Search
  • Follow NativePlanet
Share
» »ಬಂಡೀಪುರ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿದೆ

ಬಂಡೀಪುರ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿದೆ

ಬಂಡೀಪುರ ಅಭಯಾರಣ್ಯ ಪ್ರದೇಶವು ಭಾರತದ ಅತ್ಯುತ್ತಮವಾದ ಹುಲಿಸಂರಕ್ಷಣಾ ಕೇಂದ್ರಗಳಲ್ಲಿ ಒಂದಾಗಿದ್ದು, ಈ ಅಭಯಾರಣ್ಯವು ಸುಮಾರು 70 ಹುಲಿಗಳನ್ನು ಹೊಂದಿದೆ, ಈ ಸ್ಥಳವು ಮೈಸೂರಿನಿಂದ ಕೇವಲ 80 ಕಿ.ಮೀ ಮತ್ತು ಬೆಂಗಳೂರಿನಿಂದ ಸುಮಾರು 220 ಕಿ.ಮೀ ದೂರದಲ್ಲಿದೆ ಅಲ್ಲದೆ ಈ ಸ್ಥಳಕ್ಕೆ ಇನ್ನಿತರ ಸ್ಥಳಗಳಿಂದಲೂ ಹೋಗಬಹುದಾಗಿದೆ.

bandipurnationalpark

ಈ ಸ್ಥಳ ಇಲ್ಲಿಯ ವನ್ಯಜೀವಿಗಳು ಮತ್ತು ಇನ್ನಿತರ ವಿಷಯಗಳ ಬಗ್ಗೆ ತಿಳಿಯೋಣ

ಬಂಡೀಪುರದ ಅಭಯಾರಣ್ಯವು ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಗಳಲ್ಲಿ ಅನುಕ್ರಮವಾಗಿ ಮುದುಮಲೈ ಮತ್ತು ವಯನಾಡ್ ಎಂದು ಕರೆಯಲ್ಪಡುವ ಸ್ಥಳಗಳಲ್ಲಿ ವಿಸ್ತರಿಸಲ್ಪಟ್ಟಿದ್ದು, ಇವುಗಳು ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಅರಣ್ಯ ಮೀಸಲು ಪ್ರದೇಶವಾಗಿ ರೂಪಿತಗೊಂಡಿದೆ. ಇದು ವಿಶ್ವವಿಖ್ಯಾತ ಸೈಲೆಂಟ್ ವ್ಯಾಲಿ ಎಂದು ಪ್ರಸಿದ್ದಿಯನ್ನು ಪಡೆದ ಸಂರಕ್ಷಿತ ನೀಲಗಿರಿ ಮರಗಳಿರುವ ಮೀಸಲು ಪ್ರದೇಶದ ಭಾಗವನ್ನೂ ಒಳಗೊಂಡಿದೆ.

ಕಬಿನಿ ನದಿ ದಡದಲ್ಲಿ ನೆಲೆಸಿರುವ ಬಂಡೀಪುರ ಅರಣ್ಯ ಪ್ರದೇಶವು ಚಿರತೆ, ಕಾಡೆಮ್ಮೆ, ಅನೇಕ ಜಾತಿಯ ಜಿಂಕೆಗಳು, ಕಾಡು ಆನೆಗಳು, ಕಾಡುಹಂದಿ, ನರಿ, ಇತ್ಯಾದಿ ವನ್ಯಜೀವಿಗಳಿಗೆ ನೆಲೆಯಾಗಿದೆ. ಕಬಿನಿಯಿಂದ ಪೋಷಿಸಲ್ಪಡುವ ಅನೇಕ ತೊರೆಗಳು ಮತ್ತು ಭೂದೃಶ್ಯವನ್ನು ಆವರಿಸಿರುವ ಇತರ ನೀರಿನ ಪ್ರದೇಶಗಳು ಅರಣ್ಯ ಹಾಗೂ ಇದರ ಮೀಸಲು ಪ್ರದೇಶದ ಎಲ್ಲಾ ನಿವಾಸಿಗಳಿಗೆ ಉಪಯೋಗಕ್ಕೆ ಬೇಕಾಗುವ ಹಾಗೆ ಸಾಕಷ್ಟು ನೀರನ್ನು ಒದಗಿಸಿಕೊಡುತ್ತದೆ.

