ಕೃಷ್ಣಪುರ ಛಾತ್ರಿಯು ಖಾನ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇಲ್ಲಿ ಹೋಳ್ಕರ್ ರಾಜಮನೆತನದ ಸದಸ್ಯರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಈ ಛಾತ್ರಿಯ ವಿಶೇಷತೆಯು ಇಲ್ಲಿನ ಅಧ್ಬುತ ಕಲಾವೈಭವದಲ್ಲಿ ಅಡಗಿದೆ. ಈ ಸಮಾಧಿಗಳನ್ನು ಮರಾಠ ವಾಸ್ತುಶಿಲ್ಪದ ಮಾದರಿಯಲ್ಲಿ ರಚಿಸಲಾಗಿದೆ. ಇವುಗಳ ಗುಮ್ಮಟಗಳು ಮತ್ತು ಗೋಪುರಗಳು ಅತ್ಯಂತ ಸುಂದರವಾಗಿದ್ದು, ಇಂದಿಗು ನೋಡುಗರನ್ನು ಆಕರ್ಷಿಸುವ ಮಟ್ಟಿಗೆ ತಮ್ಮ ತಾಜಾತನವನ್ನು ಉಳಿಸಿಕೊಂಡಿವೆ. ಹಾಗಾಗಿ ಇಂದಿಗು ಜನರು ಈ ಅದ್ಭುತ ವಾಸ್ತುಶಿಲ್ಪದ ವೈಭವವನ್ನು ನೋಡಲು ಆಗಮಿಸುತ್ತಿರುತ್ತಾರೆ. ರಾತ್ರಿಯ ಸಮಯದಲ್ಲಿ ಈ ಛಾತ್ರಿಯನ್ನು ದೀಪಗಳಿಂದ ಬೆಳಗಲಾಗುತ್ತದೆ. ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಇಲ್ಲಿ ನೀರಿನ ಕಾರಂಜಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಇಲ್ಲಿ ಒಂದು ಉದ್ಯಾನವನ್ನು ಸಹ ನಿರ್ಮಿಸಲಾಗಿದೆ.