ಕರ್ನಾಟಕದಲ್ಲಿ ಮೈಸೂರು ಬಿಟ್ಟರೆ ಮಂಗಳೂರಿನಲ್ಲೂ ಅದ್ದೂರಿಯಾಗಿ, ವಿಭಿನ್ನವಾಗಿ ದಸರಾ ಆಚರಿಸಲಾಗುತ್ತದೆ. ಒಂದು ವೇಳೆ ನೀವೇನಾದರೂ ಮಂಗಳೂರಿಗೆ ತೆರಳಲು ಪ್ಲಾನ್ ಮಾಡಿದ್ದರೆ ದಸರಾ ವೈಭವವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಮಂಗಳೂರಿನಲ್ಲಿರುವ ಈ ಸುಂದರವಾದ ಸ್ಥಳಗಳಿಗೂ ಭೇಟಿ ಕೊಡಬಹುದು. ಹೇಗಿದ್ದರೂ ಈಗ ಮಕ್ಕಳಿಗೆ ದಸರಾ ರಜೆ ದಿನಗಳು ಆರಂಭವಾಗಿದೆ. ಆದ್ದರಿಂದ ಪ್ರವಾಸಕ್ಕೆ ಪ್ಲಾನ್ ಮಾಡುವುದು ನಿಮಗೆ ಅಷ್ಟೇನೂ ಕಷ್ಟವಾಗುವುದಿಲ್ಲ. ಹಾಗಾದರೆ ಬನ್ನಿ, ಮಂಗಳೂರಿಗೆ ಹೋದಾಗ ಎಲ್ಲೆಲ್ಲಿ ಸುತ್ತಾಡಬಹುದೆಂದು ನೋಡೋಣ....
ಕಡಲತೀರಗಳು, ದೇವಾಲಯಗಳು ಮತ್ತು ಚರ್ಚ್ಗಳು
ಮಂಗಳೂರು ಸಹ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿದೆ. ಇಲ್ಲಿ ನಾವು ಹೆಚ್ಚಾಗಿ ಸುಂದರವಾದ ಕಡಲತೀರಗಳು, ದೇವಾಲಯಗಳು ಮತ್ತು ಚರ್ಚ್ಗಳನ್ನು ಕಾಣಬಹುದು. ಈ ಸ್ಥಳದ ಸಂಸ್ಕೃತಿ ಮತ್ತು ಆಸಕ್ತಿದಾಯಕ ಇತಿಹಾಸವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕರ್ನಾಟಕದ ಈ ನಗರದಲ್ಲೂ ಅನೇಕ ರಾಜವಂಶಗಳು ಆಳಿವೆ. ಇವರಲ್ಲಿ ರಾಷ್ಟ್ರಕೂಟರು ಮತ್ತು ಚಾಲುಕ್ಯರು ಪ್ರಮುಖರಾಗಿದ್ದಾರೆ. ನೀವು ಮಂಗಳೂರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಇಲ್ಲಿ ಕೆಲವು ಆಫ್ಬೀಟ್ ತಾಣಗಳಿಗೆ ಭೇಟಿ ನೀಡಿ.
ಬೆಜೈ ಮ್ಯೂಸಿಯಂ
ನೀವು ವಿಭಿನ್ನವಾದದ್ದನ್ನು ನೋಡಲು ಬಯಸಿದರೆ ಬೆಜೈ ಮ್ಯೂಸಿಯಂಗೆ ಭೇಟಿ ನೀಡಬೇಕು. ಎರಡು ಅಂತಸ್ತಿನ ಈ ಮ್ಯೂಸಿಯಂನಲ್ಲಿ ಹಲವು ಬಗೆಯ ಪೇಂಟಿಂಗ್ ಗಳನ್ನು ಕಾಣಬಹುದು. ಪ್ರಾಚೀನ ಕಾಲದಲ್ಲಿ ಬಳಸಲಾಗಿದ್ದ ಹಲವು ಬಗೆಯ ಆಯುಧಗಳು, ನಾಣ್ಯಗಳು ಮತ್ತು ಅದ್ಭುತ ಕಲಾಕೃತಿಗಳನ್ನೂ ಕೂಡ ಕಾಣಬಹುದು. ಈ ವಸ್ತುಸಂಗ್ರಹಾಲಯವು ಬೆಳಗ್ಗೆ 10:00 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ, ಆದರೆ ಇದನ್ನು ಸೋಮವಾರದಂದು ಮುಚ್ಚಲಾಗುತ್ತದೆ. ಇದು ಮಂಗಳೂರು ರೈಲು ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲಿದೆ.

