ಲಿಂಗರೂಪದಲ್ಲಿ ದೇವಿಯನ್ನು ಪೂಜಿಸುವುದನ್ನು ನೋಡಿದ್ದೀರಾ? ನೋಡಿಲ್ಲಾವೆಂದಾದರೆ ಕುಂದಾಪುರದ ಬಳಿಯಿರುವ ಕಮಲಶಿಲೆಗೊಮ್ಮೆ ಭೇಟಿ ನೀಡಿ. ಕಮಲಶಿಲೆ ಉಡುಪಿ ಜಿಲ್ಲೆಯ ಕುಂದಾಪುರದಿಂದ 35 ಕಿ.ಮೀ ದೂರದಲ್ಲಿದೆ. ಕಮಲಶಿಲೆಯು ಸುತ್ತಲು ಸುಂದರವಾದ ಪರ್ವತಗಳು, ನಿತ್ಯಹರಿದ್ವರ್ಣ ಕಾಡುಗಳಿಂದ ಸುತ್ತುವರಿದಿದೆ. ಕುಬ್ಜಾ ನದಿಯು ಅದರ ಪಕ್ಕದಲ್ಲಿ ಹರಿಯುತ್ತಿದೆ.
ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ
ಗ್ರಾಮದ ಹೃದಯಭಾಗದಲ್ಲಿರುವ ಪ್ರಾಚೀನ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನವು ಕಮಲಶಿಲೆ ಎಂದೇ ಹೆಸರುವಾಸಿಯಾಗಿದೆ. ಕಮಲಶಿಲೆ ಎಂಬ ಹೆಸರು ಕಲ್ಲಿನ ಲಿಂಗಾದ ನಂತರ ತೆಗೆದುಕೊಳ್ಳುತ್ತದೆ. ದೇವತೆಗಳಾದ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಮಹಾಕಾಳಿ, ಮಹಾ ಸರಸ್ವತಿ ಮತ್ತು ಮಹಾ ಲಕ್ಷ್ಮಿಯನ್ನು ಒಮ್ಮುಖವಾಗಿ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ.
ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?
ನೃತ್ಯಗಾರ್ತಿ ಪಿಂಗಳೆ
ಪುರಾಣದ ಸಹ್ಯಾದ್ರಿ ಕಾಂಡದ ಪ್ರಕಾರ ಕೈಲಾಸ ಪರ್ವತದಲ್ಲಿ ಪಿಂಗಳ ಎಂಬ ಸುಂದರ ನೃತ್ಯಗಾರ್ತಿಯಿದ್ದಳಂತೆ. ಒಮ್ಮೆ ಅವಳು ತನ್ನ ಅಹಂಕಾರದಿಂದ ತಾನು ನರ್ತಿಸಲೊಲ್ಲೆ ಎಂದಾಗ ಪಾರ್ವತಿ ಭೂಲೋಕದಲ್ಲಿ ಕುರೂಪಿಯಾದ ಹೆಣ್ಣಾಗಿ ಹುಟ್ಟು ಎಂದು ಶಪಿಸುತ್ತಾಳಂತೆ.
ಪಿಂಗಳೆಗೆ ಶಾಪವಿತ್ತ ಪಾರ್ವತಿ
ತನ್ನ ತಪ್ಪಿನ ಅರಿವಾದ ಪಿಂಗಳೆಯು ಕ್ಷಮೆಯಾಚಿಸಲು ಕರಟಾಸುರನ ದುಷ್ಕೃತ್ಯಗಳಿಂದ ಪರಿತಪಿಸುತ್ತಿರೋ ಭೂಲೋಕವಾಸಿಗಳ ಉದ್ದಾರಕ್ಕೆ ತಾನೇ ಅವತರಿಸುತ್ತೇನೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಋಕ್ಷ್ವಮುನಿಯ ಆಶ್ರಮದ ಬಳಿಯಲ್ಲಿ ಕಮಲಶಿಲೆಯ ರೂಪದ ಲಿಂಗದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಳಂತೆ. ಪಿಂಗಳೆ ಭೂಮಿಗೆ ಅವತರಿಸಿದ್ದು ಕುಬ್ಜೆಯೆಂಬ ಕುರೂಪಿಯಾಗಿ.
ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ....
