ರಾಜಮಂಡ್ರಿ ನಗರದಲ್ಲಿರುವ ಆನಂ ಕಲಾ ಕೇಂದ್ರ ಸ್ಥಾಪಿಸಿದ್ದು ಆನಂ ಕುಟುಂಬದರು. ಒಳಾಂಗಣ ಕ್ರೀಡಾಂಗಣದಲ್ಲಿರುವ ಕಲಾ ಕೇಂದ್ರದ ಮೇಲ್ವಿಚಾರಣೆಯನ್ನು ರಾಜಮಂಡ್ರಿ ನಗರ ಸಭೆ ನೋಡಿಕೊಳ್ಳುತ್ತಿತ್ತು. ಆನಂ ಕಲಾ ಕೇಂದ್ರ ಪ್ರಾರಂಭವಾದಗಿನಿಂದ ಇಲ್ಲಿಯವರೆಗೂ ದೇಶಿಯ ಅನೇಕ ಕಲಾ ಪ್ರಕಾರಗಳನ್ನು ಪ್ರತಿಪಾದಿಸಲು ಈ ಕೇಂದ್ರ ದಾರಿಯಾಗಿದೆ. ಹಾಗೆಯೆ ಇಲ್ಲಿ ಎಲ್ಲಾ ಕಲಾ ಪ್ರಕಾರಗಳನ್ನು ಕಲಿಸಿಕೊಡಲಾಗುತ್ತದೆ. ಪ್ರಸ್ತುತ ಈ ಕಲಾ ಕೇಂದ್ರದ ಅಧಿಕಾರ ಜಿಲ್ಲಾಡಳಿತದ ಕೈಯಲ್ಲಿದೆ. 2008 ರಲ್ಲಿ ನಡೆದ ನಂದಿ ನಾಟಕೋತ್ಸವಕ್ಕೂ ಮುನ್ನ ಈ ಕಲಾಕೇಂದ್ರವನ್ನು ನವೀಕರಿಸಲಾಯಿತು. ರಂಗ ಚಟುವಟಿಕೆಗಳು, ಕಲೆ ಇವುಗಳೆಲ್ಲದರಲ್ಲಿ ತೊಡಗಿಸಿಕೊಂಡವರ ಬೆಳವಣಿಗೆಗೆ ಈ ಕೇಂದ್ರ ಮ್ರಮುಖ ವೇದಿಕೆಯಾಗಿದೆ. ಇಲ್ಲಿ ನಡೆಯುವ ಸಾಂಸ್ಕ್ರತಿಕ ಹಬ್ಬ ಹಾಗೂ ನಾಟಕಗಳು ಇದರ ಹೆಗ್ಗಳಿಕೆಯನ್ನು ಬಹು ದೂರಕ್ಕೆ ಕೊಂಡೊಯ್ದಿವೆ. ರಾಜಮಂಡ್ರಿಯಲ್ಲಿ ಕಲಾ ಚಳವಳಿಯನ್ನೇ ಆರಂಭಿಸಿದ ಹೆಗ್ಗಳಿಕೆ ಈ ಕಲಾಕೇಂದ್ರದ್ದು.