ಅಂಬಾಲ ರಸ್ತೆಯಲ್ಲಿ ಪೆಹೊವಾದಿಂದ 6 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಒಂದು ಪ್ರಮುಖವಾದ ತೀರ್ಥವಾಗಿದೆ. ಇದು ಮಹಾಭಾರತ ಕಾಲದಷ್ಟು ಹಿಂದಿನ ತೀರ್ಥವಾಗಿದ್ದು, ವಿಶ್ವಾಮಿತ್ರ ಮತ್ತು ವಶಿಷ್ಠರಿಗೆ ಸಂಬಂಧಪಟ್ಟದ್ದಾಗಿದೆ. ಈ ತೀರ್ಥದ ಮತ್ತೊಂದು ವಿಶೇಷವೆಂದರೆ ಇದು ಸರಸ್ವತಿ ಮತ್ತು ಅರುಣ ನದಿಗಳ ಸಂಗಮ ಸ್ಥಾನವಾಗಿದೆ. ಮಹಾಭಾರತ ಮತ್ತು ವಾಮನ ಪುರಾಣಗಳಲ್ಲಿ ಇದರ ಬಗ್ಗೆ ಉಲ್ಲೇಖಗಳು ಇವೆ. ಇಂದು ಇದು ಸಂಗಮೇಶ್ವರ್ ಮಹಾದೇವ್ ದೇವಾಲಯವೆಂಬ ಪ್ರಸಿದ್ಧ ಶೈವ ಧಾರ್ಮಿಕ ಕೇಂದ್ರವಾಗಿದೆ. ಈ ದೇವಾಲಯವು ಒಂದು ಸಣ್ಣ ಕಲ್ಯಾಣಿಯನ್ನು ಹೊಂದಿದ್ದು, ಪ್ರತಿ ವರ್ಷ ಸಾವಿರಾರು ಯಾತ್ರಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ.


Click it and Unblock the Notifications