ಸಂತ ದಾಮಜೀ ಆಫ್ ಮಂಗಳವೇಡಾ ಅತ್ಯಂತ ಪ್ರಸಿದ್ಧ ದೇವಾಲಯವಾಗಿದ್ದು, ಇದನ್ನು ಶ್ರೀ ಸಂತ ದಾಮಜೀ ಅವರಿಗಾಗಿ ನಿರ್ಮಿಸಲಾಗಿದೆ. ದೇವಾಲಯವು ಮಂಗಳವೇಡಾ ನಗರದಲ್ಲಿ ಸ್ಥಾಪಿತವಾಗಿದೆ. ಸೋಲಾಪುರ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ತಾಣ, ನಗರದಿಂದ 55 ಕಿ.ಮೀ. ದೂರದಲ್ಲಿದೆ. ಜನಪ್ರಿಯ ಧಾರ್ಮಿಕ ಕೇಂದ್ರವಾದ ಪಂಢರಾಪುರದಿಂದ 25 ಕಿ.ಮೀ. ದೂರದಲ್ಲಿದೆ. ಮಂಗಳವೇಡಾ ಹಳ್ಳಿಯು ಪ್ರಮುಖವಾಗಿ 'ಸಂತರ ನೆಲೆವೀಡು' ಎಂದು ಜನಪ್ರಿಯವಾಗಿದೆ. ಈ ಹೆಸರು ಬರಲು ಕಾರಣ 14ನೇ ಶತಮಾನದ ಹೊತ್ತಿನಲ್ಲಿ ಸಂತ ಕಾನೋಪತ್ರ, ಸಂತ ದಾಮಜೀ, ಸಂತ ಗೋಪಬಾಯಿ ಹಾಗ ಸಂತ ಗಾದ್ಗೆಬಾಬಾ ಮುಂತಾದವರು ಇಲ್ಲಿಯೇ ನೆಲೆಸಿದ್ದರು. ಅದರಿಂದ ಈ ಹೆಸರು ಬಂದಿದೆ.
ಲಕ್ಷ್ಮಿ ದಹಿವಾಡಿ ಕೂಡ ಮಂಗಲವೇಡಾ ಹಳ್ಳಿಯಲ್ಲಿಯೆ ಇದೆ. ಈ ದೇವಾಲಯದಲ್ಲಿ ದೇವಿ ಲಕ್ಷ್ಮಿ ನೆಲೆಸಿದ್ದಾಳೆ. ಈ ಚಿಕ್ಕ ಹಳ್ಳಿಯ ಜನರು ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದು, ಮೊಸರು, ತುಪ್ಪ ಮತ್ತಿತರ ಉತ್ಪನ್ನಗಳನ್ನು ಸುತ್ತಲಿನ ಹಳ್ಳಿಗಳಿಗೆ ಹೋಗಿ ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. ಇದರಿಂದ ಈ ಹಳ್ಳಿ ಲಕ್ಷ್ಮಿ ದಹಿವಾಡಿ ಅಂತಲೂ ಕರೆಸಿಕೊಳ್ಳುತ್ತಿದೆ.