ಹೆಸರೇ ಹೇಳುವಂತೆ ಈ ದೇವಾಲಯ ಇಂಡೋ - ಜಪಾನ್ ಮತ್ತು ಶ್ರೀಲಂಕಾದ ಭಕ್ತರಿಂದ ಕಟ್ಟಿದುದಾಗಿದೆ. ಇಲ್ಲಿರುವ 8 ಮಿಶ್ರಲೋಹದ ವಿಗ್ರಹವನ್ನು ಜಪಾನಿನಿಂದ ತರಲಾಗಿದ್ದು ಇದರ ರಚನೆಯು ಜಪಾನಿನ ರಾಜಪ್ರಭುತ್ವ ಹೋಲುತ್ತದೆ. ಇದನ್ನು ಜಪಾನಿನಿಂದ ತಂದಾಗ 2 ಭಾಗಗಳಾಗಿತ್ತು ಇದನ್ನು ನಂತರ ಒಂದು ಭಾಗವಾಗಿ ಮಾಡಲಾಯಿತು.
ಇದನ್ನು ವಿಶ್ವ ಬೌದ್ಧ ಸಾಂಸ್ಕೃತಿಕ ಅಸೋಷಿಯೇಶನ್ 'ಅಟ್ಟಾಗೊ ಇಶ್ಶೀನ್' ಅವರು ನಿರ್ಮಿಸಿದ್ದರೆ, ಮೇಲೆ ತಿಳಿಸಿದಂತೆ ಜಪಾನಿ ರಾಜನು ಇದರ ವೆಚ್ಚವನ್ನು ಭರಿಸಿದರು. ಬುದ್ಧನ ಅಷ್ಟಧಾತುವಿನ ವಿಗ್ರಹವನ್ನು ಒಂದು ಭವ್ಯವಾದ ವೃತ್ತಾಕಾರದ ಕೊಠಡಿಯಲ್ಲಿ ಇರಿಸಲಾಗಿದೆ. ಬಣ್ಣ ಲೇಪಿತ ಗಾಜಿನ ಕಿಟಕಿಗಳ ಮೂಲಕ ಒಂದು ಸಣ್ಣ ಬೆಳಕಿನ ಕಿರಣವು ಪ್ರತಿಮೆಯ ಮೇಲೆ ಬೀಳುವ ಹಾಗೆ ಮಾಡಲಾಗಿದ್ದು, ಅನನ್ಯ ಆಧ್ಯಾತ್ಮಿಕ ತೇಜಸ್ಸು ಮತ್ತು ಶಾಂತಿಯುತ ಪರಿಸರದ ಅನುಭವ ದೊರಕುವಂತೆ ನಿರ್ಮಿಸಲಾಗಿದೆ. ಆರಾಧ್ಯ ದೇವಾಲಯದಲ್ಲಿ ಬುದ್ಧನ ಪ್ರತಿಮೆಯ ಬಳಿ ಜಪಾನಿಗರು ತಮ್ಮ ಶೈಲಿಯಲ್ಲಿ ಚಿತ್ರಿಸಲಾದ ಬುದ್ಧನ ಮುಖ್ಯ 10 ಭಿಕ್ಷುಗಳ ಚಿತ್ರಣಗಳನ್ನು ಕಾಣಬಹುದು.