Search
  • Follow NativePlanet
Share
» »ಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿ

ಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿ

ಭಾರತದಲ್ಲಿನ ಅನೇಕ ನಗರಗಳು ಪುರಾಣಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಅಂತಹ ನಗರಗಳಲ್ಲಿ ಹರಿಯಾಣ ಕೂಡಾ ಒಂದು. ನೀವು ಮಹಾಭಾರತವನ್ನು ಓದಿದ್ದರೆ, ಅಥವಾ ಅದರ ಕಥೆಯನ್ನು ಕೇಳಿದ್ದರೆ ಕೌರವ ಪಾಂಡವರ ನಡುವಿನ ಯುದ್ಧದ ಬಗ್ಗೆ ನಿಮಗೆ ತಿಳಿದಿರಬಹುದು. ಈ ಯುದ್ಧ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿತ್ತು ಎನ್ನಲಾಗುತ್ತದೆ. ಅದೇ ಸ್ಥಳದಲ್ಲಿ ಕೃಷ್ಣನು ಅರ್ಜುನನಿಗೆ ಉಪದೇಶ ನೀಡಿದ್ದನು.ಇಂದಿಗೂ ಕೂಡಾ ಹರಿಯಾಣದ ಈ ಸ್ಥಳದಲ್ಲಿ ಕೃಷ್ಣ ಹಾಗು ಮಹಾಭಾರತಕ್ಕೆ ಸಂಬಂಧಪಟ್ಟ ಕುರುಹುಗಳನ್ನು ಕಾಣಬಹುದಾಗಿದೆ. ನೀವು ಧಾರ್ಮಿಕ ಇತಿಹಾಸದಲ್ಲಿ ಆಸಕ್ತಿ ಹೊಂದಿದ್ದರೆ ಒಮ್ಮೆ ಹರಿಯಾಣವನ್ನು ಸುತ್ತಿ ಅಲ್ಲಿನ ಧಾರ್ಮಿಕ ಸ್ಥಳಗಳ ಬಗ್ಗೆ ತಿಳಿಯಲೇ ಬೇಕು.

ಸ್ತಾನೇಶ್ವರ ಮಂದಿರ

ಸ್ತಾನೇಶ್ವರ ಮಂದಿರ

Pc: OjAg

ಹರಿಯಾಣದ ಕುರುಕ್ಷೇತ್ರದಲ್ಲಿರುವ ಶ್ರೀ ಸ್ತಾನೇಶ್ವರ ಮಂದಿರವು ಶಿವನಿಗೆ ಸಮರ್ಪಿತವಾದಂತಹದ್ದು. ಈ ದೇವಸ್ಥಾನದ ಮುಂಭಾಗದಲ್ಲಿ ಒಂದು ಸಣ್ಣ ಕುಂಡವಿದೆ. ಆ ಕುಂಡದಲ್ಲಿನ ನೀರು ಎಷ್ಟು ಪವಿತ್ರವೆಂದರೆ ಆ ನೀರಿನ ಒಂದು ಹನಿಯಿಂದ ರಾಜ ಬಾನನ ಕುಷ್ಠರೋಗ ನಿವಾರಣೆಯಾಗಿತ್ತು ಎನ್ನಲಾಗುತ್ತದೆ. ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾದ ಮೊದಲ ದೇವಸ್ಥಾನ ಇದು ಎನ್ನಲಾಗುತ್ತದೆ. ಹಾಗಾಗಿ ಈ ದೇವಸ್ಥಾನದ ದರ್ಶನದ ಹೊರತಾಗಿ ಕುರುಕ್ಷೇತ್ರದ ಯಾತ್ರೆ ಪೂರ್ಣವಾಗುವುದಿಲ್ಲ.

