ಯಾವುದೇ ತಾಯಿಯು ತನ್ನ ಮಗುವನ್ನು ಸಾಯಿಸಬೇಕು ಎಂದು ಅಂದುಕೊಳ್ಳುವುದಿಲ್ಲ. ಆ ಮಗುವನ್ನು (ನರಕಾಸುರ) ಜನಕಮಹಾರಾಜನಿಗೆ ಒಪ್ಪಿಸಿ ವಿದ್ಯಾಬುದ್ಧಿಗಳನ್ನು ಕಲಿಸು ಎಂದು ಭೂದೇವಿಯು ಕೇಳಿಕೊಳ್ಳುತ್ತಾಳೆ. ಜನಕ ಮಹಾರಾಜನಲ್ಲಿ ಬೆಳೆದು ದೊಡ್ಡವನಾದ ನರಕಾಸುರನು ಕಾಮಾಖ್ಯ ಪ್ರದೇಶವನ್ನು ರಾಜಧಾನಿಯಾಗಿ ಮಾಡಿಕೊಂಡು ಪ್ರಾಗ್ಜ್ಯೋತಿಪುರ್ (ಪ್ರಸ್ತುತ ಅಸ್ಸಾಂನಲ್ಲಿನ ಗುವಹಾಟಿ ಪ್ರದೇಶ) ಎಂಬ ರಾಜ್ಯವನ್ನು ಆಳ್ವಿಕೆ ನಡೆಸುತ್ತಿರುತ್ತಾನೆ.
ಕಾಮಾಖ್ಯ ದೇವತೆಗೆ ದೊಡ್ಡ ಭಕ್ತನಾದ ನರಕಾಸುರನು, ಕಾಮಾಖ್ಯ ದೇವಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದನು. ಅದೆ ದೇವಾಲಯವೇ ಪ್ರಸ್ತುತವಿರುವ ಗುವಹಾಟಿಯಲ್ಲಿನ ಕಾಮಾಖ್ಯ ದೇವಾಲಯ. ಭಾರತ ದೇಶದಲ್ಲಿನ 51 ನೇ ಶಕ್ತಿಪೀಠಗಳಲ್ಲಿ ಇದು ಪುರಾತನವಾದುದು. ಕಾಮಾಖ್ಯ ದೇವಾಲಯ ಬಗ್ಗೆ ಮತ್ತಷ್ಟು ವಿಶೇಷಗಳು.....
ನರಕಾಸುರನು ವರಹ ಅವತಾರದಲ್ಲಿರುವ ವಿಷ್ಣು ಮೂರ್ತಿ ಭೂದೇವಿಯ ಕುಮಾರ. ಸಂಧ್ಯಾಕಾಲದಲ್ಲಿ ಸೇರಿದ ಕಾರಣ ಜನಿಸಿದ ಪುತ್ರನೇ ಈ ನರಕನು. ಹೀಗಾಗಿಯೇ ಇತನಲ್ಲಿ ಕೆಲವು ರಾಕ್ಷಸ ಗುಣಗಳು ಬಂದಿವೆ ಎಂದು ಭೂದೇವಿಗೆ ಶ್ರೀ ವಿಷ್ಣು ಮೂರ್ತಿ ಹೇಳುತ್ತಾನೆ.
ಅದಕ್ಕೆ ಚಿಂತೆ ಮಾಡಿದ ಭೂದೇವಿ, ಎಂದಾದರೂ ವಿಷ್ಣುಮೂರ್ತಿ ತನ್ನ ಮಗನನ್ನು ಸಂಹಾರ ಮಾಡುತ್ತಾನೆ ಎಂದುಕೊಳ್ಳುತ್ತಾಳೆ. ಭೂದೇವಿಯು ತನ್ನ ಮಗನ ಪ್ರಾಣ ರಕ್ಷಣೆಯ ವರವನ್ನು ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪಿದ ವಿಷ್ಣು ಮೂರ್ತಿ, ತನ್ನ ತಾಯಿಯಿಂದಲೇ ಆತನಿಗೆ ಮರಣವಿರುತ್ತದೆ ಎಂದು ಹೇಳಿ ಮಾಯವಾಗುತ್ತಾನೆ.
