ಮಂಡ್ಯ, ಕರ್ನಾಟಕದ ಆಗ್ನೇಯ ಭಾಗದಲ್ಲಿರುವ ಒಂದು ಸಣ್ಣ ಪಟ್ಟಣ, ಇದು ಒಂದು ರೀತಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನೊಳಗೊಂಡ ಅಸಾಮಾನ್ಯ ಪ್ರವಾಸಿ ತಾಣವಾಗಿದೆ. ಮಂಡ್ಯದ ಈ ಪುಟ್ಟ ಪಟ್ಟಣವು 1939 ರಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ಇದು ಬೆಂಗಳೂರಿನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ. ಸುಂದರವಾದ ಜಿಲ್ಲೆ ಹಾಸನ, ಮೈಸೂರು, ಬೆಂಗಳೂರು ಮತ್ತು ತುಮಕೂರಿನೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ ಮತ್ತು ಮಹಾನ್ ಋಷಿ ಮಾಂಡವ್ಯರ ಹೆಸರನ್ನು ಈ ನಗರಕ್ಕೆ ಇಡಲಾಗಿದೆ.
ಹಿತವಾದ ಸೊಂಪಾದ ಭೂದೃಶ್ಯಗಳು ಹಸಿರು ಕಣಿವೆಗಳಿಂದ ಮತ್ತು ಕಾವೇರಿ ನದಿ ಮತ್ತು ಅದರ ನಾಲ್ಕು ಉಪನದಿಗಳು ಈ ಸ್ಥಳದ ಸುತ್ತುವರೆದಿದ್ದು, ಮಂಡ್ಯದ ಈ ಸುಂದರವಾದ ಹಿನ್ನೆಲೆಯ ಜೊತೆಗೆ ನದಿ ದಡದ ಅಂಚಿನಲ್ಲಿ ಎತ್ತರದ ತೆಂಗಿನ ಮರಗಳಿಂದ ಕೂಡಿದೆ ಮತ್ತು ರೋಮಾಂಚಕ ಹಸಿರು ಕಾಡುಗಳು ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳೊಂದಿಗೆ ಪ್ರಸಿದ್ದಿಯನ್ನು ಪಡೆದಿದೆ. ಇದು ನಗರದ ಪರಂಪರೆ ಮತ್ತು ಪ್ರಕೃತಿಯ ನಿಷ್ಕಲ್ಮಶ ಸೌಂದರ್ಯತೆಯ ಹೆಮ್ಮೆಪಡುವ ಹಲವಾರು ಆಕರ್ಷಣೆಗಳೊಂದಿಗೆ ಪ್ರವಾಸೋದ್ಯಮಕ್ಕೆ ಜನಪ್ರಿಯ ಸ್ಥಳವಾಗಿದೆ. ಈ ಅಸಮಾನ್ಯ ಸ್ಥಳಗಳನ್ನು ಭೇಟಿ ಕೊಡುವುದು ಮರೆಯದಿರಿ ಮತ್ತು ಕಡಿಮೆ ಅನ್ವೇಷಿಸಿ.

ಕೃಷ್ಣರಾಜ ಸಾಗರ ಅಣೆಕಟ್ಟು (ಕೆ ಆರ್ ಎಸ್)
ಮೈಸೂರಿನ ಒಡೆಯರ್ ವಂಶದ ರಾಜರಾದ ನಾಲ್ಕನೇ ಕೃಷ್ಣರಾಜ ಒಡೇಯರ್ ಅವರ ಹೆಸರನ್ನು ಈ ಅಣೆಕಟ್ಟಿಗೆ ಇಡಲಾಗಿದ್ದು, ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟನ್ನು ಮೂರು ನದಿಗಳಾದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥಗಳ ಸಂಗಮದ ಬಳಿ ಕಾವೇರಿ ನದಿಯ ಮೇಲೆ ನಿರ್ಮಿಸಲಾಗಿದೆ. ಶಿವನಸಮುದ್ರ ಜಲವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಪೂರೈಸಲು ಈ ಅಣೆಕಟ್ಟು ಪ್ರಮುಖ ಮೂಲವಾಗಿದೆ. ಅಣೆಕಟ್ಟು ಇರುವ ಸ್ಥಳವನ್ನು ಇದನ್ನು ಸ್ಥಳೀಯರು ‘ಕನ್ನಂಬಾಡಿ ಕಟ್ಟೆ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ಅಣೆಕಟ್ಟು ಇತರ ಅಣೆಕಟ್ಟುಗಳಿಗಿಂತ ವಿಭಿನ್ನವಾಗಿಸುವ ಪ್ರಮುಖ ಅಂಶವೆಂದರೆ ಅದರ ಅದ್ಭುತ ಹಾಗೂ ಬೆರಗುಗೊಳಿಸುವ ಪರಿಸರ, ಸುಂದರ ಉದ್ಯಾನಗಳು, ಸಂಗೀತ ಕಾರಂಜಿಗಳು ಮತ್ತು ಇನ್ನಿತರ ಜಲಮೂಲಗಳು. 1932 ರಲ್ಲಿ ಒಡೆಯರ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೆಆರ್ಎಸ್ ಅಣೆಕಟ್ಟು ಇಂದಿಗೂ ಆ ಕಾಲದ ಅದ್ಭುತವಾದ ಹಾಗೂ ಮನಮೋಹಕ ವಾಸ್ತುಶಿಲ್ಪದ ನೋಟವನ್ನು ನೀಡುತ್ತದೆ.

