ಗೋಪಾಲ ಕೃಷ್ಣ ದೇವಾಲಯವು ತಿರುಕವಲಂಪಾಡಿಯಲ್ಲಿ ನೆಲೆಗೊಂಡಿದೆ. ಇದು ಬೆಳಗ್ಗೆ 8 ರಿಂದ 11.30 ಮತ್ತು ಸಂಜೆ 5 ರಿಂದ 7 ರವರೆಗೆ ತೆರೆದಿರುತ್ತದೆ. ಈ ದೇವಾಲಯವು ಗೋಪಾಲಕೃಷ್ಣ ಪೆರುಮಾಳ್ ಮತ್ತು ಆತನ ಸಹಧರ್ಮಿಣಿಯರಾದ ರುಕ್ಮಿಣಿ ಮತ್ತು ಸತ್ಯಭಾಮರನ್ನು ಹೊಂದಿದೆ. ಇಲ್ಲಿಗೆ ಭೇಟಿಕೊಡುವುದು ದ್ವಾರಕೆಗೆ ಭೇಟಿಕೊಟ್ಟಷ್ಟೇ ಪವಿತ್ರವೆಂದು ಭಾವಿಸಲಾಗಿದೆ.
ದಂತಕಥೆಗಳ ಪ್ರಕಾರ, ಒಂದು ದಿನ ಕೃಷ್ಣನು ಸತ್ಯಭಾಮೆಗಾಗಿ ಪಾರಿಜಾತ ಪುಷ್ಪವನ್ನು ಹುಡುಕುತ್ತ ಬಂದನಂತೆ. ಆಗ ಶಿವನು ಈ ದೇವಾಲಯದ ಕಲ್ಯಾಣಿಯಲ್ಲಿ ಅದು ಯಥೇಚ್ಛಾವಾಗಿ ಬೆಳೆದಿದೆ ಹೋಗು ಎಂದು ಸೂಚಿಸಿದನಂತೆ. ಹಾಗಾಗಿ ಈ ದೇವಾಲಯಕ್ಕೆ ತಾಟಮಲರ್ ಪೊಯಿಕೈ ಎಂದು ಸಹ ಕರೆಯಲಾಗುತ್ತದೆ. ಈ ದೇವಾಲಯವನ್ನು ಪ್ರಸ್ತುತ ದಿವ್ಯಾ ಎಂದು ಪರಿಗಣಿಸಲಾಗಿದೆ. ದಿವ್ಯಾ ಎಂದರೆ ಆಳ್ವಾರರು ಹಾಡಿ ಹೊಗಳಿರುವ 108 ದೇವಾಲಯಗಳಲ್ಲಿ ಇದು ಸಹ ಒಂದಾಗಿದೆ.