ವಿದುರ ಎನ್ನುವ ಹೆಸರು ಮಹಾಭಾರತದಲ್ಲಿನ ಘನ ವ್ಯಕ್ತಿತ್ವನ್ನು ಹೊಂದಿದ ಪಾತ್ರವಾಗಿದ್ದು ಸತ್ಯ ಮತ್ತು ಸಾಧುತ್ವ ಮತ್ತು ವಿರಕ್ತಿಯನ್ನು ಹೊಂದಿರುವ ಪ್ರಾಮಾಣಿಕ ವ್ಯಕ್ತಿ. ಮಹಾಭಾರತದಲ್ಲಿ ಉಲ್ಲೇಖವಾಗಿರುವಂತೆ ವಿದುರನು ಮಹಾಭಾರತ ಯುದ್ದ ಆರಂಭವಾಗುವ ಮುನ್ನ ಪಾಂಡವರು ಮತ್ತು ಕೌರವರ ನಡುವೆ ತಮ್ಮ ತಮ್ಮ ಕುಟುಂಬದವರಿಗೆ ಮತ್ತು ಮಕ್ಕಳಿಗೆ ತೊಂದರೆಯಾಗದಂತೆ ಮತ್ತು ಅವರು ಸಾವನ್ನಪ್ಪದಂತೆ ನೋಡಿಕೊಳ್ಳಿ ಎಂದೂ ಎರಡೂ ಪಂಗಡಗಳನ್ನು ಕೇಳಿಕೊಂಡಿದ್ದ ಎನ್ನುವುದು.
ವಿದುರನ ಸ್ವಂತ ಮನೆಯು ಯುದ್ದ ನಿರತ ಸೈನಿಕರ ಕುಟುಂಬಗಳ ರಕ್ಷಣೆಗೆ ಸಾಕಾಗದೆ ಇರುವುದರಿಂದ ಅವರ ರಕ್ಷಣೆಗಾಗಿ ಪ್ರತ್ಯೇಕ ಮನೆಯನ್ನು ನಿರ್ಮಿಸಿದ. ಇದನ್ನು ವಿದುರ ಕುಟೀರ ಅಥವಾ ಆಶ್ರಮ ಎಂದು ಕರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ವಿದುರ ಮತ್ತು ದುರ್ಯೋದನ ನಡುವೆ ಮನಸ್ತಾಪ ಉಂಟಾದ ನಂತರ ತನ್ನ ಜೀವನದ ಉಳಿದ ಭಾಗವನ್ನು ಈ ಕುಟೀರದಲ್ಲೇ ನೆಲೆಸಲು ನಿರ್ಧರಿಸಿದ. ಪುರಾಣದ ಪ್ರಕಾರ ವಿದುರನ ಚುರುಕು ಬುದ್ದಿಯನ್ನು ಅರಿತ ಕೃಷ್ಣ ಪರಮಾತ್ಮ ಹಲವು ಬಾರಿ ವಿದುರ ಕುಟೀರಕ್ಕೆ ಭೇಟಿ ನೀಡಿದ್ದ.
ಕುಟೀರ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿದೆ, ಈಗ ಅದು ಧಾರಾನಗರ್ ಎಂದು ಜನಪ್ರಿಯವಾಗಿದೆ, ಇದು ಬಿಜ್ನೋರ್ ನಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ.