ನೀವು ಉತ್ತರ ಭಾರತದ ಪ್ರತಿಯೊಂದು ನಗರದಲ್ಲಿಯೂ ರಾಧಾಕೃಷ್ಣನ ದೇವಸ್ಥಾನವನ್ನು ನೀವು ಕಾಣಬಹುದು. ರಾಧಾಕೃಷ್ಣ ದೇವರು ಹಿಂದುಗಳ ಪ್ರಮುಖ ದೇವತೆಯೆನ್ನಲು ಇದೇ ಸಾಕ್ಷಿ. ಪ್ರತಿಯೊಬ್ಬ ಹಿಂದು ರಾಧಾಕೃಷ್ಣನನ್ನು ಪ್ರೀತಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಜಾಟ ಇದು ರೋಹ್ಟಕ ನಗರದ ಒಂದು ಪ್ರಬಲ ಪಟ್ಟಣವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಈ ನಗರದ ಚಿಂತಲ್ಲ ಮೊಹಲ್ಲದ ವಾರ್ಡ ನಂ 6 ಮತ್ತು 8 ರಲ್ಲಿ ನೀವು ರಾಧಾ ಕೃಷ್ಣರ ಅನೇಕ ದೇವಾಲಯಗಳನ್ನು ಕಾಣಬಹುದು. ಇದು ಹಳೆಯ ಬಸ ಸ್ಟಾಂಡ ಹತ್ತಿರದಲ್ಲಿದೆ.
ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿರುವ ಶ್ರೀ ಕೃಷ್ಣನ ವಿಗ್ರಹವು ತುಂಬಾ ಅಪರೂಪವಾದ ಕಪ್ಪು ಶಿಲೆಯಿಂದ ನಿರ್ಮಿತವಾಗಿದೆ. ಈ ಶಿಲೆಯು ಹಿಮಾಲಯದ ಕೆಲವೇ ಭಾಗಗಳಲ್ಲಿ ದೊರೆಯುತ್ತದೆ. ರಾಧಾ ಮತ್ತು ಕೃಷ್ಣರು ತಮ್ಮ ಅಮರ ಮಧುರ ಪ್ರೇಮಕ್ಕಾಗಿ ಪ್ರಸಿದ್ದರಾಗಿದ್ದಾರೆ. ಇವರಿಬ್ಬರು ವಿಶೇಷವಾಗಿ ಹೋಳಿ ಹಬ್ಬದ ದಿನ ತಮ್ಮ ಸಂಗಡಿಗರೊಂದಿಗೆ ಆಟವಾಡಿ ಆನಂದಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಪ್ರತಿವರ್ಷವು ಈ ದೇವಸ್ಥಾನದಲ್ಲಿ ಹೋಳಿ ಹಬ್ಬವನ್ನು ಬಹು ಸಂಭ್ರಮದಿಂದ ಆಚರಿಸುತ್ತಾರೆ.