ಎಲ್ಲಿದೆ?
ಕಾಮಾಖ್ಯ ದೇವಾಲಯವು ಗುವಾಹಟಿ(ಗೌಹತಿ) ನಗರಕ್ಕೆ ಪಶ್ಚಿಮ ಭಾಗದಲ್ಲಿ ನಾಲಾಚಲ್ ಎಂಬ ಬೆಟ್ಟದ ಮೇಲೆ ಇದೆ. ಇದು ಆನೇಕ ದೇವಾಲಯಗಳನ್ನು ಹೊಂದಿರುವ ಪ್ರತ್ಯೇಕವಾದ ದೇವಾಲಯವಾಗಿ
ಯಾವುದೇ ಪ್ರದೇಶದಿಂದಾರೂ
ಗೌವಾಹಟಿಗೆ ತಲುಪಲು ವಿಮಾನ, ರೈಲು ಮತ್ತು ರಸ್ತೆ ಮಾರ್ಗಗಳ ವ್ಯವಸ್ಥೆ ಇದೆ. ದೇಶದಲ್ಲಿಯೇ ಎಲ್ಲಾ ಪ್ರಧಾನ ನಗರಗಳಿಂದ ಇಲ್ಲಿಗೆ ವಿಮಾನಗಳು, ರೈಲುಗಳು ಮತ್ತು ಬಸ್ಸುಗಳು ಬರುತ್ತಿರುತ್ತದೆ. ನಗರದಲ್ಲಿ ಯಾವುದೇ ಪ್ರದೇಶದಲ್ಲಿಯಾದರೂ ಕಾಮಾಖ್ಯ ದೇವಾಲಯಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು. ಕ್ಯಾಬ್, ಟ್ಯಾಕ್ಸಿ ಅಥವಾ ಆಟೋ ರೀಕ್ಷದ ಮೂಲಕ ತಲುಪಬಹುದು.
ಕಾಮಾಖ್ಯ ದೇವಾಲಯ
ಕಾಮಾಖ್ಯ ದೇವಾಲಯದಲ್ಲಿ 10 ದೇವಾಲಯಗಳು ಇವೆ. ಮಹಾವಿದ್ಯೆಗೆ ಅಂಕಿತವಾಗಿವೆ. ಆ ದೇವಾಲಯಗಳು ಕಾಳಿ, ತಾರ, ಸೋದಶಿ, ಭುವನೇಶ್ವರಿ, ಭೈರವಿ, ಚಿನ್ನ, ಮಸ್ತಾ, ಧುಮವತಿ, ಬಂಗಳಮುಖಿ, ಮಾತಂಗಿ ಮತ್ತು ಕಮಲ ದೇವಾಲಯವಾಗಿದೆ.
ಯಾತ್ರಾ ಸ್ಥಳ
ಸಾಧಾರಣಾವಾಗಿ ಹಿಂದೂ ಭಕ್ತರು ಮತ್ತು ತಾಂತ್ರಿಕ ಭಕ್ತರಿಗೆ ಅತ್ಯಂತ ಶಕ್ತಿವಂತವಾದ ದೇವಾಲಯವೆಂದರೆ ಅದು ಕಾಮಾಖ್ಯ ದೇವಾಲಯ. ಇದೊಂದು ಪ್ರಮುಖವಾದ ಯಾತ್ರಸ್ಥಳವಾಗಿದೆ. ಕಾಳಿಕಾ ಪುರಾಣದ ಪ್ರಕಾರ ಕಾಮಾಖ್ಯ ಭಕ್ತರ ಕೋರಿಕೆಗಳನ್ನು ತೀರಿಸಿ. ಶಿವನ ಚಿಕ್ಕ ಹೆಂಡತಿಯಾಗಿ ಮುಕ್ತಿಯನ್ನು ಪ್ರಸಾಧಿಸುವ ಶಕ್ತಿ ದೇವತೆ ಎಂದು ವರ್ಣಿಸಲಾಗಿದೆ.
