ವಾಟ್ ಥಾಯ್ ಕುಶಿನಗರ ಚಲೇರ್ಮರಾಜ್ ದೇವಸ್ಥಾವನ್ನು ವಾಟ್ ಥಾಯ್ ದೇವಸ್ಥಾನ ಎಂದು ಕರೆಯುತ್ತಾರೆ. ಇದನ್ನು ಥಾಯ್ಲಂಡ್ ನ ಬುದ್ಧನ ಅನುಯಾಯಿಯೊಬ್ಬ ರಾಜ ಭೂಮಿಬೋಲ್ ಅಡ್ಯುಲಾದೇಜ್ ನ ಸುವರ್ಣ ಮಹೋತ್ಸವದ ನೆನಪಿಗಾಗಿ ಕಟ್ಟಿದನು ಎನ್ನಲಾಗಿದೆ.
ಇದನ್ನು 1999 ರಲ್ಲಿ ಥಾಯ್ಲಂಡ್ ನ ಸರ್ವೋಚ್ಚ ದೇಶಭಕ್ತ ಸೋಮದೇಜ ಯಂಸಂಗರ ಎಂಬುವವನಿಂದ ಉದ್ಘಾಟಿಸಲಾಯಿತು ಮತ್ತು ಇದು 2001 ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು. ಈ ದೇವಸ್ಥಾನ ಕಟ್ಟಲು ಬೇಕಾದ ಪ್ರಾಥಮಿಕ ಹಣವನ್ನು ಥಾಯ್ ನ ಬೌದ್ಧ ಜನರು ನೀಡಿದರು ಎನ್ನಲಾಗಿದೆ.
ದೇವಾಲಯವನ್ನು ಮೂಲತಃ ಕಾಡಿನಲ್ಲಿದ್ದ ಬೌದ್ಧ ಸನ್ಯಾಸಿಗಳಿಗೆಂದು ನಿರ್ಮಿಸಲಾಯಿತು. ಆದ್ದರಿಂದ ದಟ್ಟವಾದ ಮರಗಳು, ಪೊದೆಗಳು ಮತ್ತು ವಿವಿಧ ಸಸ್ಯಗಳು ನಡುವೆ ಈ ದೇವಾಲಯ ನೆಲೆಗೊಂಡಿದೆ. ಥಾಯ್ ಬೌದ್ಧರು ನಿರ್ಮಿಸಿದ ಈ ದೇವಾಲಯ ವಿಶಾಲವಾದ 10 ಎಕರೆ ಜಾಗವನ್ನು ಒಳಗೊಂಡಿದೆ. ದೇವಾಲಯದ ಪಕ್ಕದಲ್ಲಿ ಸನ್ಯಾಸಿಗಳ ಆಸ್ಪತ್ರೆ, ಉದ್ಯಾನವನ, ಶಾಲೆ ಮತ್ತು ಗ್ರಂಥಾಳಯಗಳಿವೆ.
ಇದು ಕುಶಿನಗರದ ಆಕರ್ಷಕ ಸ್ಥಳವಾಗಿದ್ದು ಪ್ರತಿ ವರ್ಷ ಥೈಲ್ಯಾಂಡ್ ನಿಂದ ಸಾವಿರಾರು ಯಾತ್ರಾರ್ಥಿಗಳು ಬರುತ್ತಾರೆ. ಇದರ ಬೃಹತ್ ರಚನೆಯನ್ನು ನಗರದ ಎಲ್ಲಾ ಭಾಗಗಳಿಂದ ಕಾಣಬಹುದು.