ಬ್ರಹ್ಮಪುರೀಶ್ವರರ್ ದೇವಾಲಯದಲ್ಲಿರುವ ಬ್ರಹ್ಮ ತೀರ್ಥವು ಈ ದೇವಾಲಯದ ಆವರಣದಲ್ಲಿರುವ 22 ಪವಿತ್ರ ತೀರ್ಥಗಳಲ್ಲಿ ಒಂದಾಗಿದೆ. ಇದು ಅತ್ಯಂತ ಪವಿತ್ರ ತೀರ್ಥವೆಂದು ಪ್ರಸಿದ್ಧವಾಗಿದೆ. ಏಕೆಂದರೆ ಈ ತೀರ್ಥವನ್ನು ಬ್ರಹ್ಮನು ಶಿವನಿಗಾಗಿ ಅರ್ಪಿಸಿದನು ಎಂಬ ಪ್ರತೀತಿ ನೆಲೆಸಿದೆ. ಇದು ಒಂದು ಪವಿತ್ರವಾದ ಕೊಳದ ಬಳಿ ನೆಲೆಗೊಂಡಿದೆ. ಈ ತೀರ್ಥಕ್ಕೆ ಎಲ್ಲಾ ಪಾಪ ಕರ್ಮಗಳನ್ನು ನಿವಾರಿಸುವ ಶಕ್ತಿಯಿದೆ ಎಂಬ ನಂಬಿಕೆಯಿದೆ. ಅದಕ್ಕಾಗಿ ಇಲ್ಲಿಗೆ ದೂರದ ಊರುಗಳಿಂದ ಸಹ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಇಲ್ಲಿನ ಕೊಳದಲ್ಲಿ ಮೀಯುವುದರಿಂದ ಮನಸ್ಸು ಮತ್ತು ದೇಹಗಳು ಎರಡೂ ಪರಿಶುದ್ದಗೊಳ್ಳುತ್ತವೆ ಎಂದು ನಂಬುತ್ತಾರೆ. ಇದಕ್ಕಾಗಿ ಪ್ರತಿ ವರ್ಷವು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಇವರನ್ನು ನಿಯಂತ್ರಿಸಲು ಮತ್ತು ತೃಪ್ತಿಪಡಿಸುವಲ್ಲಿ ಆಡಳಿತ ಮಂಡಳಿಯವರ ಶ್ರಮ ಎದ್ದುಕಾಣುತ್ತದೆ.