Search
  • Follow NativePlanet
Share
» »ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಸಮಾಧಿಗಳು ಎಂದರೆ ಭಯಬೀಳಬೇಕಾದ ಅವಶ್ಯಕತೆ ಏನಿಲ್ಲ. ದೆವ್ವ, ಭೂತದ ತಾಣದ ಬಗ್ಗೆ ಅಂತೂ ಮಾಹಿತಿಯನ್ನು ನೀಡುತ್ತಿಲ್ಲ. ಯುದ್ಧ ಪ್ರದೇಶಗಳ ಪ್ರವಾಸ ಮಾಡಬೇಕು ಎಂದು ಎಂದಾದರೂ ಅಂದುಕೊಂಡಿದ್ದೀರಾ? ಭಾರತ ದೇಶವು ವಿಶ್ರಾಂತಿಗಾಗಿ, ಹಾನಿಮೂನ್‍ಗಳಿಗೂ ಕೂಡ

ಸಮಾಧಿಗಳು ಎಂದರೆ ಭಯಬೀಳಬೇಕಾದ ಅವಶ್ಯಕತೆ ಏನಿಲ್ಲ. ದೆವ್ವ, ಭೂತದ ತಾಣದ ಬಗ್ಗೆ ಅಂತೂ ಮಾಹಿತಿಯನ್ನು ನೀಡುತ್ತಿಲ್ಲ. ಯುದ್ಧ ಪ್ರದೇಶಗಳ ಪ್ರವಾಸ ಮಾಡಬೇಕು ಎಂದು ಎಂದಾದರೂ ಅಂದುಕೊಂಡಿದ್ದೀರಾ? ಭಾರತ ದೇಶವು ವಿಶ್ರಾಂತಿಗಾಗಿ, ಹಾನಿಮೂನ್‍ಗಳಿಗೂ ಕೂಡ ಒಂದು ಉತ್ತಮವಾದ ದೇಶ. ದೇಶದಲ್ಲಿ ನಡೆಯುವ ಯುದ್ಧಗಳನ್ನು ಗುರುತಿಸುವ ಹಾಗೆ ಅನೇಕ ಪ್ರದೇಶಗಳನ್ನು ಕಾಣಬಹುದು. ಪ್ರಪಂಚ ಯುದ್ಧಗಳ ಚರಿತ್ರೆಯಲ್ಲಿ ಭಾರತದಲ್ಲಿಯೂ ಕೂಡ ಕೆಲವು ಪ್ರಧಾನವಾದ ಯುದ್ಧಗಳು ನಡೆದಿವೆ.

ಆ ಪ್ರದೇಶಗಳಲ್ಲೆವನ್ನೂ ಪರಿಶೀಲಿಸಿದರೆ ಆ ಯುದ್ಧಗಳು ಹೇಗೆ ನಡೆದವು? ಎಲ್ಲಿ ನಡೆದವು? ಯಾರ ಮಧ್ಯೆ ನಡೆದವು? ಎಂಬುದರ ಬಗ್ಗೆ ಆ ಪ್ರದೇಶದ ಸ್ಥಳಪುರಾಣ ತಿಳಿಸುತ್ತದೆ. ಭಾರತದಲ್ಲಿನ ಕೆಲವು ಯುದ್ಧ ಭೂಮಿಗಳನ್ನು ಲೇಖನದ ಮೂಲಕ ತಿಳಿಯೋಣ.

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಕುರುಕ್ಷೇತ್ರ
ಕುರುಕ್ಷೇತ್ರ ಒಂದು ಚಾರಿತ್ರಿಕ ಯುದ್ಧ. ಪಾಂಡವರ ಹಾಗು ಕೌರವರ ಮಧ್ಯೆ ನಡೆದ ಯುದ್ಧವೇ ಕುರುಕ್ಷೇತ್ರ. ಇದು ಹಿಂದೂಗಳ ಪವಿತ್ರ ಇತಿಹಾಸ ಹೊಂದಿರುವ ಮಹಾಭಾರತ. ಈ ಕುರುಕ್ಷೇತ್ರದ ರಣರಂಗದಲ್ಲಿಯೇ ಶ್ರೀ ಕೃಷ್ಣ ಭಗವತ್ ಗೀತೆಯನ್ನು ಅರ್ಜುನನಿಗೆ ಉಪದೇಶಿಸಿದನು. ಈ ಹರಿಯಾಣ ನಗರದಲ್ಲಿ ಪ್ರವಾಸಿ ಆರ್ಕಷಣೆಗಳು ಅನೇಕವಿವೆ. ಅವುಗಳಲ್ಲಿ ಭೀಷ್ಮ ಕುಂಡ, ಬ್ರಹ್ಮ ಸರೋವರ, ಜ್ಯೋತಿಸಾರ್‍ನಂತಹ ಅನೇಕ ಚಾರಿತ್ರಿಕ ತಾಣಗಳು ಇಲ್ಲಿವೆ.

