ಮೇಲಾ ತಿರುವೆಂಕಟನಾಥಪುರಂ ದೇವಾಲಯವು ಇದೇ ಹೆಸರಿನ ಒಂದು ಸಣ್ಣ ಗ್ರಾಮದಲ್ಲಿ ನೆಲೆಗೊಂಡಿದೆ. ಗುಡ್ಡದ ಮೇಲೆ ನೆಲೆಗೊಂಡಿರುವ ಈ ಸ್ಥಳವನ್ನು ತಿರುಣಣ್ಕೋವಿಲ್ ಎಂದು ಸಹ ಕರೆಯುತ್ತಾರೆ. ದಂತ ಕತೆಗಳ ಪ್ರಕಾರ ಮಹಾರ್ಷಿ ವ್ಯಾಸರ ಶಿಷ್ಯನಾದ ಪಿಲೊರ್ ಇಲ್ಲಿ ಹರಿಯುವ ತಾಮರಭರಣಿ ನದಿಯ ದಂಡೆಯಲ್ಲಿ ತಪಸ್ಸು ಮಾಡಿದನಂತೆ.
ಈ ತಪಸ್ಸಿನಿಂದ ಸಂತುಷ್ಟನಾದ ಮಹಾವಿಷ್ಣುವು ಶ್ರೀನಿವಾಸನ ರೂಪದಲ್ಲಿ ಆತನ ಮುಂದೆ ಪ್ರತ್ಯಕ್ಷನಾಗಿ ಆತನನ್ನು ಹರಸಿದನಂತೆ. ಯೋಗಿ ಪಿಲೊರನ ಕೋರಿಕೆಯ ಮೇರೆಗೆ ಸ್ವಾಮಿಯು ಈ ಸ್ಥಳದಲ್ಲಿ ಶಾಶ್ವತವಾಗಿ ನೆಲೆನಿಲ್ಲುತ್ತೇನೆ ಎಂದು ಹೇಳಿ ಇಲ್ಲಿ ನಿಂತನಂತೆ. ಪಿಲೊರ್ ಇಲ್ಲಿರುವ ದೇವಾಲಯದ ನಿರ್ಮಾಣವನ್ನು ಮೊದಲು ಶುರು ಮಾಡಿದನಂತೆ. ಆದರೆ ನಾವು ಇಂದು ನೋಡುತ್ತಿರುವ ದೇವಾಲಯವನು ರಾಜ ವೆಂಕಟಪ್ಪ ನಾಯಕರ್ ನಿರ್ಮಿಸಿದನಂತೆ. ದೇವಾಲಯ ಸಮೀಪದಲ್ಲಿ ಹರಿಯುವ ತಾಮಿರಭರಣಿ ನದಿಯಲ್ಲಿನ ಸ್ನಾನದ ಘಟ್ಟಕ್ಕೆ ಶ್ರೀನಿವಾಸ ತೀರ್ಥ ಘಾಟ್ ಎಂದು ಕರೆಯುತ್ತಾರೆ. ಇಲ್ಲಿ ಪ್ರತಿ ವರ್ಷ ತಿರುಓಣಂ ದಿನದಂದು ನಡೆಯುವ " ಗರುಡ ಸೆವೈ" ಎಂಬ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದನ್ನು ತಮಿಳು ಮಾಸ " ವೈಕಾಸಿ" ಯ ಪ್ರತಿ ಶನಿವಾರದಂದು ಸಹ ಆಚರಿಸುತ್ತದೆ. ಈ ಹಬ್ಬವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ತಪ್ಪದೇ ಭೇಟಿಕೊಡಬೇಕು.