ಸೋಲಾಪುರ ನಗರಪಾಲಿಕೆಯು ಸೋಲಾಪುರ ಜಿಲ್ಲೆಯ ನಾಗರಿಕರ ಹೆಮ್ಮೆಯಾಗಿದೆ. ದೇಶದ ಎಲ್ಲಾ ನಗರಗಳಲ್ಲಿ ಸೋಲಾಪುರ ಮಾತ್ರ ವಿಶೇಷ ಸ್ಥಾನ ಪಡೆದಿದೆ. ಇಡಿ ದೇಶವೆ ಆಂಗ್ಲರ ದಾಸ್ಯದಲ್ಲಿದ್ದರೆ ಸೋಲಾಪುರ ಮಾತ್ರ 1930 ರಲ್ಲಿಯೆ ಸ್ವಾತಂತ್ರ್ಯಗಳಿಸಿತ್ತು. ನಂತರದ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತಾದರೂ, ದೇಶದಲ್ಲಿಯೆ ಆಂಗ್ಲರ ಹಿಡಿತದಿಂದ ಬೇರಾದ ಮೊದಲ ಭಾಗ ಎಂಬ ಹೆಗ್ಗಳಿಕೆ ಸೊಲ್ಲಾಪುರಕ್ಕಿದೆ. ಇದರಿಂದಾಗಿ 1930 ರಲ್ಲಿಯೆ ಸೋಲಾಪುರ ನಗರಪಾಲಿಕೆಯಾಗಿ ಪರಿವರ್ತನೆಗೊಂಡಿತು. ದೇಶದ ಮೊದಲ ನಗರಪಾಲಿಕೆ ಎಂಬ ಹೆಗ್ಗಳಿಕೆಯನ್ನೂ ಸಂಪಾದಿಸಿತು. ಅಂದಿನಿಂದ ಇಂದಿನವರೆಗೂ ಇಲ್ಲಿನ ನಗರಪಾಲಿಕೆ ಕಟ್ಟಡದ ಮೇಲೆ ತ್ರಿವರ್ಣ ಧ್ವಜವನ್ನು ಮೂರುದಿನಗಳ ಕಾಲ ಹಾರಿಸಲಾಗುತ್ತದೆ. 1930 ರಲ್ಲಿ ದೇಶದ ಪಿತಾಮಹ ಮಹಾತ್ಮಗಾಂಧಿ ಈ ಅವಕಾಶವನ್ನು ಪ್ರದೇಶಕ್ಕೆ ಮಾಡಿಕೊಟ್ಟರು. ಇವರ ಅಪಾರ ಅಭಿಮಾನಿಗಳು, ಅನುಯಾಯಿಗಳು ಇಲ್ಲಿದ್ದಾರೆ.
ಸೋಲಾಪುರ ನಗರದ ಕೇಂದ್ರಭಾಗದಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದ ಮಹಾತ್ಮರ ಪ್ರತಿಮೆ ನಿಲ್ಲಿಸಲಾಗಿದೆ. ಇದನ್ನು ಹುತಾತ್ಮ ಚೌಕ ಅಂತಲೇ ಕರೆಯಲಾಗುತ್ತದೆ. ಮಡಿದವರ ನೆನಪಿಗೆ ನಿರ್ಮಿಸಿದ ಸ್ಮಾರಕ ಇದಾಗಿದೆ.


Click it and Unblock the Notifications