ಬ್ರಹ್ಮ ಸರೋವರ್ ಕಲ್ಯಾಣಿಯು ಥಾನೇಶ್ವರದಲ್ಲಿ ನೆಲೆಗೊಂಡಿದೆ. ಪುರಾಣದ ಪ್ರಕಾರ ಬ್ರಹ್ಮದೇವನು ಒಂದು ದೊಡ್ಡ ಯಾಗವನ್ನು ಮಾಡುವ ಸಲುವಾಗಿ ಕುರುಕ್ಷೇತ್ರವನ್ನು ನಿರ್ಮಿಸಿದನಂತೆ. ಈ ಕಲ್ಯಾಣಿಯಲ್ಲಿ ಈಶ್ವರನ ಮೂರ್ತಿಯಿದೆ. ಒಂದು ಸೇತುವೆಯ ಮೂಲಕ ಮೂರ್ತಿಯ ಬಳಿಗೆ ನಾವು ತಲುಪಬಹುದು. ಪ್ರತಿ ವರ್ಷ ನವೆಂಬರ್ ಕಡೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಇಲ್ಲಿ ಗೀತಾ ಜಯಂತಿ ನಡೆಯುತ್ತದೆ. ಆಗ "ದೀಪ್ ದಾನ್" ( ನೀರಿನಲ್ಲಿ ಹಣತೆಗಳನ್ನು ತೇಲಿ ಬಿಡುವುದು) ಮತ್ತು "ಆರತಿ" ಸೇವೆಯನ್ನು ನಡೆಸಲಾಗುತ್ತದೆ. ಈ ಕಲ್ಯಾಣಿಯಲ್ಲಿ ಸ್ನಾನ ಮಾಡುವುದರಿಂದ ಅಶ್ವಮೇಧ ಯಾಗ ಮಾಡಿದಾಗ ಸಿಗುವ ಪುಣ್ಯವನ್ನು ಸಂಪಾದಿಸಬಹುದು.
ಈ ಕಲ್ಯಾಣಿಯು ಇಂದು ನವೀಕರಣಗೊಂಡಿದ್ದು, 1800 ಅಡಿ ಉದ್ದ ಮತ್ತು 1400 ಅಡಿ ಅಗಲವಿದೆ. ಇಲ್ಲಿ ನಡೆಯುವ ಗೀತಾಜಯಂತಿಯ ದಿನದಂದು ಮತ್ತು ಸೂರ್ಯಗ್ರಹಣಗಳ ದಿನದಂದು ಇಲ್ಲಿ ಭಾರೀ ಜನ ಸೇರುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಇಲ್ಲಿಗೆ ಕೆಲವು ವಲಸೆ ಹಕ್ಕಿಗಳು ದೂರದಿಂದ ಬರುತ್ತವೆ.