ಶಿವನು ನಾಲ್ಕು ದಿಕ್ಕುಗಳನ್ನೂ ದಿಟ್ಟಿಸುತ್ತಿರುವಂತೆ ಭಾಸವಾಗುವ ಚತುರ್ಮುಕೇಶ್ವರ ದೇವಸ್ಥಾನದ ಐತಿಹ್ಯ ರೋಚಕವಾಗಿದೆ. ಈ ದೇವಸ್ಥಾನದಲ್ಲಿ ತನ್ನ ಪಾಪಗಳ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬ್ರಹ್ಮ ಬರುತ್ತಾನೆ. ಪಾಪವೇನೋ ಕಳೆಯುತ್ತದೆ. ಆದರೆ, ಅಖಂಡ ಬ್ರಹ್ಮಾಂಡವನ್ನೇ ಸೃಷ್ಟಿಸಬಹುದಾದ ಆತನ ಅಗೋಚರ ಶಕ್ತಿಗಳೆಲ್ಲವೂ ಮಾಯವಾಗುತ್ತವೆ. ಆಗ, ವಿಚಲಿತನಾದ ಬ್ರಹ್ಮನು ಚತುರ್ಮುಖೇಶ್ವರನನ್ನು ಧ್ಯಾನಿಸಿದಾಗ, ಬ್ರಹ್ಮನಿಗೆ ತನ್ನ ದೈವೀಶಕ್ತಿ ಮರುಕಳಿಸಿತಂತೆ. ಅದರ ಫಲವೇ ಬ್ರಹ್ಮಾಂಡದ ಸೃಷ್ಟಿ ಎಂಬುದು ಪ್ರತೀತಿ. ಹೀಗಾಗಿ, ಶಿವ ಮತ್ತು ಬ್ರಹ್ಮ ದೇವರ ಮೂರ್ತಿಗಳನ್ನು ಇಲ್ಲಿ ಪೂಜಿಸಲಾಗುತ್ತದೆ. ಶೈವ ಧರ್ಮದ ಭಕ್ತರು ಈ ಸ್ಥಳಕ್ಕೆ ವರ್ಷಕ್ಕೊಮ್ಮೆ ಭೇಟಿ ನೀಡುತ್ತಾರೆ. ದೇವಸ್ಥಾನದ ಪ್ರತಿ ಗೋಡೆಗಳ ಮೇಲೂ ಶಿವನ ಜೀವನಚರಿತ್ರೆ, ಆತನ ಲೀಲೆಗಳು, ದೈವೀ ಶಕ್ತಿ ಕುರಿತು ಉಲ್ಲೇಖಿಸಲಾಗಿದೆ.


Click it and Unblock the Notifications