ಪಠಾನ್ಕೋಟ್ ನಗರದಿಂದ 21 ಕಿ.ಮೀ ದೂರದಲ್ಲಿ ನೆಲೆಸಿರುವ ಮುಕ್ತೇಶ್ವರ ದೇವಾಲಯವು ಪಂಜಾಬಿನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಬಿಳಿ ಅಮೃತ ಶಿಲೆಯಿಂದ ಮಾಡಲಾದ ಲಿಂಗವು ತಾಮ್ರದ ಯೋನಿಯಲ್ಲಿ ಸ್ಥಿತವಾಗಿದೆ. ಈ ದೇವಾಲಯದಲ್ಲಿ ವಿಷ್ಣು, ಪಾರ್ವತಿ ದೇವಿ ಹಾಗು ಗಣೇಶನ ವಿಗ್ರಹಗಳನ್ನೂ ಕಾಣಬಹುದು. ಪಾಂಡವರು ಅಜ್ಞಾತವಾಸದಲ್ಲಿ ಈ ಗುಹೆಯಲ್ಲಿ ತಂಗಿದ್ದು, ಶಿವನಿಗೆ ಗೌರವ ಸೂಚಕವಾಗಿ ಈ ದೇವಾಲಯವನ್ನು ನಿರ್ಮಿಸಿದರು ಎಂಬ ಐತಿಹ್ಯವಿದೆ.
ಈ ದೇವಾಲಯದ ಹಿಂಬದಿಯಲ್ಲಿ ಹರಿಯುವ ರಾವಿ ನದಿ ಹಾಗು ಬೆಟ್ಟಗುಡ್ಡಗಳು ಒಟ್ಟಾರೆಯಾಗಿ ಇಲ್ಲಿನ ಪರಿಸರವನ್ನು ಸುಂದರಮಯವಾಗಿ ಮಾಡುತ್ತವೆ. ಈ ದೇವಾಲಯವನ್ನು ಮುಕೇಸ್ರನ್ ಮಂದಿರ್ ಎಂಬ ನಾಮದಿಂದಲೂ ಗುರುತಿಸುತ್ತಾರೆ. 'ಮುಕೇಸ್ರನ್ ದಾ ಮೇಲಾ' ಎಂಬ ಉತ್ಸವವನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬೈಸಾಖಿ ದಿನದಂದು ಆಚರಿಸುತ್ತಾರೆ. ಕೆವಲ ಪಂಜಾಬ್ ರಾಜ್ಯ ಮಾತ್ರವಲ್ಲದೆ ಸುತ್ತಮುತ್ತಲಿರುವ ಜಮ್ಮು, ಕಾಶ್ಮೀರ್ ಹಾಗು ಹಿಮಾಚಲ ಪ್ರದೇಶಗಳಿಂದಲೂ ಭಕ್ತಾರ್ಥಿಗಳನ್ನು ಈ ದೇವಾಲಯ ಉತ್ಸವ ಹಾಗು ಶಿವರಾತ್ರಿಯ ದಿನದಂದು ಆಕರ್ಷಿಸುತ್ತದೆ. ಈ ತಾಣದ ಕುರಿತು ಇನ್ನೊಂದು ಕೌತುಕದ ವಿಷಯವೆಂದರೆ ಇಲ್ಲಿ ಹರಿದಿರುವ ರಾವಿ ನದಿಯ ಎಡ ದಂಡೆಯು ಪಂಜಾಬ್ ರಾಜ್ಯದಲ್ಲಿದ್ದರೆ, ಬಲ ದಂಡೆಯು ಜಮ್ಮು ಮತ್ತು ಕಾಶ್ಮೀರ್ ರಾಜ್ಯವಾಗಿದೆ.