ಸತಿದೇವಿ
ಕಾಳಿಕಾ ಪುರಾಣದ ಪ್ರಕಾರ, ಈ ದೇವಾಲಯವು ಶಿವನಿಗಾಗಿ ಸತಿದೇವಿ ತನ್ನ ಸೊಗಸ್ಸನ್ನು ಅರ್ಪಿಸಿದ ರಹಸ್ಯ ಏಕಾಂತ ಪ್ರದೇಶವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ ಸತಿದೇವಿ ಶವವನ್ನು ಹಿಡಿದು ನೃತ್ಯ ಮಾಡುವಾಗ ಆಕೆಯ ಯೋನಿ ಭಾಗವು ಬಿದ್ದ ಸ್ಥಳವೇ ಈ ಕಾಮಾಖ್ಯ ದೇವಾಲಯವಾಗಿದೆ ಎಂದು ಹೇಳುತ್ತಾರೆ.
ಯೋನಿ ಭಾಗ
ಪಾರ್ವತಿ ದೇವಿಯ ಯೋನಿ ಭಾಗವು ಗುವಾಹಟಿಯ ನೀಲಚಲ ಪರ್ವತದ ಮೇಲೆ ಬೀಳುತ್ತದೆ. ಮಾನವ ಸೃಷ್ಠಿಗೆ ಮೂಲ ಕಾರಣ ಯೋನಿಯಾದ್ದರಿಂದ ಈ ಪ್ರದೇಶವನ್ನು ಎಲ್ಲಾ ಶಕ್ತಿ ಪೀಠಗಳಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅದೇ ಅಲ್ಲದೇ ಎಲ್ಲಾ ಶಕ್ತಿ ಪೀಠಗಳಿಗೆ ಆಧಾರ ಸ್ಥಾನ ಎಂದು ಭಾವಿಸುತ್ತಾರೆ. ಇಲ್ಲಿ ಪಾರ್ವತಿ ದೇವಿಯ ಯೋನಿ ಭಾಗ ಬಿದ್ದರಿಂದ ಈ ಪರ್ವತವು ನೀಲಿಯಾಗಿ ಮಾರ್ಪಾಟಾಗಿದೆ.
ಯೋನಿ ಪೂಜಾ
ಇಲ್ಲಿನ ಕಲ್ಲಿನಾಕಾರದ ಯೋನಿಯೇ ಕಾಮಾಕ್ಯ ದೇವಿಯ ನಿವಾಸ ಎಂದು ಹೇಳಲಾಗುತ್ತದೆ. ಒಮ್ಮೆ ಈ ಪರ್ವತಕ್ಕೆ ಬಂದು ಈ ತಾಯಿಯನ್ನು ದರ್ಶನ ಮಾಡಿದರೆ ಅಮರತ್ವ ಪಡೆಯುತ್ತಾರೆ ಎಂಬುದು ಪುರಾಣಗಳಲ್ಲಿ ಇದೆ.
ಮೊದಲ ದರ್ಶನ
ಕಾಮಾಕ್ಯ ದೇವಿಯನ್ನು ದರ್ಶನ ಮಾಡುವ ಮೊದಲು ಲಿಂಗ ಸ್ವರೂಪಿಯಾಗಿರುವ ಲಿಂಗವನ್ನು ದರ್ಶನ ಮಾಡಿಕೊಳ್ಳಬೇಕು. ಕಾಮಾಕ್ಯ ದೇವಿಯನ್ನು ಮಾತ್ರ ದರ್ಶನ ಮಾಡಿ ಲಿಂಗವನ್ನು ದರ್ಶನ ಮಾಡದಿದ್ದರೆ ಯಾತ್ರೆ ಪೂರ್ತಿಯಾಗುವುದಿಲ್ಲ ಎಂದು ಭಕ್ತರು ಭಾವಿಸುತ್ತಾರೆ.