ಬ್ರಹ್ಮ ಸರೋವರ

ಬ್ರಹ್ಮ ಸರೋವರ

Pc: Gagan.leonidas

ಸ್ತಾನೇಶ್ವರದಲ್ಲಿರುವ ಪವಿತ್ರವಾದ ಕೆರೆಯೇ ಬ್ರಹ್ಮ ಸರೋವರ. ಇಲ್ಲಿ ಗ್ರಹಣದ ಸಂದರ್ಭ ಪ್ರತಿವರ್ಷ ಸಾವಿರಾರು ತೀರ್ಥಯಾತ್ರಿಗಳು ಸ್ನಾನ ಮಾಡಲು ಬರುತ್ತಾರೆ. ಈ ಮೂಲಕ ತಮ್ಮ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ. ದುರ್ಯೋದನನು ಸಾವಿನಿಂದ ಪಾರಾಗಲೂ ಇದೇ ಸರೋವರದಲ್ಲಿ ಅಡಗಿದ್ದ ಎನ್ನಲಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಇಲ್ಲಿ ದೀಪವನ್ನು ನದಿಯಲ್ಲಿ ಹರಿಯ ಬಿಡಲಾಗುತ್ತದೆ. ಆಗ ಆ ದೃಶ್ಯ ನೋಡಲು ಸುಂದರವಾಗಿರುತ್ತದೆ.

ಜ್ಯೋತೀಸರ್

ಜ್ಯೋತೀಸರ್

Pc: Ravinder M A

ಒಂದು ಪವಿತ್ರವಾದ ಜ್ಯೋತೀಸರ್ ಕುರುಕ್ಷೇತ್ರದಲ್ಲಿರುವ ಒಂದು ನಗರವಾಗಿದೆ. ಇದು ಆಲದ ಮರಕ್ಕೆ ಪ್ರಸಿದ್ಧಿಯಾಗಿದೆ. ಯಾಕೆಂದರೆ ಈ ಮರದ ಅಡಿಯಲ್ಲೇ ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶ ನೀಡಿದ್ದನು. ಕೃಷ್ಣನು ಸಾರಥಿಯ ರೂಪದಲ್ಲಿ ರಥದಲ್ಲಿ ಕುಳಿತಿದ್ದರೆ ಅರ್ಜುನನು ವಿನಮೃವಾಗಿ ನೆಲದ ಮೇಲೆ ನಿಂತಿದ್ದನು. ಈ ಮೂರ್ತಿಯನ್ನು 1967ರಲ್ಲಿ ಕಂಚಿ ಕಾಮ ಕೋಟಿಯ ಶಂಕರಾಚಾರ್ಯರಿಂದ ತಯಾರಿಸಲಾಗಿತ್ತು. ಮನಸಾ ದೇವಿ ಮಂದಿರ ಪಂಚಕುಲ ಜಿಲ್ಲೆಯಲ್ಲಿರು ಈ ಮನಸಾ ಮಂದಿರವು ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದು ಶಕ್ತಿಗೆ ಸಮರ್ಪಿತವಾದಂತಹ ಮಂದಿರ. ಸುಮಾರು 100 ಎಕರೆ ಸ್ಥಳದಲ್ಲಿರುವ ಈ ಮಂದಿರ ಒಂದು ಬೆಟ್ಟದ ಮೇಲಿದೆ.

ಆಗ್ರಹ ಧಾಮ

ಆಗ್ರಹ ಧಾಮ

ಹಿಸಾರದಲ್ಲಿರುವ ಆಗ್ರಹ ಧಾಮ ಹಿಂದುಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. 1976ರಲ್ಲಿ ಈ ಮಂದಿರದ ನಿರ್ಮಾಣ ಮಾಡಲಾಯಿತು. ಈ ಮಂದಿರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮಧ್ಯದ ಭಾಗ ಲಕ್ಷ್ಮೀ ದೇವಿಗೆ ಸಮರ್ಪಿತವಾಗಿದೆ. ಶಕ್ತಿ ಕೆರೆ ಎನ್ನುವ ದೊಡ್ಡ ಸರೋವರ ಈ ಮಂದಿರದ ಹಿಂಭಾಗದಲ್ಲಿದೆ.

More News

Read more about: india temple krishna mahabharata
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+