ಬಂಡೀಪುರದ ಕಾಡುಗಳಲ್ಲಿ ರಾಬಿನ್ ಗಳು, ಕಾಡು ಕೋಳಿಗಳು, ಪಾರ್ಟ್ರಿಡ್ಜ್ ಗಳು,ಮತ್ತು ನವಿಲುಗಳು, ನವಿಲುಗಳು, ಬಟಾಣಿಗಳು, ಪಾರಿವಾಳಗಳು ಮುಂತಾದ ಅನೇಕ ರೀತಿಯ ಅಪರೂಪದ ಪಕ್ಷಿಗಳನ್ನು ನೀವು ಕಾಣಬಹುದು. ಶ್ರೀಗಂಧ (ಈ ಪ್ರದೇಶವು ಶ್ರೀಗಂಧದ ಮರಗಳನ್ನು ಹೊಂದಿರುವುದಕ್ಕೆ ತುಂಬಾ ಪ್ರಸಿದ್ಧವಾಗಿದೆ), ರೋಸ್ ವುಡ್, ಮತ್ತು ತೇಗದ ಮರಗಳು ಹಾಗೂ ಇನ್ನಿತರ ಮರಗಳ ಜೊತೆಗೆ ವಿವಿಧ ವನ್ಯಜೀವಿಗಳಿಗೆ ನೈಸರ್ಗಿಕ ಆವಾಸಸ್ಥಾನವನ್ನು ಒದಗಿಸುತ್ತವೆ ಹಾಗೂ ವಿವಿಧ ಸಸ್ಯವರ್ಗಗಳು ಈ ಪ್ರಭೇದಗಳಿಗೆ ನೈಸರ್ಗಿಕ ಹೊದಿಕೆಯನ್ನು ಒದಗಿಸುತ್ತವೆ.

ಬಂಡೀಪುರದಲ್ಲಿ ಅನೇಕ ಬಗೆಯ ಹಲ್ಲಿಗಳು ಮತ್ತು ಊಸರವಳ್ಳಿಗಳಲ್ಲದೆ, ಉಷ್ಣವಲಯದ ಕಾಳಿಂಗ ಸರ್ಪಗಳು, ವೈಪರ್‌ಗಳು, ಆಡ್ಡರ್‌ಗಳು ಮತ್ತು ಇಲಿ ಹಾವುಗಳಂತಹ ಅನೇಕ ಸರೀಸೃಪಗಳಿಗೆ ನೆಲೆಯಾಗಿದೆ.

bandipur-2

ವನ್ಯಜೀವಿ ಪ್ರವಾಸೋದ್ಯಮದಲ್ಲಿಯ ಆಯ್ಕೆಗಳು

ಮುಂಜಾನೆ ಅಥವಾ ಮುಸ್ಸಂಜೆಯ ಸಮಯದಲ್ಲಿ ನೀವು ಕಾಡಿನಲ್ಲಿ ವನ್ಯಜೀವಿ ಸಫಾರಿಗೆ ಹೋಗಬಹುದು ಮತ್ತು ಈ ಸಮಯದಲ್ಲಿ ಅನೇಕ ಪ್ರಾಣಿಗಳು ತಮ್ಮ ಬಾಯಾರಿಕೆಯನ್ನು ನೀಗಿಸಲು ನೀರಿರುವ ಜಾಗಗಳಿಗೆ ಬರುವುದನ್ನುಕಾಣಬಹುದು. ಸಂರಕ್ಷಿತ ಪ್ರದೇಶದಲ್ಲಿ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದ್ದು, ಸಫಾರಿಗಳಿಗೆ ಜೀಪ್‌ಗಳು ಲಭ್ಯವಿರುತ್ತವೆ ಅಥವಾ ನೀವು ಅರಣ್ಯ ಇಲಾಖೆಯ ಕಛೇರಿಯಿಂದ ನಡೆಸುವ ಪ್ರವಾಸಿ ಬಸ್‌ನಲ್ಲಿ ಹೋಗಬಹುದು.
ಅನೇಕ ಅರಣ್ಯ ಇಲಾಖೆಯ ಲಾಡ್ಜ್ ಗಳು, ರೆಸಾರ್ಟ್ ಗಳು ಮತ್ತು ಹೋಟೆಲ್ ಗಳು ವಸತಿ ಆಯ್ಕೆಗಳನ್ನು ಒದಗಿಸುತ್ತವೆ, ಇದರ ಮೂಲಕ ಪ್ರವಾಸಿಗರು ಪ್ರಕೃತಿಯನ್ನು ಅತ್ಯುತ್ತಮವಾಗಿ ಆನಂದಿಸಬಹುದು.

ಬಂಡೀಪುರದಲ್ಲಿನ ಪ್ರವಾಸಿ ತಾಣಗಳು

ಗೋಪಾಲಸ್ವಾಮಿ ಬೆಟಾ ದೇವಾಲಯ, ಮತ್ತು ಕಬಿನಿ ಅಣೆಕಟ್ಟಿನಂತಯ ಹಲವಾರು ಭೇಟಿಕೊಡಬಹುದಾದ ಸ್ಥಳಗಳನ್ನು ಬಂಡೀಪುರ ಅರಣ್ಯಕ್ಕೆ ಸಮೀಪದಲ್ಲಿ ಕಾಣಬಹುದಾಗಿದೆ. ನಿಮ್ಮ ರಜಾದಿನಗಳನ್ನು ನಿಮ್ಮ ಕಲ್ಪನೆಯಂತೆ ಕಾಡಿನ ಆನಂದಮಯ ಮೌನ ಹಾಗೂ ವನ್ಯಜೀವಿಗಳ ಜೊತೆಗೆ ಕಳೆಯಲು ಬಯಸುವಿರಾದಲ್ಲಿ, ಕರ್ನಾಟಕದ ಬಂಡೀಪುರವು ನಿಮಗೆ ಪರಿಪೂರ್ಣವಾಗಿ ಆನಂದವನ್ನು ಒದಗಿಸುವ ಸ್ಥಳವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+