ನರಕಾಸುರ
ನರಕಾಸುರನು ಕಾಮಾಖ್ಯ ದೇವಿಗೆ ದೇವಾಲಯವನ್ನು ನಿರ್ಮಾಣ ಮಾಡಿ, ಪೂಜೆಗಳನ್ನು ಮಾಡಿದನು. ಆತನ ಮರಣದ ನಂತರ (ಸತ್ಯಭಾಮ ನರಕಾಸುರನಿಗೆ ಸಂಹಾರ ಮಾಡಿದಳು) ಹಲವಾರು ಬಾರಿ ಪ್ರಕೃತಿ ವಿಕೋಪಕ್ಕೆ ಹಾನಿಯಾಗಿ ಮತ್ತೊಮ್ಮೆ ಕ್ರಿ.ಶ 8 ರಿಂದ 17 ನೇ ಶತಮಾನದ ಮಧ್ಯಕಾಲದಲ್ಲಿ ಆನೇಕ ಬಾರಿ ಪುನರ್ ನಿರ್ಮಾಣ ಮಾಡಿದರು.
ಉಮಾನಂದನು
ಕಾಮಾಖ್ಯ ದೇವಾಲಯದಲ್ಲಿ ಶಿವನನ್ನು 'ಉಮಾನಂದ" ಎಂದು ಕರೆಯುತ್ತಾರೆ. ಇಲ್ಲಿ ಭಕ್ತರು ಸ್ವಯಂ ಪೂಜೆಗಳನ್ನು ಮಾಡಲು ಅವಕಾಶವಿದೆ. ಜಂತುಗಳನ್ನು ಬಲಿ ನೀಡುವುದು ಕೂಡ ಇಲ್ಲಿ ಸರ್ವೆ ಸಾಧಾರಣವಾದ ವಿಷಯವಾಗಿದೆ.
ಪುರುಷ ಜಂತುಗಳನ್ನು
ಇಲ್ಲಿನ ದೇವಿಗೆ ಕಪ್ಪು ಬಣ್ಣ ಎಂದರೆ ತುಂಭ ಇಷ್ಟ. ಹಾಗಾಗಿಯೇ ಎಲ್ಲಾ ಕಪ್ಪು ಬಣ್ಣದ ಪ್ರಾಣಿಗಳನ್ನೆ ಅಂದರೆ ಕೋತಿ, ಮೇಕೆ, ಪಾರಿವಾಳ, ಕತ್ತೆಯಂತಹ ಪ್ರಾಣಿಗಳನ್ನು ಬಲಿ ನೀಡುತ್ತಾರೆ. ಇದು ಇಲ್ಲಿನ ಆಚಾರವಾಗಿದೆ. ಅದರಲ್ಲಿಯೂ ಪುರುಷ ಪ್ರಾಣಿಗಳನ್ನೇ ಹೆಚ್ಚಾಗಿ ಬಲಿ ನೀಡುತ್ತಾರೆ.