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಪಾಣಿಪತ್
ಪಾಣಿಪತ್‍ನಲ್ಲಿ ನಡೆದ ಯುದ್ಧಗಳು ಅತಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಿರುವ ತಾಣ. ಈ ಪ್ರದೇಶವು ಹರಿಯಾಣ ರಾಜ್ಯದಲ್ಲಿದೆ. ಈ ಯುದ್ಧವು ವಿವಿಧ ವಂಶಗಳಿಗೆ ಸೇರಿದ ರಾಜರ ಮಧ್ಯೆ ನಡೆಯಿತು. ಈ ಮೂರು ಪಾಣಿಪತ್ ಯುದ್ಧಗಳೂ 1526, 1556 ಮತ್ತು 1761 ರಲ್ಲಿ ನಡೆಯಿತು. ಮೊದಲ ಪಾನಿಪತ್ ಯುದ್ಧದ ಕಾರಣವಾಗಿ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಏರ್ಪಟ್ಟಿತು. ಈ ಯುದ್ಧ ಭೂಮಿಯಲ್ಲಿ ನಿರ್ಮಾಣ ಮಾಡಿದ ಇಬ್ರಾಹಿಂ ಲೋದಿ ಸಮಾಧಿ ಪ್ರಸಿದ್ಧವಾದ ಪ್ರವಾಸ ತಾಣವಾಗಿದೆ.

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ದೆಹಲಿ
ಭಾರತದಲ್ಲಿಯೇ ಯುದ್ಧಭೂಮಿ ಪ್ರವಾಸದಲ್ಲಿ ದೆಹಲಿ ಪ್ರಸಿದ್ಧ ಹೊಂದಿರುವ ಸ್ಥಳವಾಗಿದೆ. ದೆಹಲಿ ನಗರದಲ್ಲಿ ದೊಡ್ಡ ದೊಡ್ಡ ಹಾಗು ಅನೇಕ ಯುದ್ಧಗಳು ನಡೆದಿದೆ. ಈ ಕಾರಣವಾಗಿ ಚರಿತ್ರೆಯ ಪುಸ್ತಕದಲ್ಲಿ ಪ್ರಧಾನವಾಗಿ ಅಚ್ಚಾಗಿದೆ. ದೆಹಲಿಯಲ್ಲಿನ ಇಂಡಿಯಾ ಗೇಟ್, ಖೂನಿ ದರ್ವಾಜಾ ನಂತಹ ಕೆಲವು ಚಾರಿತ್ರಿಕ ಯುದ್ಧ ಭೂಮಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಮೈಸೂರು
ಮೈಸೂರು ನಗರವು ಅನೇಕ ಯುದ್ಧಗಳ ಚರಿತ್ರೆಯನ್ನು ಹೊಂದಿದೆ. ಟಿಪ್ಪು ಸುಲ್ತಾನ್‍ನಂತಹ ದೊಡ್ಡ ದೊಡ್ಡ ಆಳ್ವಿಕೆಕಾರರು ಅನೇಕ ಆಂಗ್ಲೋ-ಮ್ಯಸೂರು ಯುದ್ಧಗಳು ಮಾಡಿದ್ದಾರೆ. ಬ್ರಿಟಿಷ್‍ರು ಭಾರತಕ್ಕೆ ಕಾಲಿಟ್ಟಾಗಿನಿಂದ ಅವರ ಸರ್ಕಾರಕ್ಕೆ 1767 ರಿಂದ 1789 ರ ಮಧ್ಯೆ ನಡೆದ ಈ ಆಂಗ್ಲೋ ಮೈಸೂರು ಯುದ್ಧಗಳು ದೊಡ್ಡ ಘಟನೆಯಾಗಿತ್ತು.


Photo Courtesy: Riju K

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಜಿಲಿಯನ್ವಾಲಾ ಬಾಗ್
ಜಿಲಿಯನ್ವಾಲಾ ಬಾಗ್ ಪ್ರದೇಶವು ಅಮೃತ್ ಸರ್‍ನಲ್ಲಿನ ಒಂದು ಪಬ್ಲಿಕ್ ಗಾರ್ಡನ್‍ನಲ್ಲಿದೆ. ಬ್ರಿಟಿಷ್ ಪ್ರಭುತ್ವವು ಇಲ್ಲಿ ಹತ್ಯಾಕಾಂಡವನ್ನು ನಿರ್ವಹಿಸಿದ್ದಾಗಿನಿಂದ ಈ ಪ್ರದೇಶವು ಪ್ರಸಿದ್ಧಿಯನ್ನು ಪಡೆಯಿತು. ಈ ಹತ್ಯಾಕಾಂಡ ಅವರ ಜ್ಞಾಪಕಾರ್ತವಾಗಿ ಇಲ್ಲಿ ಒಂದು ಮೆಮೋರಿಯಲ್ ನಿರ್ಮಾಣ ಮಾಡಿದರು. ಇದನ್ನು ತಪ್ಪದೇ ಎಲ್ಲಾ ಪ್ರವಾಸಿಗರು ಭೇಟಿ ನೀಡಲೇಬೇಕಾದ ತಾಣವಾಗಿದೆ.

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇಂಫಾಲ್
ಇಂಫಾಲ್ ಯುದ್ಧವು 2 ನೇ ಪ್ರಪಂಚ ಯುದ್ಧದ ಸಮಯದಲ್ಲಿ ನಡೆಯಿತು. ಪ್ರಪಂಚ ಚರಿತ್ರೆಯಲ್ಲಿ ಇದು ಪ್ರಸಿದ್ಧಿ ಹೊಂದಿರುವ ತಾಣವಾಗಿದೆ. ಏಶಿಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಜಪಾನ್ ಅವರ ಸೈನ್ಯವನ್ನು ಹಿಮ್ಮೆಟಿಸಲಾಯಿತು. ಇಂಫಾಲ್‍ನಲ್ಲಿನ ಮಿತ್ರ ಕೂಟವನ್ನು ನಾಶ ಮಾಡಿ ಭಾರತವನ್ನು ಜಯಿಸಬೇಕು ಎಂದು ಜಪಾನ್ ಸಿದ್ಧವಾಯಿತು. ಈ ಯುದ್ಧ ಪ್ರದೇಶದಲ್ಲಿ ಒಂದು ಯುದ್ಧ ಸ್ಮಾರಕವನ್ನು ಮರಣಿಸಿದ ಸೈನಿಕರ ಗೌರರ್ವಾಥವಾಗಿ ನಿರ್ಮಾಣ ಮಾಡಿದರು.

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಕೋಹಿಮಾ, ನಾಗಾಲ್ಯಾಂಡ್
ನಾಗಾಲ್ಯಾಂಡ್‍ನಲ್ಲಿನ ಕೋಹಿಮಾದ ಮಿತ್ರ ಕೂಟದಲ್ಲಿನ 1420 ಮಂದಿ ಸೈನಿಕರ ಸ್ಮಾಶನವಿದೆ. ಇವರ ನೆನೆಪಿಗಾಗಿ ಒಂದು ಪ್ರಸಿದ್ಧ ಮೆಮೋರಿಯಾಲ್ ಸ್ತೂಪವನ್ನು ನಿರ್ಮಾಣ ಮಾಡಿದರು. ಇದು ಪ್ರಪಂಚ ಪ್ರಸಿದ್ಧವಾದ ತಾಣ ಎಂದೇ ಹೇಳಬಹುದು. ಇದರ ಮೇಲೆ ಒಂದು ಲಿಖಿತವನ್ನು ಕೂಡ ಬರೆದಿದ್ದಾರೆ.

Photo Courtesy: Rupkamal Sarma

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಇದು ಸಮಾಧಿಗಳ ಪ್ರವಾಸ....ಒಮ್ಮೆ ಭೇಟಿ ನೀಡಿ ಬನ್ನಿ..

ಕಾರ್ಗಿಲ್
ಕಾರ್ಗಿಲ್ ಪ್ರದೇಶದಲ್ಲಿನ ಪರ್ವತ ಪ್ರದೇಶದಲ್ಲಿ ಪ್ರಸಿದ್ಧ 1999 ರಲ್ಲಿ ಕಾರ್ಗಿಕ್ ಯುದ್ಧವು ನಡೆಯಿತು. ಇದರ ಲೈನ್ ಆಫ್ ಕಂಟ್ರೋಲ್‍ಗೆ ಸಮೀಪದಲ್ಲಿಯೇ ಇದೆ. ಈ ಯುದ್ಧವು ಭಾರತ ಮತ್ತು ಪಾಕಿಸ್ತಾನ ದೇಶದ ಮಧ್ಯೆ ನಡೆಯಿತು. ಇದನ್ನು ಅಪರೇಷನ್ ವಿಜಯ್ ಎಂದು ಕರೆಯುತ್ತಾರೆ. ಈ ಪ್ರದೇಶವು ಚಾರಿತ್ರಿಕವಾಗಿಯೇ ಅಲ್ಲದೇ ಬೌದ್ಧರಿಗೂ ಕೂಡ ಪ್ರಸಿದ್ಧವಾದ ಸ್ಥಳವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+