ಇಸ್ಕಾನ್ ದೇವಾಲಯ ರಾಜಮಂಡ್ರಿಯ ಮನರಂಜನೆ ಮತ್ತು ಆರಾಧನೆಯ ಜನಪ್ರಿಯ ತಾಣವಾಗಿದೆ. ಇದನ್ನು ಗೌತಮಿ ಘಾಟ್ ಎಂದೂ ಕರೆಯಲಾಗುತ್ತದೆ. ಎರಡು ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಈ ದೇವಾಲಯ ಹಬ್ಬಿಕೊಂಡಿದ್ದು, ಬೆಂಗಳೂರು ಇಸ್ಕಾನ್ ದೇವಾಲಯದ ಬಳಿಕ ಎರಡನೆ ದೊಡ್ಡ ದೇವಾಲಯ ಎಂದು ಇದನ್ನು ಬಣ್ಣಿಸಲಾಗುತ್ತದೆ. ಭಗವಾನ್...
ರಾಜಮಂಡ್ರಿಯ ಗ್ರಂಥಾಲಯಗಳ ಪೈಕಿ ಶ್ರೀ ಗೌತಮಿ ಗ್ರಂಥಾಲಯ, ವಸುರಾಯ ಗ್ರಂಥಾಲಯ ಮತ್ತು ರತ್ನಕವಿ ಗ್ರಂಥಾಲಯಗಳು ಪ್ರಮುಖವಾಗಿವೆ. ಪ್ರಾಚೀನ ಕಾಲದಿಂದ ಹಿಡಿದು ಇತ್ತೀಚಿನ ಗ್ರಂಥಗಳ ವರೆಗೂ ಇಲ್ಲಿ ಬೃಹತ್ ಸಂಗ್ರಹವಿದ್ದು, ಜ್ಞಾನಾರ್ಜನೆಗೆ ಉತ್ತಮ ಸ್ಥಳವಾಗಿದೆ. ವಸುರಾಯ ಗ್ರಂಥಾಲಯವನ್ನು ವಾಸುದೇವ ಸುಬ್ಬರಾಯುಡು...
ರಾಜಮಂಡ್ರಿ ನಗರದಲ್ಲಿರುವ ಆನಂ ಕಲಾ ಕೇಂದ್ರ ಸ್ಥಾಪಿಸಿದ್ದು ಆನಂ ಕುಟುಂಬದರು. ಒಳಾಂಗಣ ಕ್ರೀಡಾಂಗಣದಲ್ಲಿರುವ ಕಲಾ ಕೇಂದ್ರದ ಮೇಲ್ವಿಚಾರಣೆಯನ್ನು ರಾಜಮಂಡ್ರಿ ನಗರ ಸಭೆ ನೋಡಿಕೊಳ್ಳುತ್ತಿತ್ತು. ಆನಂ ಕಲಾ ಕೇಂದ್ರ ಪ್ರಾರಂಭವಾದಗಿನಿಂದ ಇಲ್ಲಿಯವರೆಗೂ ದೇಶಿಯ ಅನೇಕ ಕಲಾ ಪ್ರಕಾರಗಳನ್ನು ಪ್ರತಿಪಾದಿಸಲು ಈ ಕೇಂದ್ರ ದಾರಿಯಾಗಿದೆ....
ಕಾಕಿನಾಡಿನಿಂದ 45 ಕಿಲೋಮೀಟರು ದೂರದಲ್ಲಿರುವ ದ್ರಾಕ್ಷಾರಾಮಂ ದೇವಾಲಯದ ಬಳಿ ಇರುವ ಕೋಟಿಲಿಂಗೇಶ್ವರ ದೇವಸ್ಥಾನ ಶಿವಭಕ್ತರ ನೆಚ್ಚಿನ ತಾಣವಾಗಿದೆ. ಹತ್ತನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಯಿತು. ದೇವಾಲಯಕ್ಕೆ ಬರುವ ಪ್ರವಾಸಿಗರು, ಭಕ್ತರನ್ನು ಈ ದೇವಾಲಯ ಸೆಳೆಯುತ್ತದೆ. ಈ ದೇವಾಲಯದಲ್ಲಿ ಒಂದು ಶಿವಲಿಂಗವನ್ನು...
2006 ನವೆಂಬರ್ 20 ರಂದು ರಾಜಮಂಡ್ರಿಯಲ್ಲಿ ಆರಂಭವಾದ ಆರ್ಯಭಟ್ಟ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ದೇಶದ ಅತ್ಯುನ್ನತ ವಿಜ್ಞಾನ ಮತ್ತು ತಂತ್ರಜ್ಞಾನ ಮೂಸಿಯಂ ಎಂಬ ಹೆಗ್ಗಳಿಕೆ ಪಡೆದಿದೆ. ನಗರಕ್ಕೆ ಸಮೀಪವಿರುವ ಹಾಗೂ ಆಂಧ್ರ ಪ್ರದೇಶ ಗೃಹ ಮಂಡಳಿ ಹತ್ತಿರವಿರುವ ಈ ಮ್ಯೂಸಿಯಂನಲ್ಲಿ 36 ಅಡಿ ಎತ್ತರದ...