ಋತುಚಕ್ರ
ಇಲ್ಲಿನ ತಾಯಿಯು ಪ್ರತಿವರ್ಷ ಜೂನ್ ತಿಂಗಳ 2 ನೇ ವಾರದಲ್ಲಿ ಋತುಚಕ್ರ ಆಗುತ್ತಾಳೆ. ಆ ಸಮಯದಲ್ಲಿ ದೇವಾಲಯವನ್ನು 4 ದಿನಗಳು ಮುಚ್ಚುತ್ತಾರೆ. 5 ನೇ ದಿನದಂದು ದೇವಾಲಯವನ್ನು ಶುಚಿಗೊಳಿಸಿ ಭಕ್ತರಿಗೆ ಪ್ರವೇಶವನ್ನು ನೀಡುತ್ತಾರೆ. ಅಸ್ಸಾಂ ಭಾಷೆಯಲ್ಲಿ ಇದನ್ನು"ಅಂಬುಬಾಚಿ" ಎಂದು ಕೂಡ ಕರೆಯುತ್ತಾರೆ. ಆ ಸಮಯದಲ್ಲಿ ನಡೆಯುವ ಉತ್ಸವವನ್ನು "ಅಂಬುಬಾಚಿ ಮೇಳ" ಎಂದು ಕರೆಯುತ್ತಾರೆ.
ಪವಿತ್ರವಾಸ ಸ್ಥಳ
ಗುಡಿಯಲ್ಲಿನ ಮಧ್ಯ ಮಂಟಪವು ಅತ್ಯಂತ ಪವಿತ್ರವಾದುದು ಎಂದು ಭಕ್ತರು ಭಾವಿಸುತ್ತಾರೆ. ಸಹಜವಾಗಿಯೇ ಏರ್ಪಟ್ಟ ನೀರು ಯೋನಿ ಆಕಾರದಲ್ಲಿ ಪ್ರವಹಿಸುತ್ತದೆ. ಅಂಬುಬಾಚಿ ಎಂಬ ಹಬ್ಬವನ್ನು ಈ ಸಂದರ್ಭದಲ್ಲಿಯೇ ನಡೆಸುತ್ತಾರೆ. ಕಾಮಾಖ್ಯ ದೇವತೆಯ ರಸಜ್ವಲೆಯನ್ನು ಉತ್ಸವವಾಗಿ ನಿರ್ವಹಿಸುತ್ತಾರೆ. ಆ ಸಮಯದಲ್ಲಿ ಗರ್ಭಗುಡಿಯಿಂದ ಪ್ರವಹಿಸುವ ನೀರು ಕೆಂಪು ಬಣ್ಣದ ರೀತಿಯಲ್ಲಿ ಋತುಸ್ರಾವದಂತೆಯೇ ಕಾಣಿಸುತ್ತದೆ.
ಪವಿತ್ರವಾದ ಸ್ನಾನ ಮತ್ತು ದೇವತ ಮೂರ್ತಿ
ಈ ಪವಿತ್ರವಾದ ಕ್ಷೇತ್ರದ ನದಿಯಲ್ಲಿ ಸ್ನಾನ ಮಾಡಿದರೆ ಮೋಕ್ಷ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಇಲ್ಲಿ ಗಣೇಶ, ಸರಸ್ವತಿ ವಿಗ್ರಹವನ್ನು ಕಾಣಬಹುದಾಗಿದೆ. ಮಂದಿರದ ಒಳ ಹಾಗೂ ಹೋರ ಭಾಗದಲ್ಲಿ ಹಲವಾರು ದೇವತ ಮೂರ್ತಿ ಹಾಗೂ ರಾಜರ ಚಿತ್ರಗಳನ್ನು ಕಾಣಬಹುದಾಗಿದೆ.
ತಲುಪುವ ಬಗೆ?
ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿ ರೈಲು, ವಿಮಾನ, ಯಾತ್ರಾಟ್ರಾವೆಲ್ಸ್ ನಿಂದ ಪ್ರಯಾಣವನ್ನು ಮಾಡಬಹುದಾಗಿದೆ. ರಸ್ತೆಯ ಮೂಲಕ ಹಾಗೂ ರೈಲಿನ ಮೂಲಕ ಪ್ರಯಾಣ ಮಾಡುವವರಿಗೆ ಉತ್ತಮವಾದ ಅನುಭೂತಿ ಉಂಟಾಗುತ್ತದೆ.