ಸೀತಾ ದೇವಾಲಯ, ಪ್ರಭು ಶ್ರೀರಾಮಚಂದ್ರನ ಸಹಧರ್ಮೀಣಿಯಾದ ಸೀತೆಯಿಂದ ಈ ಹೆಸರು ಬಂದಿದೆ. ದುರಂತವೆಂದರೆ ಈ ದೇವಾಲಯದಲ್ಲಿ ಸೀತಾ ಮಾತೆಯ ವಿಗ್ರಹವೆ ಇಲ್ಲದಿರುವುದು. ಇದು ಜೈಲ್ಪುರ - ಚಂದ್ರಪುರ ರಸ್ತೆಯ ನಾನೋರ್ ಎನ್ನುವ ಹಳ್ಳಿಯಿಂದ ಒಂದು ಕಿಲೋಮೀಟರ್ ದೂರದಲ್ಲಿದೆ.
ಪುರಾಣದ ಪ್ರಕಾರ, ಸೀತೆ ತನ್ನ ಜೀವನದ ಅಂತ್ಯ ಬಯಸಿ ಕೆಳಕ್ಕೆ ಹಾರಿದಾಗ ಭೂಮಿ ಬಾಯಿ ತೆರೆದು ಆಕೆಯನ್ನು ನುಂಗಿ ಬಿಡುತ್ತದೆ. ತದನಂತರ ಈ ಘಟನೆಯ ಗೌರವಾರ್ಥವಾಗಿ ಈ ಸ್ಥಳದಲ್ಲಿ ಸೀತಾ ದೇವಾಲಯನ್ನು ನಿರ್ಮಿಸಲಾಯಿತು.