ಪಟ್ಟಣದ ಮಧ್ಯ ಭಾಗದಲ್ಲಿರುವ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕಾಳಹಸ್ತಿಯಲ್ಲಿ ಸುಬ್ರಹ್ಮಣ್ಯಸ್ವಾಮಿಯೇ ಮೂಲ ದೇವರು. ದೇವಾಲಯಕ್ಕೆ ರಸ್ತೆ ಸಂಪರ್ಕ ಸುಗಮವಾಗಿದೆ. ವರ್ಷಕ್ಕೊಮ್ಮೆ ಅಪಾರ ಭಕ್ತಿ, ಶ್ರದ್ಧೆಗಳಿಂದ ಆಚರಿಸಲ್ಪಡುವ ಆದಿ ಕೀರ್ತಕ ಉತ್ಸವದಿಂದಲೇ ದೇವಸ್ಥಾನ ಚಿರಪರಿಚಿತ. 8 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಸಂಗೀತ, ನೃತ್ಯ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆಯುತ್ತವೆ. ದೇವಸ್ಥಾನದ ಆವರಣವಿಡೀ ಝಗಮಗಿಸುವ ದೀಪಗಳು, ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿರುತ್ತದೆ. ಉತ್ಸವದ ಕಡೆ ದಿನದಂದು ಸಪತ್ನಿಯರಾದ ವಲ್ಲಿ ಮತ್ತು ದೇವಸೇನಾ ಸಮೇತ ಸುಬ್ರಹ್ಮಣ್ಯಸ್ವಾಮಿಯ ರಥೋತ್ಸವ ನಡೆಯುತ್ತದೆ. ಪಟ್ಟಣದಾದ್ಯಂತ ಸ್ವಾಮಿಯ ಮೆರವಣಿಗೆ ಮಾಡಲಾಗುತ್ತದೆ. ಉತ್ಸವದಲ್ಲಿ ನೂರಾರು ಮಂದಿ ಭಾಗವಹಿಸಿ ಸಂಭ್ರಮಿಸುತ್ತಾರೆ.


Click it and Unblock the Notifications