ಮುಕುತ ಬಂದನ ಚೈತ್ಯಾ ಅಥವಾ ಮುಕ್ತ ಬಂದನ ವಿಹಾರ ಎಂದು ಕರೆಯಲ್ಪಡುವ ರಾಮಭಾರ್ ಸ್ತೂಪ ನಿರ್ವಾಣ ದೇವಾಲಯದ ಆಗ್ನೇಯ ದಿಕ್ಕಿಗೆ ಸುಮಾರು 1.5 ಕಿ ಮೀ ಅಂತರದಲ್ಲಿದೆ. ಈ ಸ್ತೂಪವನ್ನು ಜಗತ್ತಿನಾದ್ಯಂತ ಬೌದ್ಧ ಯಾತ್ರಿಕರು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಕ್ರಿ,ಪೂ 483 ರಲ್ಲಿ ಬುದ್ಧ ಮರಣಿಸಿದ ನಂತರ ಇದೆ ಜಾಗದಲ್ಲಿ ಅಂತ್ಯಸಂಸ್ಕಾರವನ್ನು ನೆರವೆರಿಸಲಾಯಿತು ಎನ್ನಲಾಗುತ್ತದೆ.
ಬೌದ್ಧ ಗ್ರಂಥದ ಪ್ರಕಾರ, ಈ ಸ್ತೂಪವನ್ನು ಮಲ್ಲ ರಾಜರು ಕಟ್ಟಿದರು ಎನ್ನಲಾಗಿದೆ. ಅದರ ರಚನೆಯ ವಿನ್ಯಾಸವು ಪ್ರಾಚೀನ ಐತಿಹಾಸಿಕ ಪಾತ್ರಕ್ಕೆ ಸಾಕ್ಷ್ಯವಾಗಿದೆ. ಕುಶಿನಗರ -ದೆಯೋರಿಯ ವಿರುದ್ಧದ ದಿಬ್ಬದ ಮೇಲೆ ಇದನ್ನು ಕಟ್ಟಲಾಗಿದೆ. ಇದನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. 47.24 ಮೀಟರ್ ನ ವೃತಾಕಾರದ ತಳಪಾಯವಿದ್ದು,14.9 ಮೀಟರ್ ಎತ್ತರದ ಸ್ತೂಪವಿದೆ. ಇದರ ಗುಮ್ಮಟಾಕಾರದ ತುದಿಯು 34.14 ಮೀಟರ್ ಇದೆ. ಇದು ಕೃಷಿ ಭೂಮಿಯ ಭಾಗದಲ್ಲಿ ಇದ್ದು ಇಲ್ಲಿ ಅಕ್ಕಿ,ಕಬ್ಬು ಮತ್ತು ಗೋಧಿ ಬೆಳೆಯ ಭೂಮಿಯನ್ನು ಕಾಣಬಹುದು. ಇದರ ಹತ್ತಿರದಲ್ಲೇ ಕೊಳವಿದೆ.