Search
  • Follow NativePlanet
Share
» »ಸೀತಾ ನದಿಯಿಂದ ಉಂಟಾಗಿರುವ ಜೋಂಬ್ಲು ತೀರ್ಥ ಜಲಪಾತ ಎಲ್ಲಿದೆ ಗೊತ್ತಾ?

ಸೀತಾ ನದಿಯಿಂದ ಉಂಟಾಗಿರುವ ಜೋಂಬ್ಲು ತೀರ್ಥ ಜಲಪಾತ ಎಲ್ಲಿದೆ ಗೊತ್ತಾ?

ತೀರ್ಥ ಸ್ನಾನ ಮಾಡಿದ್ರೆ ಪುಣ್ಯ ಬರುತ್ತದೆ. ಪಾಪಗಳೆಲ್ಲಾ ತೊಳೆದುಹೋಗುತ್ತದೆ ಎನ್ನುತ್ತಾರೆ. ಅದೆಷ್ಟು ನಿಜ ಅಥವಾ ಸುಳ್ಳು ಅನ್ನೋದು ನಮಗೆ ತಿಳಿದಿಲ್ಲ. ಆದರೂ ಜನರು ತಮ್ಮ ಮನಃಶಾಂತಿಗೋಸ್ಕರ ತೀರ್ಥ ಸ್ನಾನ ಮಾಡುತ್ತಾರೆ. ಇಂದು ನಾವು ಒಂದು ತೀರ್ಥದ ಬಗ್ಗೆ ತಿಳಿಸಲಿದ್ದೇವೆ. ಅದು ಒಂದು ಜಲಪಾತವಾಗಿದೆ.

ಎಲ್ಲಿದೆ ಈ ತೀರ್ಥ

ಎಲ್ಲಿದೆ ಈ ತೀರ್ಥ

ಸೀತಾ ನದಿಯಿಂದ ನಿರ್ಮಿಸಲ್ಪಟ್ಟ ಸುಂದರ ಜಲಪಾತ ಜೋಮ್ಲು ತೀರ್ಥ. ಇದು ಕರ್ನಾಟಕದ ಉಡುಪಿ ಜಿಲ್ಲೆಯ ಹೆಬ್ರಿ ಗ್ರಾಮದ ಸಮೀಪ ಸೋಮೇಶ್ವರ ವನ್ಯಜೀವಿ ವ್ಯಾಪ್ತಿಯಲ್ಲಿದೆ. ಈ ಜಲಪಾತವು ಉಡುಪಿ ಪಟ್ಟಣದಿಂದ 40 ಕಿ.ಮೀ ದೂರದಲ್ಲಿದೆ.

ಜೋಮ್ಲು ತೀರ್ಥ

ಜೋಮ್ಲು ತೀರ್ಥ

ಜೋಮ್ಲು ತೀರ್ಥವು ಸುಮಾರು 20 ಅಡಿ ಎತ್ತರವಿರುವ ಒಂದು ಸಣ್ಣ ಜಲಪಾತವಾಗಿದೆ. ಇದು ಸೀತಾ ನದಿಯಿಂದ ನಿರ್ಮಿಸಲ್ಪಟ್ಟ ಎರಡನೇ ಜಲಪಾತವಾಗಿದೆ, ಮೊದಲನೆಯದು ಹಾಸನ ಜಿಲ್ಲೆಯ ಕೂಡ್ಲು ತೀರ್ಥ ಜಲಪಾತವಾಗಿದೆ.

ಸೂಕ್ತ ವಾರಾಂತ್ಯದ ತಾಣ

ಸೂಕ್ತ ವಾರಾಂತ್ಯದ ತಾಣ

ಈ ಸ್ಥಳವು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಾರಾಂತ್ಯದ ರಜಾದಿನಗಳಿಗೆ ಸೂಕ್ತವಾಗಿದೆ. ಏಕತಾನತೆಯ ವೇಳಾಪಟ್ಟಿಯಿಂದ ಮುಕ್ತವಾಗಲು ಬಯಸುವ ಸ್ಥಳೀಯ ಜನರಿಗೆ ಇದು ಒಂದು ಸೂಕ್ತವಾದ ಪಿಕ್ನಿಕ್ ತಾಣವಾಗಿದೆ.