ಸೋಮೇಶ್ವರ ಬೀಚ್
ನೀವು ಬೀಚ್ ನೋಡಲು ಇಷ್ಟಪಟ್ಟರೆ, ಅತ್ಯುತ್ತಮ ವಾತಾವರಣದ ಜೊತೆಗೆ ಹಿತವಾದ ಅನುಭವಕ್ಕೆ ಸೋಮೇಶ್ವರ ಬೀಚ್ಗೆ ಭೇಟಿ ನೀಡಬೇಕು. ಮಂಗಳೂರು ನಗರದ ಉಳ್ಳಾಲದಲ್ಲಿರುವ ಸೋಮೇಶ್ವರ ಬೀಚ್ ನಗರದ ವಿಶಿಷ್ಟವಾದ ಗುಪ್ತ ರತ್ನವಾಗಿದೆ. ಪ್ರಸಿದ್ಧ ಸೋಮೇಶ್ವರ ದೇವಾಲಯವು ಬೀಚ್ನಿಂದ ಆವೃತವಾಗಿದ್ದು, ಅದಕ್ಕಾಗಿಯೇ ಇದು ವಿಶೇಷವಾಗಿ ಪ್ರಸಿದ್ಧವಾಯಿತು. ಇದು ಮಂಗಳೂರಿನ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ಮಂಗಳೂರಿನ ಹೊರವಲಯದಲ್ಲಿರುವ ಈ ಸ್ಥಳವನ್ನು 'ರುದ್ರ ಶಿಲಾ' ಎಂದೂ ಕರೆಯುತ್ತಾರೆ. ಇಲ್ಲಿಯ ನೋಟವು ಸಂಜೆಯ ಸಮಯದಲ್ಲಿ ತುಂಬಾ ಸುಂದರವಾಗಿರುತ್ತದೆ. ನೀರು ಈಜಲು ಸೂಕ್ತವಲ್ಲ. ಕಡಲತೀರದ ಸಮೀಪದಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ "ಒಟ್ಟಿನೆನೆ ಬೆಟ್ಟ".
ಸೇಂಟ್ ಅಲೋಶಿಯಸ್ ಚಾಪೆಲ್
ಸೇಂಟ್ ಅಲೋಶಿಯಸ್ ಚಾಪೆಲ್ ಮಂಗಳೂರಿನ ಅತ್ಯಂತ ಭವ್ಯವಾದ ತಾಣಗಳಲ್ಲಿ ಒಂದಾಗಿದೆ. ಈ ಚರ್ಚ್ ಅನ್ನು 1800 ರಲ್ಲಿ ನಿರ್ಮಿಸಲಾಯಿತು. ಇದು ಕ್ಯಾಥೋಲಿಕ್ ಚರ್ಚ್ ಆಗಿದ್ದು, ಲೈಟ್ಹೌಸ್ ಹಿಲ್ನ ಮೇಲಿರುವ ಪ್ರಸಿದ್ಧ ಆಕರ್ಷಣೆಯಾಗಿದೆ. ಚರ್ಚ್ʼನ ಬೃಹತ್ ಕಟ್ಟಡ, ಹಳೆಯ ವಿನ್ಯಾಸ ಮತ್ತು ವರ್ಣಚಿತ್ರಗಳೊಂದಿಗೆ ದೊಡ್ಡ ಕೊಠಡಿಗಳು ಸೇರಿದಂತೆ ಈ ಸ್ಥಳದ ಇತಿಹಾಸ ತಿಳಿದುಕೊಳ್ಳಲು ನಿಮಗೆ ತುಂಬಾ ಆಸಕ್ತಿದಾಯಕವಾಗಿರುತ್ತದೆ. ಈ ಚರ್ಚ್ ಮಂಗಳವಾರದಿಂದ ಭಾನುವಾರದವರೆಗೆ ತೆರೆದಿರುತ್ತದೆ ಮತ್ತು ಇಲ್ಲಿ ಪ್ರವೇಶ ಉಚಿತವಾಗಿದೆ. ಸೇಂಟ್ ಅಲೋಶಿಯಸ್ ಚಾಪೆಲ್ ಅಲೋಶಿಯಸ್ ಕಾಲೇಜು ರಸ್ತೆಯಿಂದ ಕೇವಲ 600 ಮೀಟರ್ ದೂರದಲ್ಲಿರುವ ಹಂಪನಕಟ್ಟೆಯಲ್ಲಿದೆ.