ಚಾಲುಕ್ಯ ಅರಸು ರಾಜರಾಜ ನರೇಂದ್ರನ ಎರಡನೇ ಪತ್ನಿ ಚಿತ್ರಾಂಗಿಯ ಹೆಸರಿನಲ್ಲಿ ನಿರ್ಮಾಣವಾದ ಚಿತ್ರಾಂಗಿ ಭವನ ರಾಜಮಂಡ್ರಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಗೋದಾವರಿ ನದಿ ತೀರದಲ್ಲಿ ಇದನ್ನು ರಾಜ ರಾಜ ನರೇಂದ್ರನು ನಿರ್ಮಿಸಿದ. ಇತಿಹಾಸದ ಪುಟಗಳಲ್ಲಿ ಈ ಭವನದ ಬಗ್ಗೆ ರಮಣೀಯವಾದ ಪುರಾಣಗಳು ಕಥೆಗಳು ಚಾಲ್ತಿಯಲ್ಲಿವೆ....
ರಾಜಮಂಡ್ರಿಯಲ್ಲಿ ಹುಟ್ಟಿ ಬೆಳೆದ ಒಬ್ಬ ಅತ್ಯಪರೂಪದ ಕಲಾವಿದ ಡಮೆರ್ಲ ರಾಮರಾವ್. ಅವರ ನೆನಪಿಗಾಗಿ ಡಮೆರ್ಲ ರಾಮ ರಾವ್ ಕಲಾ ಗ್ಯಾಲರಿಯನ್ನು ಸ್ಥಾಪಿಸಲಾಯಿತು. ಅವರು ರಚಿಸಿದ ಅತ್ಯುತ್ತಮ ಕಲಾಕೃತಿಗಳ ಪ್ರದರ್ಶನ ಇಂದು ಅವರು ಕಾಲವಾಗಿ 92 ವರ್ಷಗಳ ನಂತರವೂ ನಡೆಯುತ್ತಿದೆ. ಆಂಧ್ರ ಕಲಾ ಶೈಲಿಯನ್ನು...
ಸರ್ ಆರ್ಥರ್ ಕಾಟನ್ ನೆನಪಿಗಾಗಿ ನಿರ್ಮಿಸಲಾದ ವಸ್ತುಸಂಗ್ರಹಾಲಯ ಇದು. ಗೋದಾವರಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿದ ಇಂಜಿನಿಯರುಗಳಲ್ಲಿ ಓರ್ವನಾದ ಸರ್ ಆರ್ಥರ್ ಕಾಟನ್ ಬ್ರಿಟೀಷ್ ಮೂಲದವನು. ಭಾರತದಲ್ಲಿ ಆಣೆಕಟ್ಟುಗಳ ಮೂಲಕ ನೀರಾವರಿಗೂ ಉಪಯೋಗವಾಗುವಂಥ ವಾಸ್ತುಶಿಲ್ಪವನ್ನು ತೋರಿಸಿಕೊಟ್ಟವರು...
ರಾಜಮಂಡ್ರಿಯ ಪ್ರಮುಖ ಆಕರ್ಷಣೆಗಳಲ್ಲಿ ಗೋದಾವರಿ ನದಿ ತೀರದಲ್ಲಿರುವ ಪುಷ್ಕರ್ಘಾಟ್ ಕೂಡ ಒಂದು. ಇದು ಸ್ನಾನಕ್ಕಾಗಿ ನದಿತಟದಲ್ಲಿ ನಿರ್ಮಿಸಿರುವ ಘಾಟ್ ಆಗಿದೆ. ಇದು ರಾಜಮಂಡ್ರಿಯ ಪ್ರಮುಖ ಸ್ನಾನ ಘಟ್ಟವಾಗಿದೆ. ಸಮೀಪದಲ್ಲಿಯೇ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಮಾರ್ಕಾಂಡೇಯ ಸ್ವಾಮಿ ದೇವಸ್ಥಾನ...
ನೀವು ನಿಸರ್ಗಪ್ರಿಯರಾಗಿದ್ದರೆ ನಿಮ್ಮ ಮನಸ್ಸಿಗೆ ಮುದನೀಡುವ ಮರೇಡಿಮಲ್ಲಿ ಪರಿಸರ ಪ್ರವಾಸೋದ್ಯಮ ತಾಣ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ರಾಜಮಂಡ್ರಿಯಿಂದ 100 ಕಿಲೋಮೀಟರುಗಳಷ್ಟು ಅಂತರದಲ್ಲಿರುವ ಈ ಪ್ರದೇಶ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ವಳಮುರೆ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ...