ಪ್ರವಾಸಿಗರನ್ನು ಆಕರ್ಷಿಸುತ್ತದೆ

ಪ್ರವಾಸಿಗರನ್ನು ಆಕರ್ಷಿಸುತ್ತದೆ

ಜಲಪಾತದ ಉಲ್ಲಾಸಕರ ಮತ್ತು ಶಾಶ್ವತವಾದ ಸೌಂದರ್ಯವು ಬಹಳಷ್ಟು ಪ್ರವಾಸಿಗರನ್ನು ನಿಯಮಿತವಾಗಿ ಆಕರ್ಷಿಸುತ್ತದೆ. ಕಲ್ಲುಗಳು ಮತ್ತು ಸುತ್ತಮುತ್ತಲಿನ ಹಸಿರುಮನೆಗಳನ್ನು ಕೆಳಗೆ ಹರಿಯುವ ಬಿಳಿ ನೀರು ಈ ಸ್ಥಳಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಒಂದು ಅದ್ಭುತ ದೃಶ್ಯವನ್ನು ಒದಗಿಸುತ್ತದೆ.

ನೀರಿಗೆ ಇಳಿಯಲೇ ಬಾರದು

ನೀರಿಗೆ ಇಳಿಯಲೇ ಬಾರದು

ಸುಂದರವಾದ ಜಲಪಾತವು ಉಲ್ಲಾಸಕರ ನೀರಿನಲ್ಲಿ ಸ್ನಾನ ಮಾಡಲು ಸೂಕ್ತವಾಗಿದೆ. ಆದರೆ ಮುಂಗಾರು ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವವರು ಎಚ್ಚರವಾಗಿರಬೇಕು. ಮಳೆಗಾಲದಲ್ಲಿ ನೀರಿಗೆ ಇಳಿಯಲೇ ಬಾರದು. ಮಳೆಗಾಲದಲ್ಲಿ ರಕ್ತ ಹೀರುವ ಲೀಚ್‌ ಹುಳಗಳೂ ಜಾಸ್ತಿ ಇರುತ್ತವೆ. ಬಂಡೆಕಲ್ಲುಗಳು ಪಾಚಿಯಿಂದ ಜಾರುತ್ತಿರುತ್ತವೆ.

ಮಳೆಗಾಲದ ನಂತರ ಭೇಟಿ ನೀಡಿ

ಮಳೆಗಾಲದ ನಂತರ ಭೇಟಿ ನೀಡಿ

ಇಲ್ಲಿನ ನೀರಿನಲ್ಲಿ ಸ್ನಾನ ಮಾಡಬೇಕು. ಆಟವಾಡಬೇಕೆಂಬ ಆಸೆ ಇರುವವರು ಇಲ್ಲಿಗೆ ಮಳೆಗಾಲ ಕಳೆದ ನಂತರ ಭೇಟಿ ನೀಡುವುದು ಸೂಕ್ತವಾಗಿದೆ. ಇನ್ನು ಅಲ್ಲಿ ಸಮೀಪದಲ್ಲಿ ಯಾವುದೇ ಅಂಗಡಿಗಳಿಲ್ಲ. ಹಾಗಾಗಿ ನೀವು ಕುಡಿಯುವ ನೀರು ಹಾಗೂ ಆಹಾರವನ್ನು ನಿಮ್ಮ ಜೊತೆ ಕೊಂಡೊಯ್ಯುವುದು ಒಳಿತು.

