ಅಲಕ್ ನಂದಾ ನದಿಯ ತಟದಲ್ಲಿರುವ ಶಾಂತವಾದ ಸ್ಥಳ ಶ್ರೀನಗರ. ಪೌಡಿ ಪಟ್ಟಣದಿಂದ 29 ಕಿ.ಮೀ ದೂರದಲ್ಲಿರುವ ಈ ಸ್ಥಳ ಅತ್ಯಂತ ದೊಡ್ಡದಾದ ನಗರ ಪ್ರದೇಶವಾಗಿದೆ. ವಸಾಹತು ಯುಗದ ಆರಂಭದ ಮೊದಲು ಇಲ್ಲಿ ಆಳುತ್ತಿದ್ದ ಗಡ್ವಾಲ್ ರಾಜವಂಶದ ರಾಜಧಾನಿ ಇದೇ ನಗರವಾಗಿತ್ತು. ‘ಶ್ರೀಯಂತ್ರ’ ಎಂಬ ಮಾನವನ ತ್ಯಾಗದ ಯಂತ್ರದಿಂದಾಗಿ ಈ ಸ್ಥಳಕ್ಕೆ ಈ ಹೆಸರು ಬಂದಿತು. ಈಗ ನಾವು ಕಾಣುವ ಶ್ರೀನಗರ ಪಟ್ಟಣವು 1879 ರಲ್ಲಿ ಸ್ಥಾಪನೆಯಾಯಿತು. ಹಾಗೂ ಇದು ಸುಮಾರು 7.77 ಚದರ ಕಿಲೋಮೀಟರ್ ವಿಸ್ತಾರವಾಗಿದೆ. ಚಾರ್ ಧಾಮ್ ಯಾತ್ರೆ ಯ ಒಂದು ಮುಖ್ಯ ವಿಶ್ರಾಂತಿ ಸ್ಥಳವೂ ಇದಾಗಿದೆ.
ರಘುನಾಥ ದೇವಾಲಯ, ಬುಲಿ ದೇವಾಲಯ, ಸತ್ಯನಾರಾಯಣ ದೇವಾಲಯ, ಕಂಸಮರ್ದಿನಿ ದೇವಾಲಯ, ಕಮಲೇಶ್ವರ ದೇವಾಲಯ, ಧಾರಿದೇವಿ ದೇವಾಲಯ, ಕಿಶೋರಿ ಮಠ, ಶಂಕರಮಠ ಮತ್ತು ಬದ್ರಿನಾಥ್ ಮಠ ಇಲ್ಲಿನ ಸಮೀಪದ ದೇವಾಲಯಗಳಾಗಿವೆ.


Click it and Unblock the Notifications