1834 ರಲ್ಲಿ ಕಟ್ಟಲಾದ ಈ ದೇವಾಲಯಲ್ಲಿ ಆರನೆಯ ತೀರ್ಥಂಕರ ಪದ್ಮ ಪ್ರಭನ ಪೂಜೆಗೆ ನಿರ್ಮಿಸಲಾಗಿದೆ. ಈ ದೇವಾಲಯ ಭಾರತದಾದ್ಯಂತದ ಜೈನರಿಗೆ ಪ್ರಮುಖವಾದ ದೇವಾಲಯವಾಗಿದೆ. ಶ್ವೇತಾಂಬರರ ದೇವಾಲಯಗಳು ಮಹಾವೀರನ ಅವಧಿಯದ್ದಾಗಿವೆ. ಈ ಸ್ಥಳದಲ್ಲಿರುವ ಈ ಪವಿತ್ರವಾದ ದೇವಾಲಯಗಳನ್ನು ಮಹಾವೀರನು ಇಲ್ಲಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಹಾಗೂ ಆತನ ಬೋಧನೆಯ ಅವಧಿಗಳಲ್ಲಿ ಕಟ್ಟಲಾಗಿದೆ.
ಇಲ್ಲಿನ ದೇವಾಲಯದ ಸೂಕ್ಷ್ಮ ಕೆತ್ತನೆಗಳು ಬಹಳವೇ ಸುಂದರವಾಗಿವೆ ಹಾಗೂ ಆ ಅವಧಿಯ ಕೆತ್ತನೆಗಾರರ ಕೆಲಸದ ನೈಪುಣ್ಯತೆಯನ್ನು ತೋರಿಸುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಮೂವತ್ತು ಸೆಂಟೀಮೀಟರ್ ಎತ್ತರದ ಪದ್ರ್ಮ ಪ್ರಭ ದೇವರ ಬಿಳಿಯ ವಿಗ್ರಹ. ಬಹಳ ಶಾಂತ ಮುಖಭಾವದ್ದು ಹಾಗೂ ಪ್ರಶಾಂತವಾಗಿ ಕಾಣಿಸುತ್ತದೆ. ಇದನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿ ತೀರ್ಥಂಕರರ ಪಾದದ ಅಚ್ಚುಗಳಿವೆ.
ಇಲ್ಲಿ ಹಳೆಯ ಇಪ್ಪತ್ತು ಬಾಗಿಲುಗಳಿರುವ ಕೋಟೆಯೂ ಇದೆ. ಇದನ್ನು ಮಹಾರಾಣಿ ಮೃಗವತಿ ಕಟ್ಟಿದ್ದು ಈಗ ಇದು ವಿನಾಶದ ಅಂಚಿನಲ್ಲಿದೆ. ಇದು ಯಮುನಾ ನದಿಯ ದಡದಲ್ಲಿದ್ದು ಗಾಢ್ವಾ ಕುಶಾಲ್ ನಗರದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿದೆ.