ಜಿಯಾರತ್ ಛೋಟೆ ಶಾ ಸಾಹೀಬ್ವು ಮುಸ್ಲಿಂ ಸಂತರಾದ ಸಖಿ ಪೀರ್ ಛೋಟಾ ಶಾ ಅವರಿಗೆ ಮೀಸಲಾದ ಮಂದಿರವಾಗಿದೆ. ಇದು ಸಖಿ ಮದೀನ್ ಹಳ್ಳಿಯಲ್ಲಿದೆ. ಮೆಂದಾರ್ ಪಟ್ಟಣದಿಂದ ಇದು ಐದು ಕಿ.ಮೀ. ದೂರದಲ್ಲಿದೆ. ಈ ಮಂದಿರವು ಜಿಲ್ಲೆಯ ಅತ್ಯಂತ ಪವಿತ್ರ ಹಾಗೂ ಗೌರವಯುತವಾದ ಪವಿತ್ರ ನೆಲೆಯಾಗಿದೆ. ಇಲ್ಲಿ ಹಿಂದು ಹಾಗೂ ಮುಸ್ಲಿಮರು ಒಟ್ಟಾಗಿ ಪ್ರತಿ ವರ್ಷ ಪ್ರಾರ್ಥನೆ ಸಲ್ಲಿಸುತ್ತಾರೆ. ಸಂತರ ನೆನಪಿನಾರ್ಥವಾಗಿ ಇಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.


Click it and Unblock the Notifications