ಬಸ್ಪ ನದಿ ದಂಡೆಯ ಮೇಲಿರುವ ಪ್ರಧಾನ ಹಳ್ಳಿಗಳಲ್ಲಿ ಬತ್ಸೇರಿ ಕೂಡ ಒಂದು. ತೊರೆಯೊಂದಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ಸಾಂಪ್ರದಾಯಿಕ ಸೇತುವೆಯನ್ನು ದಾಟಿಕೊಂಡು ಬತ್ಸೇರಿಯನ್ನು ತಲುಪಬೇಕು. ಈ ಸೇತುವೆಯನ್ನು ತುದಿಯೊಂದಕ್ಕೆ ಕಟ್ಟಲಾಗಿರುವ ಮರದ ಕೊರಡಿನಿಂದ ಮಾಡಿದ್ದಾರೆ. ವಿಭಿನ್ನವಾದ ಕಟ್ಟಡಗಳು, ಕಚ್ಚಾ ರಸ್ತೆಗಳು ಮತ್ತು ಬದ್ರಿ ನಾರಾಯಣ ದೇವಸ್ಥಾನ ಬತ್ಸೇರಿ ಹಳ್ಳಿಯ ಪ್ರಮುಖ ಆಕರ್ಷಣೆಗಳು. ಊರ ಹೆಬ್ಬಾಗಿಲಿನಲ್ಲಿ ಚಿಕ್ಕ ಸ್ತೂಪವೊಂದಿದ್ದು ಇದು ದುಷ್ಟ ಶಕ್ತಿಗಳಿಂದ ಹಳ್ಳಿಯನ್ನು ರಕ್ಷಿಸುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ಪ್ರಾದೇಶಿಕ ಭಾಷೆಯಲ್ಲಿ ಕರೆಯಲ್ಪಡುವ ಕತ್ಕುಂಡಿ ಅಥವಾ ಕತ್ಕುಣಿ ಎನ್ನುವ ಸುಂದರ ಸಾಂಪ್ರದಾಯಿಕ ವಾಸ್ತುಶಿಲ್ಪ ಕಲಾಕೃತಿಗಳನ್ನು ಕಲಾಪ್ರಿಯರು ಇಲ್ಲಿ ಕಾಣಬಹುದು. ಮರದ ಕೊರಡುಗಳಿಂದ ಮಾಡಲಾದ ಇವು ವಿಭಿನ್ನವಾಗಿರುತ್ತವೆ. ಈ ರೀತಿಯ ಕಲಾಕೃತಿಗಳಲ್ಲಿ ಲಂಬ ರೀತಿಯ ಸಾಲುಗಳು ಸೇರಿಕೊಂಡಿರುವುದಿಲ್ಲ. ಈ ಹಳ್ಳಿಯ ಸಾನ್ನಿಧ್ಯದಲ್ಲಿ ಬುದ್ದ ದೇವನ ದೇವಸ್ಥಾನವೊಂದು ಇರುವುದನ್ನು ಪ್ರವಾಸಿಗರು ಗಮನಿಸಬಹುದು.


Click it and Unblock the Notifications