ಕಾರಂಜಿಯಾದಿಂದ 40 ಕಿ.ಮೀ. ದೂರದಲ್ಲಿರುವ ಭೀಮಕುಂಡ ನೈಸರ್ಗಿಕ ಜಲಾಶಯ. ವ್ಯಾಪಕ ನೈಸರ್ಗಿಕ ಸೌಂದರ್ಯ ಪ್ರದೇಶದಲ್ಲಿರುವ ಜಲಾಶಯವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದ್ರೌಪತಿಯೊಂದಿಗೆ ಇಲ್ಲಿನ ಅರಣ್ಯಗಳಲ್ಲಿ ತೆರಳುತ್ತಿದ್ದಾಗ ಪಾಂಡವರಲ್ಲಿ ಎರಡನೇಯವನಾದ ಭೀಮನು ಇಲ್ಲಿ ಸ್ನಾನ ಮಾಡಿದ ಎಂದು ಪುರಾಣಗಳಲ್ಲಿದೆ. ಇದುವರೆಗೆ ಈ ಪ್ರದೇಶವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದು, ಪ್ರತೀ ಜನವರಿಯಲ್ಲಿ ಬರುವ ಮಕರ ಸಂಕ್ರಾಂತಿಯಂದು ಭಾರೀ ಸಂಖ್ಯೆಯಲ್ಲಿ ಜನರು ಬಂದು ಪವಿತ್ರ ಸ್ನಾನಗೈಯುತ್ತಾರೆ.
ಈ ವೇಳೆ ಮಕರ ಮೇಳವನ್ನು ಆಯೋಜಿಸಲಾಗುತ್ತದೆ. ಜಲಾಶಯದ ಸಮೀಪದಲ್ಲೇ ಕುಂದೇಶ್ವರ ಎನ್ನುವ ಶಿವನ ಮಂದಿರವಿದೆ. ಇಲ್ಲೇ ಇರುವ ಮತ್ತೊಂದು ಮಂದಿರ ರಂಗಬುರುಗೆ ಭೇಟಿ ನೀಡುವ ಸ್ಥಳೀಯ ಬುಡಕಟ್ಟು ಜನಾಂಗದವರು ರಂಗಬುರು ಮಾತೆಯನ್ನು ಆರಾಧಿಸುತ್ತಾರೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಪಿಕ್ನಿಕ್ ಗೆ ಹೇಳಿಮಾಡಿಸಿದಂತಿದೆ.


Click it and Unblock the Notifications