ರಲ್ಲಾಬಂದಿ ಸುಬ್ಬರಾವ್ ವಸ್ತುಸಂಗ್ರಹಾಲಯದ ಸ್ಥಾಪನೆಯಾದದ್ದು 1967 ರಲ್ಲಿ. ರಾಜಮಂಡ್ರಿಯ ಐತಿಹಾಸಿಕ ದಾಖಲೆಗಳ ಹಸ್ತಪ್ರತಿಗಳ ಬಹುಪಾಲು ಸಂಗ್ರಹವನ್ನು ಈ ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ. ರಾಜಮಂಡ್ರಿ ಪಟ್ಟಣ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗಿನ ಪ್ರಮುಖ ಸಾಂಸ್ಕೃತಿಕ ಸ್ಥಿತಿಗತಿಗಳ ಅಪೂರ್ವ ಸಂಗ್ರಹ ಎಂದು ಈ ವಸ್ತು...
ಶ್ಯಾಮಲಾಂಬಾ ಅಮ್ಮಾವರಿ ದೇವಸ್ಥಾನ ಭಕ್ತರನ್ನು ಸೆಳೆಯುವ ಇನ್ನೊಂದು ಮಹತ್ವದ ದೇವಸ್ಥಾನ. ಶ್ಯಾಮಲಾಂಬ ಮತ್ತು ಸೋಮಲಮ್ಮ ಅಮ್ಮನವರು ಇಲ್ಲಿನ ಆರಾಧ್ಯ ದೈವ. ಚಾಲುಕ್ಯ ರಾಜವಂಶದವರು ಈ ದೇವತೆಗಳನ್ನು ಕುಲದೇವತೆಯಾಗಿ ಪೂಜಿಸುತ್ತಿದ್ದರು ಎಂದು ಚರಿತ್ರೆಯ ಪುಟಗಳು ಸಾರುತ್ತವೆ. ಚಾಲುಕ್ಯ ವಂಶದ ರಾಜ ನರೇಂದ್ರ ಬಹಳ ಆಸ್ಥೆಯಿಂದ ಈ...
ಶ್ರೀ ಬಾಲಾ ತ್ರಿಪುರಸುಂದರಿ ದೇವಾಲಯ ರಾಜಮಂಡ್ರಿಯ ಪ್ರಮುಖ ಧಾರ್ಮಿಕ ಯಾತ್ರಾಕೇಂದ್ರವಾಗಿದೆ. ಗೋದಾವರಿ ನದಿ ತೀರಲ್ಲಿರುವ ಈ ದೇವಾಲಯವನ್ನು ದಕ್ಷಿಣಕಾಶಿ ಎಂದೆ ಬಣ್ಣಿಸಲಾಗಿದೆ. ಸುಮಾರು ಇನ್ನೂರು ವರ್ಷಗಳ ಹಿಂದೆ ವಿಶ್ವೇಶ್ವರ ಇಲ್ಲಿ ಪ್ರತ್ಯಕ್ಷವಾಗಿದ್ದ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು...
ರಾಜಮಂಡ್ರಿಯ ವ್ಯಾಪಾರಿ ಕೇಂದ್ರಗಳಲ್ಲಿ ಅತಿ ಪ್ರಮುಖವಾದದ್ದು ಪಾಲ್ ಚೌಕ್. ವಂದೇಮಾತರಂ ಚಳುವಳಿಯ ಸಂದರ್ಭದಲ್ಲಿ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಬಿಪೀನ್ ಚಂದ್ರಪಾಲ್ ಇಲ್ಲಿಗೆ ಭೇಟಿ ನೀಡಿದ್ದರು. ಹಾಗಾಗಿ ಅವರ ಹೆಸರನ್ನೇ ಈ ಪ್ರದೇಶಕ್ಕಿಡಲಾಗಿದೆ. ಪಾಲ್ ಚೌಕ್ ನಲ್ಲಿ ನೀವು ನೋಡಲೇಬೇಕಾದ ಅನೇಕ ಪ್ರಮುಖ...
ಪಿಕ್ನಿಕ್ ನಡೆಸಲು ಒಂದು ಉತ್ತಮ ಸ್ಥಳದ ಹುಡುಕಾಟದಲ್ಲಿ ನೀವಿದ್ದರೆ, ಆಲ್ಕಾಟ್ ಉದ್ಯಾನ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ದಿವ್ಯಜ್ಞಾನ ಸಮಾಜದ ಮುಖ್ಯಸ್ಥ ಆಲ್ಕಾಟ್ ಹೆಸರಿನಲ್ಲಿ ಈ ಉದ್ಯಾನವನ್ನು ಕರೆಯಲಾಗುತ್ತದೆ. ಸಾರ್ವಜನಿಕರಿಗೆ ವಿರಾಮಕ್ಕೆ ಇದು ಹೇಳಿ ಮಾಡಿಸಿದಂಥ ಸ್ಥಳ. ದಿವ್ಯಜ್ಞಾನ ಸಮಾಜದ...