ಈಜುವುದು ಬ್ಯಾನ್

ಈಜುವುದು ಬ್ಯಾನ್

ಈ ಜಲಪಾತದ ನೀರಿನಲ್ಲಿ ಈಜುವುದನ್ನು ಬ್ಯಾನ್‌ ಮಾಡಲಾಗಿದೆ. ಯಾಕೆಂದರೆ ಸಾಕಷ್ಟು ಜನರು ಈಜಲು ಹೋಗಿ ಪ್ರಾಣಕಳೆದುಕೊಂಡಿದ್ದಾರೆ. ಹಾಗಾಗಿ ಕತ್ತಲಾಗುವುದಕ್ಕೂ ಮೊದಲು ಈ ಜಲಪಾತದಿಂದ ಹೊರಬರುವುದು ಒಳಿತು.

ಮೀನಿಗೆ ಗಾಳ ಹಾಕಿ

ಮೀನಿಗೆ ಗಾಳ ಹಾಕಿ

ಇಲ್ಲಿ ನಿಮಗೆ ನೀರಿನಲ್ಲಿ ಆಟವಾಡಲು ಇಷ್ಟವಿಲ್ಲವೆಂದಾದಲ್ಲಿ, ನೀವು ಮೀನು ಹಿಡಿಯ ಬಯಸುವುದಾದರೆ ಮೀನಿನ ಗಾಳಕ್ಕೆ ಫಿಶಿಂಗ್ ರಾಡ್‌ನ್ನು ತರಬಹುದು. ಇದೊಂಥರಾ ಥ್ರಿಲ್ಲಿಂಗ್ ಆಗಿರುತ್ತದೆ. ಜೊತೆಗೆ ಸಮಯ ಕಳೆಯಲು ಸೂಕ್ತವಾಗಿದೆ.

ಭೇಟಿ ನೀಡಲು ಸೂಕ್ತ ಸಮಯ

ಭೇಟಿ ನೀಡಲು ಸೂಕ್ತ ಸಮಯ

ಜೋಮ್ಲು ತೀರ್ಥ ಜಲಪಾತಕ್ಕೆ ಭೇಟಿ ನೀಡಲು ಸೂಕ್ತವಾದ ಕಾಲವೆಂದರೆ ನವೆಂಬರ್‌ನಿಂದ ಏಪ್ರಿಲ್ ವರೆಗಿನ ಮಳೆಗಾಲದ ನಂತರದ ಸಮಯ. ಸಾಹಸಮಯ ಅನ್ವೇಷಕರು ಮಳೆಗಾಲದಲ್ಲಿ ಕೂಡಾ ಇಲ್ಲಿಗೆ ಭೇಟಿ ನೀಡುತ್ತಾರೆ. ಮಳೆಗಾಲದ ನಂತರದ ತಿಂಗಳುಗಳು ಆಹ್ಲಾದಕರ ಉಷ್ಣಾಂಶವನ್ನು ಹೊಂದಿರುತ್ತವೆ ಮತ್ತು ದೃಶ್ಯಗಳನ್ನು ನೋಡಲು ಸೂಕ್ತವಾಗಿವೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

ಕಾಪು ಬೀಚ್ , ಇದು ಉಡುಪಿಯಿಂದ 12 ಕಿ.ಮೀ ದೂರದಲ್ಲಿದೆ. ಕಡಲತೀರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. 100 ಅಡಿ ಎತ್ತರದ ದೀಪವು ಒಂದು ಸಣ್ಣ ಬೆಟ್ಟದ ಮೇಲೆ ಇದೆ. ಉಡುಪಿಯ ಶ್ರೀ ಕೃಷ್ಣ ಮಂದಿರ. ಇದೊಂದು ಪ್ರಸಿದ್ಧ ದೇವಾಲಯವಾಗಿದೆ. ಮಲ್ಪೆ ಬೀಚ್, ಇದು ಉಡುಪಿಯಿಂದ ೬ ಕಿ.ಮೀ ದೂರದಲ್ಲಿದೆ. ಇಲ್ಲಿ ಪ್ರವಾಸಿಗರು ಬೋಟಿಂಗ್, ಫಿಶಿಂಗ್ ಮಾಡಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+