ಮಯುರಭಂಜ್ ಜಿಲ್ಲೆಯ ಬರಿಪಾದದಲ್ಲಿರುವ ಜಗನ್ನಾಥ ಮಂದಿರವು ಕಾರಂಜಿಯಾದಿಂದ 133 ಕಿ.ಮೀ. ದೂರದಲ್ಲಿದೆ. ಇದನ್ನು ಹರಿಬಲದೇವ್ ಮಂದಿರವೆಂದೂ ಕರೆಯುತ್ತಾರೆ. ಮಂದಿರದೊಳಗೆ ಪತ್ತೆಯಾಗಿರುವ ಕೆಲವು ಶಿಲಾಶಾಸನಗಳಿಂದ ಮಂದಿರವನ್ನು 1497ರಲ್ಲಿ ಭನ್ಜ ಆಡಳಿತಗಾರರು ಸ್ಥಾಪಿಸಿದರೆಂಬ ಉಲ್ಲೇಖವಿದೆ.
ಜಂಬುಮಣ್ಣಿನ ಕಲ್ಲಿನಿಂದ ನಿರ್ಮಾಣವಾಗಿರುವ ಈ ಮಂದಿರದ ಆವರಣ ಗೋಡೆಯು ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಪ್ರತಿರೂಪದಂತೆ ಇದೆ. ಜಗನ್ನಾಥ ದೇವರ ಮೂರ್ತಿಯೊಂದಿಗೆ ಇಲ್ಲಿ 17 ಇತರ ದೇವರುಗಳ ಮೂರ್ತಿಗಳಿವೆ. ದೇವಾಲಯದ ಒಳಗಿರುವ ಸಣ್ಣ ಸಣ್ಣ ಕೊಠಡಿಗಳಲ್ಲಿ ಈ ಮೂರ್ತಿಗಳಿವೆ.
ರಥಯಾತ್ರೆಯನ್ನು ಇಲ್ಲಿ ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲೇ ಸಮೀಪದಲ್ಲಿರುವ ರಾಧಾಮೋಹನ ಮಂದಿರವು ರಥಯಾತ್ರೆ ವೇಳೆ ಗುಂಡಿಚಾ ಮಂದಿರದ ಪಾತ್ರವನ್ನು ನಿರ್ವಹಿಸುತ್ತದೆ. ರಾಧಾಮೋಹನ ಮಂದಿರವು ತುಂಬಾ ಪುರಾತನವಾಗಿದೆ ಮತ್ತು ಇದರ ಗೋಡೆಗಳಲ್ಲಿ ಹಲವಾರು ವರ್ಣಚಿತ್ರಗಳನ್ನು ಈಗಲೂ ಕಾಣಬಹುದಾಗಿದೆ.