ಸುಪಾರ್ಶ್ವ ಗುಹೆಯಲ್ಲಿ ತಪಸ್ಸು
ಕುಬ್ಜೆ ತನ್ನ ಈ ಜನ್ಮದ ಮೋಕ್ಷಕ್ಕಾಗಿ ಈ ಕ್ಷೇತ್ರದಲ್ಲಿರೋ ಸುಪಾರ್ಶ್ವ ಗುಹೆಯಲ್ಲಿ ತಪಸ್ಸು ಮಾಡತೊಡಗುತ್ತಾಳೆ. ಈ ತಪಸ್ಸಿನಿಂದ ಪ್ರಸನ್ನಳಾಗೋ ಪಾರ್ವತಿ ಸುಪಾರ್ಶ್ವಗುಹೆಯಲ್ಲಿ ಹುಟ್ಟೋ ನಾಗತೀರ್ಥ ಮತ್ತು ಈಗಿನ ಕುಬ್ಜಾನದಿಯ ಸಂಗಮಸ್ಥಳದಲ್ಲಿ ಕಮಲಶಿಲೆಯ ಲಿಂಗವಾಗಿ ಪ್ರತ್ಯಕ್ಷಳಾಗುತ್ತಾಳೆ. ದೇವಿಯು ಶ್ರೀಕೃಷ್ಣನ ಸ್ಪರ್ಷದಿಂದ ನಿನ್ನ ಪಾಪಪರಿಹಾರವಾಗುವುದೆಂಬ ವಿಧಿಲಿಖಿತವಿರೋದ್ರಿಂದ ನೀನು ಮಥುರೆಗೆ ತೆರಳು ಎಂದು ಕುಬ್ಜೆಗೆ ತಿಳಿಸುತ್ತಾಳೆ.
ಶಾಪ ಪರಿಹಾರ
ಸಹ್ಯಾದ್ರಿಯ ತಪ್ಪಲಲ್ಲಿ ಹುಟ್ಟಿ ಪಶ್ಚಿಮದ ಕಡಲೆಡೆಗೆ ಸಾಗೋ ನದಿ ಕುಬ್ಜೆಯ ನೆನಪಲ್ಲಿ ಕುಬ್ಜಾ ನದಿಯೆಂದೇ ಹೆಸರು ಪಡೆಯುತ್ತದೆ ಎಂದು ತಿಳಿಸುತ್ತಾಳೆ. ಹೀಗೆ ಶ್ರೀಕೃಷ್ಣನ ಸ್ಪರ್ಷದಿಂದ ಗೂನುಬೆನ್ನಿನ ಅಜ್ಜಿಯೊಬ್ಬಳ ಶಾಪಪರಿಹಾರಗೊಳ್ಳುತ್ತದೆ.
ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?
ಇತರ ದೇವತೆಗಳು
ಕುಬ್ಜಾ ನದಿಯ ದಂಡೆಯಲ್ಲಿರುವ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಪ್ರಧಾನ ದೇವತೆ ದುರ್ಗಾಪರಮೇಶ್ವರಿಯಲ್ಲದೇ ಅದೇ ಪ್ರಾಂಗಣದಲ್ಲಿ ಗಣಪತಿ, ಹೊಸಮ್ಮ ದೇವಿ, ವೀರಭದ್ರ, ಈಶ್ವರ, ಮುಂದಂತಾಯ ದೇವತೆ, ನಾಗದೇವತೆ, ನವಗ್ರಹಗಳು, ವಿಷ್ಣು ಮುಂತಾದ ದೇವತೆಗಳಿವೆ.
ಸಲಾಮ್ ಪೂಜಾ
ಮುಸ್ಲಿಮ್ ಆಡಳಿತಗಾರರಾದ ಹೈದರ್ ಅಲಿ ಮತ್ತು ಅವರ ಪುತ್ರ ಟಿಪ್ಪು ಸುಲ್ತಾನ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ಸಾಯಂಕಾಲವೂ "ಸಲಾಮ್ ಪೂಜಾ" ಎಂದು ಕರೆಯಲಾಗುವ ವಿಶೇಷ ಪೂಜಾವನ್ನು ನಡೆಸಲಾಗುತ್ತದೆ. ವಾರ್ಷಿಕ ಕಾರ್ ಉತ್ಸವವು ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ.
ಮನುಷ್ಯನನ್ನು ಜೀವಂತ ಸಮಾಧಿ ಮಾಡಿ ನಿರ್ಮಿಸಲಾದ ಕೋಟೆ ಇದು !
ತಲುಪುವುದು ಹೇಗೆ?
ಕಮಲಶಿಲೆಗೆ ಸಮೀಪದ ವಿಮಾನನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು 125 ಕಿ.ಮಿ ದೂರದಲ್ಲಿದೆ. ಅಲ್ಲಿಂದ ಖಾಸಗಿ ಬಸ್ ಅಥವಾ ಟ್ಯಾಕ್ಸಿ ಮೂಲಕ ಕಮಲಶಿಲೆಯನ್ನು ತಲುಪಬಹುದು.
ಇನ್ನು ಸಮೀಪದ ರೈಲು ನಿಲ್ದಾಣವೆಂದರೆ ಕುಂದಾಪುರ ರೈಲು ನಿಲ್ದಾಣ. ಇದು ಸುಮಾರು 35 ಕಿ.ಮೀ ದೂರದಲ್ಲಿದೆ.
ಮಂಗಳೂರಿನಿಂದ 125 ಕಿ.ಮೀ ದೂರದಲ್ಲಿದ್ದರೆ, ಶಿವಮೊಗ್ಗದಿಂದ 120 ಕಿ.ಮೀ ದೂರದಲ್ಲಿದೆ.