈ ದೇವಾಲಯಕ್ಕೆ ಸಮೀಪದ ಊರುಗಳಿಂದ ಪ್ರತಿನಿತ್ಯ ಸಹಸ್ರಾರು ಭಕ್ತರು ರಾಮನ ಸೇವೆ ಮಾಡಲು ಮತ್ತು ಅನುಗ್ರಹ ಕೋರಲು ಆಗಮಿಸುತ್ತಿರುತ್ತಾರೆ. ಯಾತ್ರಾರ್ಥಿಗಳು ಇಲ್ಲಿನ ಪ್ರಾಕೃತಿಕ ಮತ್ತು ಪ್ರಶಾಂತವಾದ ಪರಿಸರವನ್ನು ಆನಂದಿಸುತ್ತಾರೆ.