ಪಿಲಿಕುಳ ನಿಸರ್ಗಧಾಮ
ನೀವು ಕುಟುಂಬದ ಜೊತೆ ಪಿಕ್ನಿಕ್ ಹೋಗಲು ಬಯಸಿದರೆ ಪಿಲಿಕುಳ ನಿಸರ್ಗಧಾಮ ಉತ್ತಮ ಸ್ಥಳವಾಗಿದೆ. ನಗರದಿಂದ 15 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳವು ತುಂಬಾ ಸುಂದರವಾಗಿದೆ. ಇಲ್ಲಿ ನೀವು ಸಿಂಹ, ಹುಲಿ, ಕರಡಿ ಮುಂತಾದ ಕಾಡು ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಜಾಗದಲ್ಲಿ ನೋಡಬಹುದು. ಬೊಟಾನಿಕಲ್ ಗಾರ್ಡನ್ ಕೂಡ ಹತ್ತಿರದಲ್ಲಿದ್ದು, ಇಲ್ಲಿ ನೀವು ಸುತ್ತಾಡುವಾಗ ವಿಶ್ರಾಂತಿ ಪಡೆಯಬಹುದು. ನಿಸರ್ಗಧಾಮಕ್ಕೆ ಭೇಟಿ ನೀಡಲು ಪ್ರತಿ ವ್ಯಕ್ತಿ ದುಡ್ಡು ಕೊಡಬೇಕು. ಇದು ಸರೋವರದೊಂದಿಗೆ 370 ಎಕರೆ ಪ್ರದೇಶದಲ್ಲಿ ಹರಡಿದೆ. ಪಿಲಿಕುಳ ನಿಸರ್ಗಧಾಮ ಸಸ್ಯೋದ್ಯಾನದಲ್ಲಿ ಸುತ್ತಾಡುತ್ತಾ ನೀವು ತಾಜಾ ಗಾಳಿಯನ್ನು ಆನಂದಿಸಬಹುದು. ಈ ಸ್ಥಳವು ಎಷ್ಟು ಆಹ್ಲಾದಕರವಾಗಿದೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಆತ್ಮವನ್ನು ಶುದ್ಧೀಕರಿಸಿದ ಅನುಭವವನ್ನು ಅನುಭವಿಸುತ್ತಾನೆ.

ಲೈಟ್ ಹೌಸ್ ಹಿಲ್ ಗಾರ್ಡನ್
ನಿಮಗೆ ಐತಿಹಾಸಿಕ ವಿಷಯಗಳಲ್ಲಿ ಆಸಕ್ತಿ ಇದ್ದರೆ ಹೈದರ್ ಅಲಿ ಕಾಲದಲ್ಲಿ ನಿರ್ಮಿಸಲಾದ ಲೈಟ್ ಹೌಸ್ ಹಿಲ್ ಗಾರ್ಡನ್ ಅನ್ನು ಸಹ ನೋಡಬಹುದು. ಟಾಗೋರ್ ಪಾರ್ಕ್ ಎಂದೂ ಕರೆಯಲ್ಪಡುವ ಇದನ್ನು 18 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಹಸಿರಿನಿಂದ ಕೂಡಿದ ಈ ಸ್ಥಳ ರೋಮಾಂಚನಕಾರಿಯಾಗಿದೆ. ಇಲ್ಲಿ ಸೂರ್ಯಾಸ್ತದ ನೋಟ, ಸಮುದ್ರದಿಂದ ಬರುವ ದೊಡ್ಡ ಅಲೆಗಳ ಸದ್ದು ಮತ್ತು ಪಕ್ಷಿಗಳ ಸಿಹಿ ಚಿಲಿಪಿಲಿ ಆನಂದ ನೀಡುತ್ತದೆ. ಇದು ಮಂಗಳೂರು ರೈಲು ನಿಲ್ದಾಣದಿಂದ 1 ಕಿಮೀ ದೂರದಲ್ಲಿದೆ. ಈ ಸುಂದರವಾದ ಉದ್ಯಾನವನ್ನು ಹೊಸದಾಗಿ ನವೀಕರಿಸಲಾಗಿದೆ. ಈ ಉದ್ಯಾನವು ಸೇಂಟ್ ಅಲೋಶಿಯಸ್ ಚಾಪೆಲ್ಗೆ ಬಹಳ ಹತ್ತಿರದಲ್ಲಿರುವುದರಿಂದ ಎರಡೂ ಸ್ಥಳಕ್ಕೂ ಒಟ್ಟಿಗೆ ಭೇಟಿ ನೀಡಬಹುದು.


Click it and Unblock the Notifications

















