ಸೌರಥ್ ಎಂಬುದು ಒಂದು ಸುಂದರವಾದ ಹಳ್ಳಿಯಾಗಿದೆ. ಸೌರತ್ ಸಭಾ ಗಚ್ಚಿಯು ಮಧುಬನಿಯಲ್ಲಿರುವ ಸೌರಥ್ನಲ್ಲಿ ನಡೆಯುವ ಒಂದು ಪ್ರಮುಖ ಉತ್ಸವವಾಗಿದೆ. ಮೈಥಿಲಿ ಬ್ರಾಹ್ಮಣರು ಈ ಉತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಸೇರುತ್ತಾರೆ. ಇಲ್ಲಿ ಅವರು ತಮ್ಮ ಮಗ ಮತ್ತು ಮಗಳಿಗೆ ಜ್ಯೋತಿಷ್ಯವನ್ನು ನೋಡಿ ಮದುವೆಯನ್ನು ನಿಶ್ಚಯ ಮಾಡುತ್ತಾರೆ.
ಕಪಿಲೇಶ್ವರಸ್ಥಾನ್ ಎಂಬುದು ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಇಲ್ಲಿ ಹಲವಾರು ಗುಡಿಗಳು ಮತ್ತು ಮಂದಿರಗಳು ನೆಲೆಗೊಂಡಿವೆ. ಭಕ್ತಾಧಿಗಳು ಇಲ್ಲಿಗೆ ವರ್ಷದ ಎಲ್ಲಾ ದಿನಗಳಲ್ಲಿ ಬಂದು ಪೂಜೆ- ಪುನಸ್ಕಾರಗಳನ್ನು ನೆರವೇರಿಸುತ್ತಿರುತ್ತಾರೆ.
ಭವಾನಿಪುರವು ದುರ್ಗಾದೇವಿಯಿಂದ ಈ ಹೆಸರನ್ನು ಪಡೆದಿದೆ. ಇದು ಇಲ್ಲಿರುವ ಸುಂದರವಾದ ದೇವಾಲಯಗಳಿಗಾಗಿ ಪ್ರವಾಸಿಗರ ವಲಯದಲ್ಲಿ ಖ್ಯಾತಿಯನ್ನು ಪಡೆದಿವೆ.
ಜೈನಗರವು ಮಧುಬನಿ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಊರಾಗಿದೆ. ಇದು ಮಧುಬನಿಯ ಪ್ರವಾಸೋದ್ಯಮದ ಒಳಭಾಗದಲ್ಲಿ ಬರುತ್ತದೆ. ಇದು ರೈಲು ನಿಲ್ದಾಣವನ್ನು ಸಹ ಹೊಂದಿದ್ದು, ನೇಪಾಳದಿಂದ ಕೇವಲ 3 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಜೈನಗರದಲ್ಲಿ ಅತ್ಯಂತ ಸುಂದರವಾದ ದೇವಾಲಯಗಳನ್ನು, ಪ್ರಾಚೀನ ಸ್ಮಾರಕಗಳನ್ನು ನಾವು ನೋಡಬಹುದು.
ಜಾಂಜರ್ ಪುರ್ ಹಿಮಾಲಯ ಪರ್ವತದ ತಪ್ಪಲಿನಲ್ಲಿ ನೆಲೆಗೊಂಡಿರುವ ಒಂದು ಹಳ್ಳಿಯಾಗಿದೆ. ಇದು ಇಲ್ಲಿನ ವನ್ಯ ಮತ್ತು ಪ್ರಾಣಿ ಸಂಪತ್ತಿಗೆ ಹೆಸರುವಾಸಿಯಾಗಿದೆ. ಜಾಂಜರ್ ಪುರದಲ್ಲಿ ಇಂದ್ರ ಪೂಜಾ ಮತ್ತು ದುರ್ಗಾಪೂಜಾಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಿಗೆ ಹೋಲಿಕೆಯು ಸಹ ಇತರೆಡೆಗಳಲ್ಲಿ ಕಂಡು...