ತೊಣ್ಣೂರು ಲೇಕ್
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಗಂಟೆಗಟ್ಟಲೆ ಸಮಯ ಕಳೆಯಿರಿ. ಈ ಸರೋವರದ ಸುತ್ತಲೂ ಶ್ರೀ ನಂಬಿನಾರಾಯಣ, ಶ್ರೀ ಪಾರ್ಥಸಾರಥಿ ಮತ್ತು ಶ್ರೀ ನರಸಿಂಹನ ಮೂರು ನಕ್ಷತ್ರಗಳ ದೇವಾಲಯಗಳಿವೆ. ಇದರ ಇತಿಹಾಸದ ಬಗ್ಗೆ ಹೇಳುವುದಾದರೆ, ಮೈಸೂರಿನ ಪ್ರಬಲ ಆಡಳಿತಗಾರ ಟಿಪ್ಪು ಸುಲ್ತಾನ್ ಇದನ್ನು ಒಮ್ಮೆ "ಮೋತಿ ತಲಾಬ್" ಎಂದು ಉಲ್ಲೇಖಿಸಿದ್ದನು, ಅದರ ಶುದ್ಧ ನೀರಿನಿಂದಾಗಿ, ಕೆರೆಯಲ್ಲಿನ ಪ್ರತಿಯೊಂದು ಬೆಣಚುಕಲ್ಲು ಕೂಡಾ ಮೇಲಿನಿಂದ ಗೋಚರಿಸುತ್ತದೆ. 2000 ಎಕರೆಗಳಷ್ಟು ವಿಸ್ತಾರವಾಗಿರುವ ಈ ಕೆರೆಯು ನೀರಾವರಿಗಾಗಿ ಮಳೆನೀರನ್ನು ಸಂಗ್ರಹಿಸುವ ತೊಟ್ಟಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ.

ರಂಗನತಿಟ್ಟು ಪಕ್ಷಿಧಾಮ
ಕರ್ನಾಟಕದ ಅತ್ಯಂತ ದೊಡ್ಡದಾದ ಪಕ್ಷಿಧಾಮವು ಮಂಡ್ಯಾ ಜಿಲ್ಲಿಯ ರಂಗನತಿಟ್ಟಿನಲ್ಲಿದೆ. ಇದು ಪಕ್ಷಿ ಕಾಶಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. 40 ಎಕರೆ ವಿಸ್ತಾರವಾದ ಜಾಗದಲ್ಲಿ ಹರಡಿಕೊಂಡಿರುವ ಈ ಪಕ್ಷಿಧಾಮವು ದಟ್ಟವಾದ ಹಸಿರು ಭೂಮಿ ಮತ್ತು ಕಾವೇರಿ ನದಿಯ ದಡದಲ್ಲಿ ಆರು ಸಣ್ಣ ಸಣ್ಣ ದ್ವೀಪಗಳನ್ನು ಒಳಗೊಂಡಿದೆ. ದ್ವೀಪಗಳ ದಡವನ್ನು ಆವರಿಸಿರುವ ನದಿಯ ಹಸಿರಾದ ಹಾಸಿಗೆಗಳೊಂದಿಗೆ, ದ್ವೀಪಗಳು ಸ್ವತಃ ವಿಶಾಲವಾದ ಕಾಡುಗಳಲ್ಲಿ ಮುಚ್ಚಿಹೋಗಿವೆ, ಇದು ಪಕ್ಷಿಗಳಿಗೆ ಪ್ರಮುಖ ಗೂಡುಕಟ್ಟುವ ಆಶ್ರಯತಾಣವಾಗಿದೆ.
ವಿವಿಧ ತಳಿಗಳ ಸಾವಿರಾರು ಪಕ್ಷಿಗಳ ಉಪಸ್ಥಿತಿಯು ಈ ಸುಂದರವಾದ ವರ್ಣರಂಜಿತ ಪ್ರಕೃತಿ ಮತ್ತು ಮರದ ಛಾಯೆಗಳ ಒಂದು ಶ್ರೇಣಿಯಲ್ಲಿ ಸುತ್ತುವರೆದಿರುವುದು ಒಂದು ಭವ್ಯವಾದ ದೃಶ್ಯವನ್ನು ಅನುಭವವನ್ನು ನೀಡುತ್ತದೆ. ರಂಗನತಿಟ್ಟು ಪಕ್ಷಿಧಾಮ ಪ್ರದೇಶವು ಭೂಮಿಯನ್ನು ಸುತ್ತುವರೆದಿರುವ ಸಸ್ಯ ಮತ್ತು ಪ್ರಾಣಿಗಳ ವೈವಿಧ್ಯಮಯ ಪ್ರಭೇದಗಳ ನಡುವೆ ಕೆಲವು ವರ್ಣರಂಜಿತ ಮತ್ತು ಚಿಲಿಪಿಲಿ ಪಕ್ಷಿಗಳನ್ನು ವೀಕ್ಷಿಸುವುದು ಕಣ್ಣಿಗೆ ಮತ್ತು ಮನಸ್ಸಿಗೆ ಒಂದು ರಸದೌತಣ ಎನ್ನಬಹುದಾಗಿದೆ.

ದರಿಯಾ ದೌಲತ್ ಭಾಗ್
ದರಿಯಾ ದೌಲತ್ ಬಾಗ್ 1784 ರಲ್ಲಿ ನಿರ್ಮಿಸಲಾದ ಸಂಪೂರ್ಣ ವಾಸ್ತುಶಿಲ್ಪದ ಸೌಂದರ್ಯದ ನಿಜವಾದ ಉದಾಹರಣೆಯಾಗಿದೆ. ಹೈದರ್ ಅಲಿ 1778 ರಲ್ಲಿ ಇದರ ನಿರ್ಮಾಣವನ್ನು ಪ್ರಾರಂಭಿಸಿದನು ಮತ್ತು ಅವನ ಮಗ ಟಿಪ್ಪು ಸುಲ್ತಾನ್ ಕ್ರಿ.ಶ1784 ನಲ್ಲಿ ಅದನ್ನು ಪೂರ್ಣಗೊಳಿಸಿದನು. ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಮತ್ತು ಮೊಘಲ್ ವಾಸ್ತುಶಿಲ್ಪ ಮತ್ತು ಪರಂಪರೆಯೊಂದಿಗೆ, ಈ ಸ್ಥಳವನ್ನು ಟಿಪ್ಪುಸುಲ್ತಾನನ ಬೇಸಿಗೆ ಅರಮನೆ ಎಂದು ವ್ಯಾಪಕವಾಗಿ ಕರೆಯಲಾಗುತ್ತದೆ. ಅರಮನೆಯು ತೇಗದ ಮರದಿಂದ ಮತ್ತು ಹಲವಾರು ಭಿತ್ತಿಚಿತ್ರಗಳು ಮತ್ತು ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ, ಅಲ್ಲದೆ ಈ ಅರಮನೆಯು ಕಂಬಗಳು, ಗೋಡೆಗಳು, ಮೇಲಾವರಣಗಳು, ಕಮಾನುಗಳು ಮತ್ತು ಬೃಹತ್ ಕಾರಿಡಾರ್ಗಳನ್ನು ಹೊಂದಿದೆ. ದರಿಯಾ ದೌಲತ್ ಬಾಗ್ ಅರಮನೆಯು ಈಗ ವಸ್ತುಸಂಗ್ರಹಾಲಯವಾಗಿ ರೂಪಾಂತರಗೊಂಡಿದೆ, ಇದು ಟಿಪ್ಪುವಿನ ಹಲವಾರು ಸ್ಮರಣಿಕೆಗಳನ್ನು ಹೊಂದಿದೆ.


Click it and Unblock the Notifications

















