ವಿವಾಹ ಎನ್ನುವುದು ಜನ್ಮ ಜನ್ಮದ ಅನುಬಂಧ. ವಿವಾಹ ಎಂಬುದು ಸ್ವರ್ಗದಲ್ಲಿ ಆಗುತ್ತದೆ ಎಂದು ಹೇಳುತ್ತಿರುತ್ತಾರೆ. ಕೆಲವೊಮ್ಮೆ ಕೆಲವು ಜಾತಕ ಹಾಗು ಪಾಪಗಳಿಂದ ವಿವಾಹ, ಉದ್ಯೋಗ, ಸಂತಾನ ಮುಂತಾದ ಸಮಸ್ಯೆಗಳು ಜೀವನದಲ್ಲಿ ತಡವಾಗಬಹುದು ಅಥವಾ ಆಗದೇ ಇರಬಹುದು. ಇದಕ್ಕೆ ಪರಿಹಾರಗಳು ಮಾಡಿಕೊಳ್ಳಲು ಅನೇಕ ದೇವಾಲಯಗಳಿಗೆ ಪೂಜೆಗಳನ್ನು ಮಾಡಿಸುವುದು, ಇನ್ನು ಅನೇಕ ಕಾಣಿಕೆ, ವ್ರತವನ್ನು ಮಾಡುತ್ತಾರೆ. ಸರಿಯಾದ ಸಮಯಕ್ಕೆ ಮಕ್ಕಳಿಗೆ ವಿವಾಹವಾಗದೇ ಇದ್ದರೆ ತಂದೆ-ತಾಯಿಗಳು ಚಿಂತೆ ಮಾಡುವುದುಂಟು.
ವಿವಾಹ ಭಾಗ್ಯ ಇಲ್ಲದೇ ಇರುವವರು ಒಂದೇ ವರ್ಷದಲ್ಲಿ ವಿವಾಹವಾಗಬೇಕು ಎಂದು ಅಂದುಕೊಂಡಿರುವವರು ಲೇಖನದಲ್ಲಿ ಹೇಳಲಾಗುವ ಸ್ಥಳಕ್ಕೆ ಹೋಗಿ ಬನ್ನಿ. ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯಕ್ಕೆ ತೆರಳುವ ಬಗೆ ಹೇಗೆ? ಎಂಬುದನ್ನು ತಿಳಿಯೋಣ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ನಮ್ಮಲ್ಲಿ ಕೆಲವರು ದೇವರನ್ನು ನಂಬಿದರೆ ಇನ್ನು ಕೆಲವರು ನಂಬುವುದಿಲ್ಲ. ಅವೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಒಂದೇ ವರ್ಷದಲ್ಲಿ ವಿವಾಹ ಭಾಗ್ಯವನ್ನು ಪಡೆಯುವುದಕ್ಕೆ ಈ ಒಂದು ಮಹಿಮಾನ್ವಿತವಾದ ದೇವಾಲಯಕ್ಕೆ ತೆರಳಬೇಕು. ಆ ದೇವಾಲಯವು ಚೆನ್ನೈನಿಂದ ತೆರಳಬೇಕಾಗುತ್ತದೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಈ ದೇವಾಲಯವು ದಕ್ಷಿಣ ಭಾರತದ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಚೆನ್ನೈನಲ್ಲಿರುವ ತಿರುವಿಂದಂಡೈನಲ್ಲಿರುವ ನಿತ್ಯಾಕಲೈಯ ಪೆರುಮಾಳ್ ದೇವಾಲಯವು ಹಿಂದೂ ದೇವರಾದ ವಿಷ್ಣುವಿಗೆ ಸಮರ್ಪಿತವಾದ ದೇವಾಲಯವೇ ಆಗಿದೆ. ಇಲ್ಲಿಯೇ ವರಹಸ್ವಾಮಿಯು ಭೂದೇವಿಯನ್ನು ವಿವಾಹವಾದನು ಎಂದು ಪುರಾಣವು ಹೇಳುತ್ತದೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯವು 6 ರಿಂದ 9 ನೇ ಶತಮಾನದ ಮಧ್ಯ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. ಇದರ ಬಗ್ಗೆ ಅಜ್ವರ್ ಸಂತರ ಆರಂಭಿಕ ಮಧ್ಯಕಾಲೀನ ತಮಿಳರ ಕ್ಯಾನನ್ ದಿವ್ಯ ಪ್ರಬಂಧದಲ್ಲಿ ವೈಭವೀಕರಿಸಲ್ಪಟ್ಟಿದೆ. ವಿಷ್ಣುವಿಗೆ ಅರ್ಪಿತವಾದ 108 ದೇವಾಲಯಗಳಲ್ಲಿ ಈ ದೇವಾಲಯವು ಒಂದಾಗಿದೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಈ ಮಹಿಮಾನ್ವಿತವಾದ ದೇವಾಲಯವು 7 ನೇ ಶತಮಾನದಲ್ಲಿ ಪಲ್ಲವರು ನಿರ್ವಹಣೆ ಮಾಡಿದರೆ, ನಂತರ 11 ನೇ ಶತಮಾನದಲ್ಲಿ ಚೋಳರಿಗೆ ಸೇರ್ಪಡೆಯಾದವು. ಒಂದು ಗ್ರಾನೈಟ್ ಗೋಡೆಯ ದೇವಾಲಯದ ಸುತ್ತಲೂ ಅದರ ಎಲ್ಲಾ ದೇವಾಲಯಗಳನ್ನು ಸುತ್ತವರೆದಿದ್ದಾರೆ. ಈ ದೇವಾಲಯವನ್ನು ತೆಂಕಲೈ ಪದ್ದತಿಯಲ್ಲಿ ಆರಾಧನೆಯನ್ನು ಅನುಸರಿಸುತ್ತಿದ್ದಾರೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಇಲ್ಲಿ ಅನೇಕ ಉತ್ಸವಗಳು ನಡೆಯುತ್ತಿರುತ್ತದೆ. ದಿನನಿತ್ಯ ಆಚರಣೆಗಳು ಮತ್ತು ಹಲವು ವಾರ್ಷಿಕ ಉತ್ಸವಗಳು ನಡೆಯುತ್ತಿರುತ್ತವೆ. ಇಲ್ಲಿ ಮುಖ್ಯವಾಗಿ ಚೆತೈರೈ ಬ್ರಹ್ಮೋತ್ಸವವು ಏಪ್ರಿಲ್ನಿಂದ ಮೇ ತಿಂಗಳವರೆಗೆ ನಡೆಯುತ್ತದೆ. ಇಲ್ಲಿ ವೈಕುಂಠ ಏಕಾದಶಿ ಕೂಡ ಪ್ರಮುಖವಾಗಿ ಆಚರಿಸಲಾಗುತ್ತದೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಮಂಡಳಿ ಈ ದೇವಾಲಯವನ್ನು ನಿರ್ವಹಣೆ ಮಾಡುತ್ತಿದೆ. ಈ ದೇವಾಲಯಕ್ಕೆ ಭೇಟಿ ನೀಡಿದವರಿಗೆ ಖಚಿತವಾಗಿಯೂ ವಿವಾಹ ಉಂಟಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ ಅನೇಕ ಮಂದಿ ಅವಿವಾಹಿತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವನ್ನು ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಹಾಗು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಪ್ರವೇಶವನ್ನು ಭಕ್ತರಿಗೆ ನೀಡುತ್ತಾರೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಹಿಂದೂ ದಂತಕಥೆಯ ಪ್ರಕಾರ, ವಿಷ್ಣುವಿನ ದ್ವಾರಪಾಲಕರಾದ ಜಯ ಮತ್ತು ವಿಜಯ ಮುಂದಿನ ಜನ್ಮದಲ್ಲಿ ರಾಕ್ಷಸರಾಗುವಂತೆ ಋಷಿಗಳು ಶಪಿಸುತ್ತಾರೆ. ರಾಕ್ಷಸರಾದ ನಂತರ ವಿಶ್ವವನ್ನು ನಿಯಂತ್ರಿಸಲು ಪ್ರಾರಂಭ ಮಾಡುತ್ತಾರೆ. ಆಗ ರಾಕ್ಷಸರಲ್ಲಿ ಒಬ್ಬನಾದ ಹಿರಣ್ಯಕೇಶನು ಪ್ರಾಯಶ್ಚಿತ್ತವನ್ನು ಪಡೆಯುವ ಸಲುವಾಗಿ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಆ ವರವೇನು ಎಂದರೆ ಯಾವುದೇ ಪ್ರಾಣಿ ಅಥವಾ ಮಾನವನಿಂದ ಮರಣ ಹೊಂದಬಾರದು ಎಂದು ವರವನ್ನು ಪಡೆಯುತ್ತಾನೆ. ಹೀಗೆ ಎಲ್ಲಾ ಪ್ರಾಣಿಗಳನ್ನು ಕೊಲ್ಲುತ್ತಿರುತ್ತಾನೆ ಹಾಗೆಯೇ ಭೂದೇವಿಯನ್ನು ವಶಪಡಿಸಿಕೊಂಡಿರುತ್ತಾನೆ. ಸಕಲ ದೇವತೆಗಳು ಶ್ರೀ ಮಹಾ ವಿಷ್ಣುವಿಗೆ ಬೇಡಿಕೊಳ್ಳುತ್ತಾರೆ. ಹಂದಿ ರೂಪವನ್ನು ಧರಿಸುತ್ತಾನೆ ಶ್ರೀ ಮಹಾ ವಿಷ್ಣು. ವರಹಾ ಅವತಾರವೆತ್ತ ಸ್ವಾಮಿಯು ತನ್ನ ಬಲವಾದ ದಂತಗಳಿಂದ ಭೂಮಿಯನ್ನು ಎತ್ತುತ್ತಾನೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಆಗ ಭೂದೇವಿಯು ವರಹ ಸ್ವಾಮಿಯ ಮೇಲೆ ಪ್ರೀತಿಗೆ ಬೀಳುತ್ತಾಳೆ. ತದನಂತರ ವಿವಾಹವಾಗುತ್ತಾರೆ. ಒಂದು ಪುರಾಣದ ಪ್ರಕಾರ ವರ್ಷಕ್ಕೆ 360 ಹೆಣ್ಣು ಮಕ್ಕಳನ್ನು ದಿನಕ್ಕೆ ಒಂದು ಬಾರಿ ವಿವಾಹವಾದನು ಎಂದು ನಂಬಲಾಗಿದೆ. ಹಾಗಾಗಿಯೇ ಇತನನ್ನು ಪ್ರತಿದಿನ ವಿವಾಹವಾದ ಸ್ವಾಮಿ ಎಂದು ಕರೆಯುತ್ತಾರೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಮತ್ತೊಂದು ದಂತಕಥೆಯ ಪ್ರಕಾರ, ಹರಿಕೇಶ್ವರ ವರ್ಮನ್ ಎಂಬ ಹೆಸರಿನ ರಾಜ ಮಹಾಬಲಿಪುರಂನಿಂದ ಪ್ರತಿ ದಿನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ. ಹಾಗೆಯೇ ಇದೇ ಸ್ಥಳದಲ್ಲಿ ನೆಲೆಸಲು ಬಯಸಿದನಂತೆ. ವಿಷ್ಣುವನ್ನು ತನ್ನ ಭಕ್ತಿಯಿಂದ ತೃಪ್ತಿ ಪಡಿಸುವ ಸಲುವಾಗಿ ದೇವಾಲಯವನ್ನು ನಿರ್ಮಾಣ ಮಾಡಿದನಂತೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಈ ದೇವಾಲಯದಲ್ಲಿ ಪಲ್ಲವ ಕಾಲದಿಂದ ಅಂದರೆ ಕ್ರಿ.ಶ 959ರ ಶಾಸನಗಳನ್ನು ಹೊಂದಿದೆ. ಈ ದೇವಾಲಯದ ಶಾಸನಗಳ ಕಾರಣದಿಂದಾಗಿ ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ಒಂದು ಸ್ಮಾರಕವಾಗಿದೆ. ನಿತ್ಯಾಕಲ್ಯಾಣ ಪೆರುಮಾಳ್ ದೇವಾಲಯವು ಚೆನ್ನೈನಿಂದ ಸುಮಾರು 38 ಕಿ.ಮೀ ದೂರದಲ್ಲಿದೆ. ಮಹಾಬಲಿಪುರಂನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಕಾಂಚೀಪುರಂ ಜಿಲ್ಲೆಯ ತಿರುವಿಂದಾಂಡೈ ಗ್ರಾಮದಲ್ಲಿದೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಈ ದೇವಾಲಯವು ಅತ್ಯಂತ ಸುಂದರವಾಗಿದ್ದು, ಗ್ರಾನೈಟ್ ಗೋಡೆಗಳಿಂದ ಅಲಂಕರಿಸಲ್ಪಟ್ಟಿದೆ. ಪ್ರತಿಯೊಂದು ಗರ್ಭಗುಡಿಯು ಮತ್ತು ಪ್ರವೇಶದ್ವಾರವು ಸಂಪರ್ಕವನ್ನು ಹೊಂದಿದೆ. ದೇವಾಲಯದ ರಥವನ್ನು ನಿರ್ಮಾಣ ಮಾಡಲು ಒಂದು ಅವರಣದ ಸಭಾಂಗಣವನ್ನು ಕೂಡ ಹೊಂದಿದೆ.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಈ ದೇವಾಲಯವು ವೈಕಾಸನ ಅಗಮಿಕ್ ಸಂಪ್ರದಾಯವನ್ನು ಆಧರಿಸಿದ ತೆಂಕಲೈ ಸಂಪ್ರದಾಯವನ್ನು ಅನುಸರಿಸುತ್ತಿದೆ. ಈ ದೇವಾಲಯಕ್ಕೆ ಚೆನ್ನೈ-ಮಹಾಬಲೀಪುರಂನಲ್ಲಿ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ದೇವಾಲಯವು ಸುಮಾರು 1000 ವರ್ಷಗಳಿಂದ 2000 ವರ್ಷಕ್ಕಿಂತ ಹಳೆಯದಾದುದು.
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...
ಈ ಮಹಿಮಾನ್ವಿತವಾದ ದೇವಾಲಯಕ್ಕೆ ಅವಿವಾಹಿತ ಗಂಡು, ಹೆಣ್ಣುಗಳು ಭೇಟಿ ನೀಡಿ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇದರಿಂದ ಈ ಸ್ವಾಮಿಯನ್ನು ಆರಾಧಿಸಿದರೆ ವರ್ಷದೊಳಗೆ ವಿವಾಹವಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು ಅವುಗಳೆಂದರೆ ಸೆಮಿನಾರ್ ಚೆನ್ನೈ ಪಾರ್ಕ್, ಮಧ್ಯಗಲಶ್ ದೇವಾಲಯ, ಮಾರುತೇಶ್ವರರ್ ದೇವಾಲಯ, ಮುಟ್ಟುಕಾಡು ಮತ್ತು ಕೊವಲಂ ಬೀಚ್ ಇನ್ನು ಹಲವಾರು.